ಆ್ಯಪ್ನಗರ

ಸಂಜೆ 4 ಗಂಟೆಗೆ ಜೆಡಿಎಸ್‌-ಕಾಂಗ್ರೆಸ್‌ ಜಂಟಿ ಚುನಾವಣಾ ಸಮಾವೇಶ

Vijaya Karnataka Web 31 Mar 2019, 3:40 pm
ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಜಂಟಿ ಪ್ರಚಾರಕ್ಕೆ ಭಾನುವಾರ ಸಂಜೆ 4 ಗಂಟೆಗೆ ವಿದ್ಯುಕ್ತ ಚಾಲನೆ ಸಿಗಲಿದೆ.
Vijaya Karnataka Web H D Devegowda


ಬೆಂಗಳೂರು ಹೊರವಲಯದ ಬಿಐಇಸಿ ಆವರಣದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಬೃಹತ್‌ ಚುನಾವಣಾ ಪ್ರಚಾರ ಸಭೆಯನ್ನು ನಡೆಸಲಿದ್ದಾರೆ. ಈ ಮೂಲಕ ಬಿಜೆಪಿ ವಿರುದ್ಧ ಒಗ್ಗಟ್ಟಿನ ಸಂದೇಶ ನೀಡಲು ದೋಸ್ತಿ ಪಡೆ ಮುಂದಾಗಿದೆ.

ಈ ಸಮಾವೇಶವನ್ನು ಕರ್ನಾಟಕ ಪ್ರಗತಿಗಾಗಿ ಮೈತ್ರಿ ಎಂದಿರುವ ಕಾಂಗ್ರೆಸ್‌ ಮೈತ್ರಿ ಪರ್ವದ ಪರಿವರ್ತನಾ ಸಮಾವೇಶ ಎಂದಿದೆ. ಇನ್ನು ಜೆಡಿಎಸ್‌ ಬಲಿಷ್ಠ ಕರ್ನಾಟಕದಿಂದಲೇ ಬಲಿಷ್ಠ ಭಾರತ. ಇದುವೇ ನಮ್ಮ ಮೈತ್ರಿ ಸರಕಾರದ ಗುರಿ ಮತ್ತು ಮಂತ್ರ ಎಂದಿದೆ. ಈ ಮೂಲಕ ನಿಜವಾದ ಪ್ರಜಾಪ್ರಭುತ್ವ ಪ್ರತಿಷ್ಠಾಪಿಸುತ್ತೇವೆ ಎಂದು ಜನತಾದಾಳ ಟ್ವೀಟ್‌ ಮಾಡಿದೆ.



ಮೈತ್ರಿ ಸರಕಾರದ ಸಿಎಂ ಹಾಗೂ ಡಿಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭದಂತೆ ಜಂಟಿ ಪ್ರಚಾರ ಸಭೆಯನ್ನು ಐತಿಹಾಸಿಕ ಸಮಾವೇಶವಾಗಿ ಯಶಸ್ವಿಗೊಳಿಸಲು ವಿಶೇಷ ಆಸಕ್ತಿ ವಹಿಸಲಾಗಿದ್ದು, ಕಪಿಸಿಸಿ ನಾಯಕರ ಪರಿಶೀಲನೆ ಬಳಿಕ ಶನಿವಾರ ಸಿಎಂ ಎಚ್‌ಡಿ ಕುಮಾರಸ್ವಾಮಿ ಖುದ್ದು ಸ್ಥಳಕ್ಕೆ ತೆರಳಿ ಸಿದ್ಧತೆ ಪರಿಶೀಲಿಸಿದ್ದಾರೆ. ಕಾಂಗ್ರೆಸ್‌ ಶಾಸಕರಾದ ಎಸ್‌ಟಿ ಸೋಮಶೇಖರ್‌, ಮುನಿರತ್ನ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಾಥ್‌ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ