ಆ್ಯಪ್ನಗರ

ಜಿಗಜಿಣಗಿಯವರೇ ರೇಡ್ ಮಾಡಿಸಿದ್ದು: ದೇವಾನಂದ

ದಾಳಿ ವೇಳೆ ನನ್ನ ಅಳಿಯ ರಾಮಚಂದ್ರ ದೊಡಮನಿ ಮನೆಯಲ್ಲಿ ಯಾವುದೇ ಹಣ, ದಾಖಲೆ ಸಿಕ್ಕಿಲ್ಲ. ನಮ್ಮ ಗ್ರಾಮದ ದೇವಪ್ಪ ತದ್ದೆವಾಡಿ ಮನೆಯಲ್ಲಿ ಸ್ವಲ್ಪ ಹಣ ಸಿಕ್ಕಿದೆ. ದೇವಪ್ಪ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದವರು ತಿಳಿಸಿದ್ದಾರೆ.

Vijaya Karnataka Web 20 Apr 2019, 7:53 pm
ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರೇ ಆದಾಯ ತೆರಿಗೆ ದಾಳಿ‌ ಮಾಡಿಸಿದ್ದಾರೆ ಎಂದು ಶಾಸಕ ದೇವಾನಂದ ಚೌಹಾಣ್ ಆರೋಪಿಸಿದ್ದಾರೆ.
Vijaya Karnataka Web ಐಟಿ ದಾಳಿ
ಐಟಿ ದಾಳಿ


ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಅವರು, ರಾಜಕೀಯ ಕಾರಣಕ್ಕೆ ನನ್ನ ಅಳಿಯನ ಮನೆ ಮೇಲೆ ಐಟಿ ದಾಳಿ ಮಾಡಿಸಿದ್ದಾರೆ ಎಂದರು.

ದಾಳಿ ವೇಳೆ ನನ್ನ ಅಳಿಯ ರಾಮಚಂದ್ರ ದೊಡಮನಿ ಮನೆಯಲ್ಲಿ ಯಾವುದೇ ಹಣ, ದಾಖಲೆ ಸಿಕ್ಕಿಲ್ಲ. ನಮ್ಮ ಗ್ರಾಮದ ದೇವಪ್ಪ ತದ್ದೆವಾಡಿ ಮನೆಯಲ್ಲಿ ಸ್ವಲ್ಪ ಹಣ ಸಿಕ್ಕಿದೆ. ದೇವಪ್ಪ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದವರು ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮೇಶ್‌ ಜಿಗಜಿಣಗಿ ಕುತಂತ್ರದಿಂದ ಚುನಾವಣೆ ಎದುರಿಸಲು ಹೊರಟಿದ್ದಾರೆ. ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಈ ರೀತಿ ಮಾರ್ಗ ಹಿಡಿದು, ನಮ್ಮನ್ನು ಮಾನಸಿಕವಾಗಿ ಕುಗ್ಗಿಸಲು ಯತ್ನಿಸಿದ್ದಾರೆ ಎಂದು ದೇವಾನಂದ ಚವ್ಹಾಣ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ