ಆ್ಯಪ್ನಗರ

ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ನಾವೇ: ವಿಶ್ವನಾಥ್‌

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಾವೆಲ್ಲರೂ ಒಟ್ಟಾಗಿದ್ವಿ. ಸಿದ್ದರಾಮಯ್ಯ ಅವರನ್ನ ಸೋಲಿಸಿದ್ವಿ. ಅವರೂ ನಮ್ಮನ್ನ ಸೋಲಿಸಲು ಪ್ರಯತ್ನಿಸಿದ್ರು ಎಂದು ವಿಶ್ವನಾಥ್‌ ಹೇಳಿದರು.

Vijaya Karnataka Web 8 May 2019, 5:00 pm
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಯಾರು ಎಂಬುದು ಈಗ ಬಹಿರಂಗವಾಗಿದೆ.
Vijaya Karnataka Web ವಿಶ್ವನಾಥ್‌
ವಿಶ್ವನಾಥ್‌


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಈ ಕುರಿತು ಸ್ಪಷ್ಟನೆ ನೀಡಿದರು.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಾವೆಲ್ಲರೂ ಒಟ್ಟಾಗಿದ್ವಿ. ಸಿದ್ದರಾಮಯ್ಯ ಅವರನ್ನ ಸೋಲಿಸಿದ್ವಿ. ಅವರೂ ನಮ್ಮನ್ನ ಸೋಲಿಸಲು ಪ್ರಯತ್ನಿಸಿದ್ರು ಎಂದು ವಿಶ್ವನಾಥ್‌ ಹೇಳಿದರು.

ಸಿಎಂ ಕುರ್ಚಿ ಖಾಲಿ ಇಲ್ಲ: ಸಿದ್ದರಾಮಯ್ಯಗೆ ಮತ್ತೆ ಪಟ್ಟ ಕಟ್ಟುವ ಆಗ್ರಹಕ್ಕೆ ವಿಶ್ವನಾಥ್‌ ಕೊಂಕು

ಶ್ರೀನಿವಾಸ್ ಪ್ರಸಾದ್ ನಾನು ಸ್ನೇಹಿತರು. ಉಭಯ ಕುಶಲೋಪರಿಗಾಗಿ ಭೇಟಿ ಆದ್ವಿ. ನನ್ನ ಆರೋಗ್ಯದ ಬಗ್ಗೆ ಅವರು ವಿಚಾರಿಸಿದ್ರು, ನಾನು ಅವರ ಆರೋಗ್ಯ ವಿಚಾರಿಸಿದೆ ಎಂದು ತಿಳಿಸಿದರು.

ಸಹಜವಾಗಿ ರಾಜಕೀಯ ಚರ್ಚೆ ಮಾಡಿದೆವು. ಚಾಮರಾಜನಗರದಲ್ಲಿ ಗೆಲ್ತಿನಿ ಅನ್ನೋ ಮಾತು ಹೇಳಿದ್ದಾರೆ. ಈ ಬಾರಿ ಮತದಾರ ಯಾರಿಗೆ ಬೆಂಬಲಿಸಿದ್ದಾನೆ ಅನ್ನೋದು ಗೊತ್ತಾಗ್ತಾ ಇಲ್ಲ. ಇಷ್ಟೊಂದು ಮತದಾನ ಎಂದೂ ಆಗಿರಲಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌