ಆ್ಯಪ್ನಗರ

ಐಟಿ ದಾಳಿಯೇನೂ ಭಯೋತ್ಪಾದಕರ ದಾಳಿಯಲ್ಲ: ಮಂಡ್ಯದಲ್ಲಿ ಸಿ.ಟಿ ರವಿ

ಮಂಡ್ಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಹುಗಾರಿಕೆ ಇಲಾಖೆಯ ಮಾಹಿತಿ ಆಧರಿಸಿ ರಾಜ್ಯದಲ್ಲಿ ಐಟಿ ದಾಳಿ ನಡೆದಿದೆ. ನೂರಾರು ಕೊಟಿ ರೂ.ಗಳನ್ನು ಗುತ್ತಿಗೆದಾರರಿಗೆ ಬಿಲ್ ಮಾಡಿಕೊಡಲಾಗಿದೆ. ಹೆಚ್ಚುವರಿಯಾಗಿಯೂ ಹಣ ಡ್ರಾ ಮಾಡಲಾಗಿದೆ. ಇದು ಚುನಾವಣಾ ಅಕ್ರಮಕ್ಕೆ ಬಳಕೆಯಾಗಬಹುದೆಂಬ ಸಂಶಯದಿಂದ ನಡೆದಿರುವ ದಾಳಿ ಇದಾಗಿದೆ. ಇದು ಭಯೋತ್ಪಾದಕರ ದಾಳಿ ಅಲ್ಲವಲ್ಲ ಎಂದು ಮರು ಪ್ರಶ್ನೆ ಹಾಕಿದರು.

Vijaya Karnataka Web 30 Mar 2019, 6:06 pm
ಮಂಡ್ಯ: ಐಟಿ ದಾಳಿ ರಾಜಕೀಯ ಪ್ರೇರಿತ ದಾಳಿ ಎಂದು ಬೊಬ್ಬೆ ಹೊಡೆಯಲು ಅದೇನೂ ಭಯೋತ್ಪಾದಕರ ದಾಳಿಯಲ್ಲ. ದಾಳಿ ಬೇಡವನ್ನೆಲು ಅವರೇನು ಸಂವಿಧಾನಾತೀತರೆ? ನಿಜವಾದ ಭಯೋತ್ಪಾದಕರಿಂದ ದಾಳಿ ನಡೆದಾಗ ಬೀದಿಗಿಳಿಯದವರು ಈಗ ಬೀದಿಗೆ ಬಂದಿರುವುದನ್ನು ನೋಡಿದರೆ ಜನರಿಗೆ ಇವರೇನು ಸಂದೇಶ ಕೊಡಲು ಹೊರಟಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
Vijaya Karnataka Web CT Ravi


ಮಂಡ್ಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಹುಗಾರಿಕೆ ಇಲಾಖೆಯ ಮಾಹಿತಿ ಆಧರಿಸಿ ರಾಜ್ಯದಲ್ಲಿ ಐಟಿ ದಾಳಿ ನಡೆದಿದೆ. ನೂರಾರು ಕೊಟಿ ರೂ.ಗಳನ್ನು ಗುತ್ತಿಗೆದಾರರಿಗೆ ಬಿಲ್ ಮಾಡಿಕೊಡಲಾಗಿದೆ. ಹೆಚ್ಚುವರಿಯಾಗಿಯೂ ಹಣ ಡ್ರಾ ಮಾಡಲಾಗಿದೆ. ಇದು ಚುನಾವಣಾ ಅಕ್ರಮಕ್ಕೆ ಬಳಕೆಯಾಗಬಹುದೆಂಬ ಸಂಶಯದಿಂದ ನಡೆದಿರುವ ದಾಳಿ ಇದಾಗಿದೆ. ಇದು ಭಯೋತ್ಪಾದಕರ ದಾಳಿ ಅಲ್ಲವಲ್ಲ ಎಂದು ಮರು ಪ್ರಶ್ನೆ ಹಾಕಿದರು.

ಬೀದಿಗಿಳಿಯುವ ಮೂಲಕ ನಿಮಗೂ- ಕಪ್ಪು ಹಣ ಹೊಂದಿರುವವರಿಗೂ ಗಟ್ಟಿ ಸಂಬಂಧವಿದೆ ಎಂಬ ಸಂದೇಶ ನೀಡುತ್ತಿದ್ದೀರಾ? ಗುತ್ತಿಗೆದಾರರು, ಎಂಜಿನಿಯರ್‌ಗಳ ಮನೆ ಮೇಲೆ ನಡೆದ ದಾಳಿ ರಾಜಕೀಯ ದಾಳಿ ಹೇಗಾಗುತ್ತದೆ? ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರ ಮನೆ ಮೇಲೆ ದಾಳಿ ನಡೆದಿದೆಯೇ? ಗೌಪ್ಯತನ ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಐಟಿ ದಾಳಿ ಬಗ್ಗೆ ಮೊದಲೇ ಮುನ್ಸೂಚನಾ ಹೇಳಿಕೆ ಕೊಟ್ಟು ಭ್ರಷ್ಟರಿಗೆ ಸಿಗ್ನಲ್ ಕೊಟ್ಟಿದ್ದಾರೆ. ಸಿಎಂ ಕೊಟ್ಟ ಮಾಹಿತಿಯು ಅಕ್ರಮ ಹಣವನ್ನು ಮುಚ್ಚಿ ಹಾಕಲು ನೆರವಾಗಿದೆ ಎಂದು ಆರೋಪಿಸಿದರು.

ಸಿಎಂ ಆಗಿ ಮುಂದುವರೆಯುವ ನೈತಿಕ ಹಕ್ಕಿಲ್ಲ:
ಸಂವಿಧಾನದ ಘನತೆ, ಗೌಪ್ಯತೆಯನ್ನು ಉಲ್ಲಂಘಿಸಿರುವ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯುವ ನೈತಿಕ ಹಕ್ಕಿಲ್ಲ. ಹತಾಸೆ ರೀತಿಯಲ್ಲಿ ಹೇಳಿಕೆ ನೀಡಿರುವ ಸಿಎಂ ಕುಮಾರಸ್ವಾಮಿ ಅವರೇನು ವಾಟಾಳ್ ನಾಗರಾಜರೆ? ಕುಮಾರಸ್ವಾಮಿ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಈ ರೀತಿ ಮಾತನಾಡಬಾರದು. ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರದ ವಾಟಾಳ್ ನಾಗರಾಜ್ ಹೇಳಿಕೆ ನೀಡುವಂತೆ ಸಿಎಂ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಅವರು ಈ ರಾಜ್ಯದ ಮುಖ್ಯಮಂತ್ರಿಯೇ? ಅಥವಾ ಜೆಡಿಎಸ್ ಮುಖ್ಯಮಂತ್ರಿಯೇ ಎಂದು ಪ್ರಶ್ನಿಸಿದರು.

ಅರಾಜಕತೆ ಸೃಷ್ಟಿ ಸಾಧ್ಯತೆ:
ಮುಖ್ಯಮಂತ್ರಿಗಳ ಹೇಳಿಕೆಯಿಂದ ಅರಾಜಕತೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಅಕ್ರಮ ಮದ್ಯ, ಕಪ್ಪು ಹಣ ಸಾಗಾಣೆ ವೇಳೆ ದಾಳಿ ಮಾಡಿದಾಗ ಸಂಬಂಸಿದರು ಬೀದಿಗಿಳಿದರೆ ಏನು ಮಾಡೋದು? ಹೀಗಾಗಿ ಮುಖ್ಯಮಂತ್ರಿ, ಜೆಡಿಎಸ್-ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಆಧರಿಸಿ ಚುನಾವಣಾ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಅರಾಜಕತೆ ಸೃಷ್ಟಿಸುವ ಸಂಚು, ಸರಕಾರದ ನಡೆ ವಿರುದ್ಧ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವೈಧವ್ಯ ಪ್ರಾಪ್ತಿಯಾದವರಂತೆ ಕಾಣುತ್ತಿದ್ದಾರೆ:
ಚುನಾವಣೆಗಾಗಿ ವಾಮ ಮಾರ್ಗದಿಂದ ಹಣ ಕ್ರೋಢೀಕರಣಗೊಳಿಸುವ ಪ್ರಯತ್ನಕ್ಕೆ ತಡೆ ಬೀಳುವ ಭಯದಿಂದ ಐಟಿ ದಾಳಿಗೆ ರಾಜಕೀಯ ಬಣ್ಣ ಬಳಿಯುವ ಪ್ರಯತ್ನ ನಡೆದಿದೆ. ಇದು ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವ ಕೆಲಸವೇ? ಐಟಿ ದಾಳಿ ಬಗ್ಗೆ ಕೆಲವರು ಎದೆ ಬಡಿದುಕೊಳ್ಳುತ್ತಿರುವುದು ವೈಧವ್ಯ ಪ್ರಾಪ್ತಿಯಾದವರ ಗೋಳಾಡುತ್ತಿರುವಂತಿದೆ ಎಂದು ಟೀಕಿಸಿದರು.

'ಇವರೆಲ್ಲಾ ಸಾಚಾಗಳು, ಮಣ್ಣಿನ ಮಕ್ಕಳು, ನ್ಯಾಯಯುತ ಲೆಕ್ಕ ಪತ್ರ ಇಟ್ಟಿರುವವರಾಗಿದ್ದರೆ ಐಟಿ ದಾಳಿ ಬಗ್ಗೆ ಭಯವೇಕೆ? ಅವರ ವರ್ತನೆ ದೊಡ್ಡವರ ಬುಡಕ್ಕೂ ಬರುವ ಸೂಚನೆಯಾಗಿದೆ. ರಾಜ್ಯ ಸರಕಾರದ ಪರವಾಗಿ 3 ಲಕ್ಷ ಕೋಟಿ ರೂ. ಸಾಲ ಮಾಡಿ, ಅವರ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಜನರು ಅಧಿಕಾರ ಕೊಟ್ಟಿಲ್ಲ? ಅಕ್ರಮ ಹಣ ಪತ್ತೆಗಾಗಿ ಐಟಿಗಿಂತಲೂ ಉನ್ನತ ಮಟ್ಟದ ದಾಳಿ, ತನಿಖೆ ನಡೆಯಬೇಕಿದೆ' ಎಂದು ಸಿ.ಟಿ ರವಿ ಅಭಿಪ್ರಾಯಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ