ಆ್ಯಪ್ನಗರ

ವಿಜಯಪುರ ಮೈತ್ರಿ ಅಭ್ಯರ್ಥಿ ಸಂಬಂಧಿಕರು, ಸ್ನೇಹಿತರ ಮನೆ ಮೇಲೆ ಐಟಿ ದಾಳಿ

ನಾಗಠಾಣ ಜೆಡಿಎಸ್ ಶಾಸಕನ ಪತ್ನಿಯಾಗಿರುವ ಡಾ. ಸುನಿತಾ ಚವ್ಹಾಣ ಜೆಡಿಎಸ್ ಅಭ್ಯರ್ಥಿ. ಶಾಸಕ ದೇವಾನಂದ ಸಂಬಂಧಿ ರಾಮಚಂದ್ರ ದೊಡಮನಿ ಹಾಗೂ ಆಪ್ತ ದೇವಪ್ಪ ತದ್ದೇವಾಡಿ ಮನೆ ಮೇಲೆ ದಾಳಿ ನಡೆದಿದೆ.

Vijaya Karnataka Web 20 Apr 2019, 7:11 pm
ವಿಜಯಪುರ: ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಆದಾಯ ತೆರಿಗೆ ದಾಳಿ ಶಾಕ್‌ ಆಗಿದೆ.
Vijaya Karnataka Web ಐಟಿ ದಾಳಿ
ಐಟಿ ದಾಳಿ


‌ಅಭ್ಯರ್ಥಿ‌ ಡಾ‌. ಸುನಿತಾ ಚವ್ಹಾಣ ಅವರ ಸಂಭಂದಿಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ನಾಗಠಾಣ ಜೆಡಿಎಸ್ ಶಾಸಕನ ಪತ್ನಿಯಾಗಿರುವ ಡಾ. ಸುನಿತಾ ಚವ್ಹಾಣ ಜೆಡಿಎಸ್ ಅಭ್ಯರ್ಥಿ. ಶಾಸಕ ದೇವಾನಂದ ಸಂಬಂಧಿ ರಾಮಚಂದ್ರ ದೊಡಮನಿ ಹಾಗೂ ಆಪ್ತ ದೇವಪ್ಪ ತದ್ದೇವಾಡಿ ಮನೆ ಮೇಲೆ ದಾಳಿ ನಡೆದಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಂಬಾ ಗ್ರಾಮದಲ್ಲಿರುವ ಮನೆ, ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.

10 ಅಧಿಕಾರಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದೆ. ಖಾಸಗಿ ಕಾರಿನಲ್ಲಿ ಬಂದು ದಾಳಿ ನಡೆಸಿರುವ ಅಧಿಕಾರಿಗಳು ತಪಾಸಣೆ ನಡೆಸಿದರು. ಈ ವೇಳೆ ಅಂದಾಜು 12 ಲಕ್ಷ ರೂಪಾಯಿ ಸಿಕ್ಕಿರುವ ಮಾಹಿತಿ ಇದೆ.

ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ‌ ದೇವೇಗೌಡ ಅವರು ನಿನ್ನೆ ವಿಜಯಪುರದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಜಿಲ್ಲೆಯಿಂದ ಹೋದ ತಕ್ಷಣವೇ ದಾಳಿ
ನಡೆದಿರುವುದು ವಿಶೇಷ.

ಚುನಾವಣೆ ಸಮೀಪಿಸುತ್ತಿದ್ದಂತೆ ಐಟಿ‌ ಅಧಿಕಾರಿಗಳಿಂದ ಜೆಡಿಎಸ್ ಅಭ್ಯರ್ಥಿ ಸಂಬಂಧಿಕರ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌