ಆ್ಯಪ್ನಗರ

ಕರ್ನಾಟಕದಲ್ಲಿ ಬಿಜೆಪಿ ಅಲೆಗೆ ಕೊಚ್ಚಿ ಹೋದ ಹಿರಿಯ ನಾಯಕರು ಇವರು!

ಈ ಬಾರಿಯ ಮೋದಿ ಮೋಡಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹಿರಿಯ ನಾಯಕರಿಗೆ ಸಂಸತ್‌ನ ಮೆಟ್ಟಿಲು ಹತ್ತುವ ಅವಕಾಶ ಕೊಚ್ಚಿ ಹೋದಂತಾಗಿದೆ. ರಾಜ್ಯದ 6 ಮಂದಿ ಕಾಂಗ್ರೆಸ್‌ ಹಿರಿಯ ರಾಜಕೀಯ ನಾಯಕರು ಬಿಜೆಪಿ ವಿರುದ್ಧ ಪರಾಭವಗೊಂಡಿದ್ದಾರೆ.

Vijaya Karnataka Web 23 May 2019, 5:54 pm
ಬೆಂಗಳೂರು: ಕಾಂಗ್ರೆಸ್‌ - ಜೆಡಿಎಸ್‌ ಪಾಲಿಗೆ ಲೋಕಸಭಾ ಚುನಾವಣೆ ಬಿಸಿ ತುಪ್ಪವಾಗಿ ಪರಿಣಿಸಿದೆ.
Vijaya Karnataka Web story.


ಈ ಬಾರಿಯ ಮೋದಿ ಮೋಡಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹಿರಿಯ ನಾಯಕರಿಗೆ ಸಂಸತ್‌ನ ಮೆಟ್ಟಿಲು ಹತ್ತುವ ಅವಕಾಶ ಕೊಚ್ಚಿ ಹೋದಂತಾಗಿದೆ. ರಾಜ್ಯದ 6 ಮಂದಿ ಕಾಂಗ್ರೆಸ್‌ ಹಿರಿಯ ರಾಜಕೀಯ ನಾಯಕರು ಬಿಜೆಪಿ ವಿರುದ್ಧ ಪರಾಭವಗೊಂಡಿದ್ದಾರೆ.

ರಾಜ್ಯದ ಅತ್ಯಂತ ಹಿರಿಯ ಅಭ್ಯರ್ಥಿ, ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌ಡಿ ದೇವೇಗೌಡ(85), ಕಾಂಗ್ರೆಸ್‌ನ ಹಿರಿಯ ನಾಯಕ, ಲೋಕಸಭೆ ಪ್ರತಿಪಕ್ಷ ಮಾಜಿ ನಾಯಕ ಮಲ್ಲಿಕಾರ್ಜುನ ಖರ್ಗೆ(76), ಹಿರಿಯ ಕಾಂಗ್ರೆಸ್‌ ನಾಯಕರಾದ ವೀರಪ್ಪ ಮೊಯ್ಲಿ(79), ಪ್ರಕಾಶ್‌ ಹುಕ್ಕೇರಿ(72), ವಿ.ಎಸ್‌ ಉಗ್ರಪ್ಪ(64), ಈಶ್ವರ ಖಂಡ್ರೆ(54) ಲೋಕಸಮರದಲ್ಲಿ ಪರಾಭವಗೊಂಡ ರಾಜ್ಯದ ಪ್ರಮುಖ ಅನುಭವೀ ನಾಯಕರೆಂದೆನಿಸಿಕೊಂಡಿದ್ದಾರೆ!

ರಾಜ್ಯದ ಫಲಿತಾಂಶದ ನಕಾಶೆ ನೋಡಿ

ಎಚ್‌ಡಿ ದೇವೇಗೌಡ ತುಮಕೂರಿನಲ್ಲಿ ಬಿಜೆಪಿಯ ಜಿ. ಎಸ್. ಬಸವರಾಜ್‌ ವಿರುದ್ಧ ಸೋಲೊಪ್ಪಿಕೊಂಡಿದ್ದಾರೆ. ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಸ್ಪರ್ಧಿಸುವ ಕುರಿತು ಕಾಂಗ್ರೆಸ್‌ನಿಂದಲೇ ಅಸಮಾಧಾನವಿತ್ತು. ಅಂದಾಜು 27 ಸಾವಿರ ಮತಗಳ ಅಂತರಿಂದ ದೇವೇಗೌಡ ಅವರು ಸೋಲುಂಡಿದ್ದಾರೆ. ಸತತವಾಗಿ ಆರು ಬಾರಿ ಲೋಕಸಭೆಗೆ ಆಯ್ಕೆ ಆಗಿದ್ದ ಎಚ್‌ಡಿ ದೇವೇಗೌಡರು ಈ ಬಾರಿ ತಮ್ಮ ರಾಜಕೀಯ ಜೀವನದ ಎರಡನೇ ಸೋಲುಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಗೆ ಹೀನಾಯ ಸೋಲು, ಗೆಲುವಿನ ನಗು ಬೀರಿದ ಉಮೇಶ್‌ ಜಾಧವ್‌

ಕಾಂಗ್ರೆಸ್‌ನ ಹಿರಿಯ ನಾಯಕ, ಲೋಕಸಭೆ ಪ್ರತಿಪಕ್ಷದ ಮಾಜಿ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ವ ಕ್ಷೇತ್ರ ಕಲಬುರಗಿಯಲ್ಲಿ ಬಿಜೆಪಿಯ ಉಮೇಶ್‌ ಜಾಧವ್‌ ವಿರುದ್ಧ ಸೋಲುಂಡಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ಪ್ರಚಾರದ ಅಬ್ಬರ, ಮೋದಿ ಭಾಷಣದ ಕಲಬುರಗಿಯಲ್ಲಿ ಸತತವಾಗಿ ಗೆಲುವು ಸಾಧಿಸುತ್ತಿದ್ದ ಖರ್ಗೆ ಅವರನ್ನು ಈ ಬಾರಿ ಸಂಸತ್‌ನಿಂದ ದೂರವಿರಿಸುವಂತೆ ಮಾಡಿದೆ. 11 ಬಾರಿ ಗೆದ್ದಿದ್ದ ಖರ್ಗೆ ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧಿ ಪಡೆದಿದ್ದರು.

ಜನಾಭಿಪ್ರಾಯಕ್ಕೆ ತಲೆಬಾಗುತ್ತೇವೆ, ನರೇಂದ್ರ ಮೋದಿಗೆ ಅಭಿನಂದನೆ: ಸಿದ್ದರಾಮಯ್ಯ
ಮೈತ್ರಿಯಿಂದ ಕುಟುಂಬಕ್ಕಷ್ಟೇ ಲಾಭ: ಪರಾಜಿತ ಮಂಜು ಪ್ರತಿಕ್ರಿಯೆ

ಎತ್ತಿನಹೊಳೆ ಯೋಜನೆಯ ಮೂಲಕ ಚಿಕ್ಕಾಬಳ್ಳಾಪುರ ಭಾಗಕ್ಕೆ ನೀರು ತರಲು ಮುಂದಾಗಿದ್ದ ವೀರಪ್ಪ ಮೊಯ್ಲಿ, ಅದೇ ಭಾಗದ ಜನರಿಂದ ಪರಾಭವಗೊಂಡಿದ್ದಾರೆ. 79 ವರ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ, ಬಿಜೆಪಿಯ ಬಿ ಎನ್‌ ಬಚ್ಚೇಗೌಡ ವಿರುದ್ಧ ಸೋಲೊಪ್ಪಿಕೊಂಡಿದ್ದಾರೆ.

ಮಂಡ್ಯ, ಹಾಸನ, ತುಮಕೂರಿನ ತಾಜಾ ಸ್ಥಿತಿಗತಿ: ಇಲ್ಲಿ ನೋಡಿ
ಕಾಂಗ್ರೆಸ್‌ನ ಮತ್ತೋರ್ವ ಹಿರಿಯ ನಾಯಕ, ಮಾಜಿ ರೈಲ್ವೇ ಸಚಿವ, 7 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಕೆಎಚ್‌ ಮುನಿಯಪ್ಪ ಕೋಲಾರದಲ್ಲಿ ಬಿಜೆಪಿಯ ಎಸ್‌. ಮುನಿಸ್ವಾಮಿ ವಿರುದ್ಧ ಸೋತಿದ್ದಾರೆ. ಸುಮಾರು 1 ಲಕ್ಷಕ್ಕೂ ಅಧಿಕ ಅಂತರಿಂದ ಅವರು ಪರಾಭವಗೊಂಡಿದ್ದಾರೆ.
ಕಾಂಗ್ರೆಸ್‌ ಮಾಜಿ ವಿಧಾನಸಭಾ ಸದಸ್ಯ ವಿ.ಎಸ್‌ ಉಗ್ರಪ್ಪ ಬಳ್ಳಾರಿಯಲ್ಲಿ ಸೋಲುಂಡಿದ್ದಾರೆ. ಮಾಜಿ ಸಚಿವ ಈಶ್ವರ ಖಂಡ್ರೆ ಅವರು ಬೀದರ್‌ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ