ಆ್ಯಪ್ನಗರ

ಜೆಡಿಎಸ್ 'ಎಚ್‌ಎಂಟಿ' ಈ ಬಾರಿ ಬಂದ್ ಆಗೋದು ಗ್ಯಾರಂಟಿ: ಬಿ. ಸೋಮಶೇಖರ್

ಬಿಜೆಪಿ ಕೋಮುವಾದಿ ರಾಜಕಾರಣ ಮಾಡುತ್ತಿರುವುದಾಗಿ ವೃಥಾ ಆರೋಪಿಸಲಾಗುತ್ತಿದೆ. ವಾಸ್ತವದಲ್ಲಿ ದೇವೇಗೌಡರು ದೊಡ್ಡ ಜಾತಿವಾದಿ. ಪರಿಶಿಷ್ಟ ಜಾತಿ ವಿರೋಧಿಯಾಗಿದ್ದಾರೆ. ಅವರು ಎಸ್ಸಿಯವರಿಗೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಪ್ರಮೋಷನ್ ತಪ್ಪಿಸಿದವರು ಎಂದು ಟೀಕಿಸಿದರು. ಹಣ ಗಳಿಕೆಯೇ ಜೆಡಿಎಸ್ ಮುಖ್ಯ ಉದ್ದೇಶ. ಜಾತಿ ರಾಜಕಾರಣವೇ ಪಕ್ಷದ ಧ್ಯೇಯವಾಗಿದೆ. ಈಗಾಗಲೇ ಕಾಂಗ್ರೆಸ್ ದೇಶದಲ್ಲಿ ಹಾಗೂ ಜೆಡಿಎಸ್ ಎಚ್‌ಎಂಟಿನಲ್ಲಿ ಸೋತು ನಿರ್ನಾಮವಾಗಲಿದೆ ಎಂದರು.

Vijaya Karnataka Web 14 Apr 2019, 2:20 pm
ಶಿವಮೊಗ್ಗ: ಜೆಡಿಎಸ್ ಪಾಲಿಗೆ ಎಚ್‌ಎಂಟಿ (ಹಾಸನ, ಮಂಡ್ಯ ಮತ್ತು ತುಮಕೂರು) ಬಂದಾಗಬೇಕು. ಈ ಕೆಲಸ ಇದೇ ಲೋಕಸಭೆ ಚುನಾವಣೆಯಲ್ಲಿ ಆಗಲಿದೆ ಎಂದು ಮಾಜಿ ಸಚಿವ ಬಿ. ಸೋಮಶೇಖರ್ ಹೇಳಿದರು.
Vijaya Karnataka Web Gowdas family politics


ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯವರ ಮೇಲೆ ಅನ್ಯಾಯ ಮಾಡಿರುವ ಈ ಜಾತಿವಾದಿ ಪಕ್ಷವನ್ನು ರಾಜ್ಯದಲ್ಲಿ ಹೀನಾಯವಾಗಿ ಸೋಲಿಸಬೇಕು ಎಂದರು.

ಬಿಜೆಪಿ ಕೋಮುವಾದಿ ರಾಜಕಾರಣ ಮಾಡುತ್ತಿರುವುದಾಗಿ ವೃಥಾ ಆರೋಪಿಸಲಾಗುತ್ತಿದೆ. ವಾಸ್ತವದಲ್ಲಿ ದೇವೇಗೌಡರು ದೊಡ್ಡ ಜಾತಿವಾದಿ. ಪರಿಶಿಷ್ಟ ಜಾತಿ ವಿರೋಧಿಯಾಗಿದ್ದಾರೆ. ಅವರು ಎಸ್ಸಿಯವರಿಗೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಪ್ರಮೋಷನ್ ತಪ್ಪಿಸಿದವರು ಎಂದು ಟೀಕಿಸಿದರು. ಹಣ ಗಳಿಕೆಯೇ ಜೆಡಿಎಸ್ ಮುಖ್ಯ ಉದ್ದೇಶ. ಜಾತಿ ರಾಜಕಾರಣವೇ ಪಕ್ಷದ ಧ್ಯೇಯವಾಗಿದೆ. ಈಗಾಗಲೇ ಕಾಂಗ್ರೆಸ್ ದೇಶದಲ್ಲಿ ಹಾಗೂ ಜೆಡಿಎಸ್ ಎಚ್‌ಎಂಟಿನಲ್ಲಿ ಸೋತು ನಿರ್ನಾಮವಾಗಲಿದೆ ಎಂದರು.

ಹಾಲಿನ ವ್ಯಾನ್‌ನಲ್ಲಿ ಹಣ ಸಾಗಣೆ:
ಚುನಾವಣೆಯಲ್ಲಿ ಭ್ರಷ್ಟಾಚಾರವನ್ನು ಸೃಷ್ಟಿಸಿದ್ದೇ ಜೆಡಿಎಸ್. ಈ ಚುನಾವಣೆಯಲ್ಲೂ ಅಂದಾಜು 150 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅದಕ್ಕಾಗಿ ಸಚಿವ ರೇವಣ್ಣನವರು ಹಾಲಿನ ವ್ಯಾನ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿದರು.

25 ವರ್ಷಗಳಿಂದ ಕೆಎಂಎಫ್ ಅನ್ನು ತಮ್ಮ ಕಬಂಧ ಬಾಹುಗಳಲ್ಲಿಯೇ ಇಟ್ಟುಕೊಂಡಿರುವ ರೇವಣ್ಣನವರು ಹಣ ಹಂಚಿಕೆಗೆ ಈ ವ್ಯಾನ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ಮಾರಾಟಕ್ಕೆ ಇಡಲಾಗಿದೆ ಎಂದರು.

ತತ್ವ, ಸಿದ್ಧಾಂತ ಹಾಗೂ ನೀತಿ, ನಿಯಮಗಳನ್ನು ಮರೆತು ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ದೇಶದಲ್ಲಿ ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲ್ಲೂ ಇದೆ. ಆದರೆ, ಜೆಡಿಎಸ್‌ನಲ್ಲಿ ದೇವೇಗೌಡರ ಇಡೀ ಕುಟುಂಬವೇ ರಾಜಕೀಯ ಪ್ರವೇಶಿಸಿದ್ದು ನಾಚಿಕೆಗೇಡು. ಈಗ ಮೊಮ್ಮಕ್ಕಳನ್ನೂ ಕಣಕ್ಕಿಳಿಸಲಾಗಿದೆ ಎಂದು ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ