ಆ್ಯಪ್ನಗರ

ಬೀದರ್‌ನಲ್ಲಿ ಬಿದ್ದ ಖಂಡ್ರೆ, ಖೂಬಾಗೆ 1 ಲಕ್ಷ ಮತಗಳ ಅಂತರದಿಂದ ಭಾರಿ ಗೆಲುವು

ಬಿಜೆಪಿ ಬೀದರ್‌ ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದು, 91, 016 ಮತಗಳಿಂದ ಭಗವಂತ ಖೂಬಾ ಮುನ್ನಡೆ ಸಾಧಿಸಿದ್ದಾರೆ. ಈಶ್ವರ್ ಖಂಡ್ರೆಗೆ 39,7622 ಮತಗಳು ಲಭಿಸಿವೆ. ಮತಗಣನೆ ಮುಂದುವರಿದಿದೆ.

Vijaya Karnataka Web 23 May 2019, 6:09 pm
ಬೀದರ್‌: ಬಿಜೆಪಿ ಬೀದರ್‌ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆಗೆ ಭಾರಿ ಮುಖಭಂಗವಾಗಿದೆ. 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬ ವಿರುದ್ಧ ಸೋಲನುಭವಿಸಿದ್ದಾರೆ.
Vijaya Karnataka Web Khandre Khooba


ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ 5,85,471 ಮತಗಳು ಲಭ್ಯಾವಾಗಿದ್ದು, ಸಮೀಪದ ಸ್ಪರ್ಧಿ ಕಾಂಗ್ರೆಸ್ ನ ಈಶ್ಚರ ಖಂಡ್ರೆ ಅವರಿಗೆ 4,68,637 ಮತಗಳು ಸಿಕ್ಕಿವೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಪಕ್ಷಗಳ ಅಭ್ಯರ್ಥಿ ಈಶ್ವರ್‌ ಖಂಡ್ರೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಭಗವಂತ ಖೂಬಾ ನಡುವೆ ನೇರ ಹಣಾಹಣಿಯತ್ತು. ಇಬ್ಬರಿಗೂ ಇದು ಪ್ರತಿಷ್ಠೆಯ ಕಣವಾಗಿತ್ತು. ಇದೇ ಮೊದಲ ಬಾರಿಗೆ ಇಬ್ಬರ ನಡುವೆ ನೇರ ಹಣಾಹಣಿಯ ಸ್ಥಿತಿ ನಿರ್ಮಾಣವಾಗಿತ್ತು.

ಬೀದರ್‌ ಲೋಕಸಭೆ ಕ್ಷೇತ್ರದಲ್ಲಿ ಖಂಡ್ರೆ ಮತ್ತು ಖೂಬಾ ನಡುವಣ ಕುಸ್ತಿಯಲ್ಲಿ ಗೆಲುವನ್ನು ಕಸಿಯಲು ಬಿಎಸ್ಪಿಯ ಬಾಬಾ ಬುಖಾರಿ ಹಾಗೂ ವಿವಿಧ ಪಕ್ಷಗಳ ಹಾಗೂ ಪಕ್ಷೇತರರು ಸೇರಿ ಒಟ್ಟು 22 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಇಷ್ಟು ಜನರಲ್ಲಿ ಯಾರು ಗೆಲ್ಲುವವರು ಎನ್ನುವ ಬಹು ದಿನಗಳ ನಿರೀಕ್ಷೆಗೆ ಇಂದು ಮುದ್ರೆ ಬಿದ್ದಿದೆ. ಈ ಬಾರಿ ಶೇ. 62.58 ರಷ್ಟು ಮತದಾನವಾಗಿದೆ. 17.73 ಲಕ್ಷ ಮತದಾರರ ಪೈಕಿ 11.10 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ.

ಕರ್ನಾಟಕ ರಿಸಲ್ಟ್: ಮತದಾರರ ಒಲವು ದೋಸ್ತಿಗೋ, ಕಮಲಕ್ಕೋ?

ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಬಿವಿ ಭೂಮರೆಡ್ಡಿ ಪದವಿ ಕಾಲೇಜಿನಲ್ಲಿ ಬೆಳಗ್ಗೆ 8 ರಿಂದ ಮತ ಎಣಿಕೆ ನಡೆಯಿತು. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಈ ಬಾರಿ ಇವಿಎಂ ಮತಯಂತ್ರಗಳೊಂದಿಗೆ 8 ವಿಧಾನಸಭಾ ಕ್ಷೇತ್ರಗಳ ತಲಾ ಐದು ಮತಗಟ್ಟೆಗಳ ವಿವಿ ಪ್ಯಾಟ್‌ ಬ್ಯಾಲೆಟ್‌ಗಳನ್ನೂ ಎಣಿಕೆ ಮಾಡುವುದರಿಂದ ಮಧ್ಯಾಹ್ನದ ಬಳಿಕ ಫಲಿತಾಂಶ ಹೊರ ಬೀಳುವ ನಿರೀಕ್ಷೆಯಿತ್ತು. ಆದರೆ, ಸಂಜೆಯ ವೇಳೆ ಗೆದ್ದವರು ಯಾರು ಎಂಬುದು ನಿಚ್ಚಳವಾಯಿತು. 1600 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 400 ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿತ್ತು.

ಇದೇ ಮೊದಲ ಬಾರಿ ಈ ರೀತಿಯ ಹಣಾ ಹಣಿ ಕಾಣುವಂತಾಗಿದೆ. ಗ್ರಾಮ ಮಟ್ಟದಲ್ಲೂ ಪ್ರಚಾರ ನಡೆಸಲಾಗಿದ್ದು, ಮತದಾನವು ಉತ್ತಮ ರೀತಿಯಲ್ಲೇ ಆಗಿದೆ. ಹೀಗಾಗಿ, ಯಾರೇ ಗೆದ್ದರೂ ಕಡಿಮೆ ಅಂತರದಲ್ಲೇ ಗೆಲ್ಲಲಿದ್ದಾರೆ ಎನ್ನುವುದು ಚುನಾವಣಾ ವಿಶ್ಲೇಷಕರ ಅಭಿಪ್ರಾಯವಾಗಿತ್ತು. ಮತಗಟ್ಟೆಯ ಸಮೀಕ್ಷೆಗಳು ಒಂದು ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದು, ಮತ್ತೊಂದು ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದೆ.

ಇಬ್ಬರಿಗೂ ಭಾರಿ ಪ್ರತಿಷ್ಠೆ: ಒಂದೆಡೆ ಹಾಲಿ ಸಂಸದ ಭಗವಂತ ಖೂಬಾ ಮತ್ತೊಂದೆಡೆ ಕೆಪಿಸಿಸಿ ಕಾರಾರ‍ಯಧ್ಯಕ್ಷ, ಮಾಜಿ ಸಚಿವ, ಹಾಲಿ ಶಾಸಕ ಈಶ್ವರ್‌ ಖಂಡ್ರೆ ಅವರು ಕಣದಲ್ಲಿರುವುದರಿಂದ ಈ ಬಾರಿಯ ಕಣ ಪ್ರತಿಷ್ಠೆಯಾಗಿ ಮಾರ್ಪಟ್ಟಿತ್ತು. ಎರಡೂ ಕಡೆಯಿಂದ ಮಾತಿನ ಸಮರವೇ ನಡೆದಿತ್ತು. ಆಯಾ ಪಕ್ಷಗಳಿಂದ ಅತಿರಥ, ಮಹಾರಥರೆಲ್ಲರೂ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದರು. ಕಡೆಯವರೆಗೂ ಮತದಾರ ತನ್ನ ಗುಟ್ಟು ಬಿಟ್ಟಿರಲಿಲ್ಲ. ಹಾಗಂತ ಅಭ್ಯರ್ಥಿಗಳು ಮನವೊಲಿಸುವ ಪಟ್ಟೂ ಬಿಟ್ಟಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ