ಆ್ಯಪ್ನಗರ

ಕೋಲಾರ ಫಲಿತಾಂಶ: ಮುನಿಯಪ್ಪಗೆ ಮುಖಭಂಗ, ಮುನಿಸ್ವಾಮಿಗೆ ಜಯಮಾಲೆ

ಬಿಜೆಪಿಯ ಎಸ್.ಮುನಿಸ್ವಾಮಿಗೆ 1.61ಲಕ್ಷ ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆ. ಈ ಮೂಲಕ ಮೊದಲ ಪ್ರಯತ್ನದಲ್ಲಿ ಸಂಸತ್ ಪ್ರಶಿಸಲಿದ್ದಾರೆ ಎಸ್.ಮುನಿಸ್ವಾಮಿ. ಎಂಟನೆ ಸಲಕ್ಕೆ ಲೋಕಸಭೆ ಪ್ರವೇಶಿಸುವ ಕಾಂಗ್ರೆಸ್ ನ ಕೆ.ಎಚ್.ಮುನಿಯಪ್ಪ ಆಸೆ ಭಗ್ನವಾಗಿದೆ. ಕಾಂಗ್ರೆಸ್-ಜೆಡಿಎಸ್ ನ ಕೆ.ಎಚ್.ಮುನಿಯಪ್ಪ ವಿರೋಧಿಗಳ ಕೈ ಚಳಕದ ಫಲಿತಾಂಶವಿದು.

Vijaya Karnataka Web 23 May 2019, 1:09 pm
ಕೋಲಾರ: ಇದುವರೆಗೆ 7 ಸಲ ಸಂಸದರಾಗಿ ಆಯ್ಕೆಯಾಗಿದ್ದ ಕೆ ಎಚ್ ಮುನಿಯಪ್ಪನವರಿಗೆ ಭಾರಿ ಮುಖಭಂಗವಾಗಿದೆ. ಬಿಜೆಪಿಯ ಎಸ್ ಮುನಿಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿಸಿದೆ.
Vijaya Karnataka Web kolar


ಬಿಜೆಪಿಯ ಎಸ್.ಮುನಿಸ್ವಾಮಿಗೆ 1.61ಲಕ್ಷ ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆ. ಈ ಮೂಲಕ ಮೊದಲ ಪ್ರಯತ್ನದಲ್ಲಿ ಸಂಸತ್ ಪ್ರಶಿಸಲಿದ್ದಾರೆ ಎಸ್.ಮುನಿಸ್ವಾಮಿ. ಎಂಟನೆ ಸಲಕ್ಕೆ ಲೋಕಸಭೆ ಪ್ರವೇಶಿಸುವ ಕಾಂಗ್ರೆಸ್ ನ ಕೆ.ಎಚ್.ಮುನಿಯಪ್ಪ ಆಸೆ ಭಗ್ನವಾಗಿದೆ. ಕಾಂಗ್ರೆಸ್-ಜೆಡಿಎಸ್ ನ ಕೆ.ಎಚ್.ಮುನಿಯಪ್ಪ ವಿರೋಧಿಗಳ ಕೈ ಚಳಕದ ಫಲಿತಾಂಶವಿದು.

ಎಸ್.ಮುನಿಸ್ವಾಮಿಗೆ ಗೆಲುವಿನ ದಡ ಹತ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ ಕೆ.ಎಚ್.ಮುನಿಯಪ್ಪ ವಿರೋಧಿಗಳು. ಫಲಿತಾಂಶದ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲದಿದ್ದರೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಮುನಿಸ್ವಾಮಿ ಅವರು ಒಟ್ಟು 145783 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು ಗೆಲುವು ಬಹುತೇಕ ಖಚಿತವಾಗಿದ್ದು ಇನ್ನು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. 2014ರ ಲೋಕಸಭೆ ಚುನಾವಣೆಯಲ್ಲಿ ಕೆ ಎಚ್ ಮುನಿಯಪ್ಪ 47850 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕೋಲಾರ ಬಾಲಕರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದೆ. ಇದುವರೆಗೆ ಮುನಿಸ್ವಾಮಿಗೆ 171909 ಮತಗಳು, ಕಾಂಗ್ರೆಸ್‌‍ನ ಕೆ ಎಚ್ ಮುನಿಯಪ್ಪ 101945 ಮತಗಳನ್ನು ಪಡೆದಿದ್ದಾರೆ.

ಹಾಲಿ ಸಂಸದ ಕೆ.ಎಚ್. ಮುನಿಯಪ್ಪಗೆ ಭಾರಿ ಹಿನ್ನಡೆ. ಮೊದಲ ಸುತ್ತಿನ ಮತ ಎಣಿಕೆಯಿಂದ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ, 70ಸಾವಿರ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ.

ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಕೆ.ಎಚ್‌. ಮುನಿಯಪ್ಪ ಅವರಿಗೆ 8ನೇ ಬಾರಿ ಸಂಸದರಾಗುವ ಅದೃಷ್ಟ ಒಲಿಯಲಿದೆಯೇ ಅಥವಾ ಈ ಬಾರಿ ಕೋಲಾರ ಕ್ಷೇತ್ರದಲ್ಲಿ ತಾವರೆ ಅರಳಲಿವುದೇ ಎಂಬ ಗಹನ ಚರ್ಚೆಗೆ ತೆರೆ ಬೀಳುವ ಸಮಯ ಸಮೀಪಿಸಿದೆ.

ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಮೊದಲ ಹಂತದಲ್ಲೇ ಚುನಾವಣೆ ನಡೆಯಿತು. ಒಟ್ಟು 16,28,782 ಮತದಾರರ ಪೈಕಿ 12,55,976 ಮಂದಿ ಮತದಾನ ಮಾಡಿದ್ದರು. ಒಟ್ಟು 8,16,475 ಪುರುಷ ಮತದಾರರ ಪೈಕಿ 6,42,349 ಮಂದಿ, 8,12,149 ಮಹಿಳಾ ಮತದಾರರ ಪೈಕಿ 6,13,607 ಮಂದಿ, 158 ಇತರೆ ಮತದಾರರ ಪೈಕಿ 20 ಮಂದಿ ಹಕ್ಕು ಚಲಾಯಿಸಿದ್ದರು.

ವಿದ್ಯುನ್ಮಾನ ಮತಯಂತ್ರಗಳ ಎಣಿಕೆಗೂ ಮುನ್ನ ಅಂಚೆ ಮತಪತ್ರಗಳ ಎಣಿಕೆ ಪ್ರಾರಂಭಿಸಲಾಗುತ್ತದೆ. ಚುನಾವಣಾಧಿಕಾರಿ ಮೇಜಿನ ಬಳಿ ಎಣಿಕೆ ಆರಂಭಿಸಲಾಗುತ್ತದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಅಭ್ಯರ್ಥಿ, ಪ್ರತಿನಿಧಿಗಳ ಸಮಕ್ಷಮದಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಲಾಟರಿ ಮೇರೆಗೆ ಐದು ಮತಗಟ್ಟೆಗಳ ವಿವಿಪ್ಯಾಟ್‌ ಪೇಪರ್‌ ಸ್ಲಿಪ್‌ಗಳನ್ನು ಆಯ್ಕೆ ಮಾಡಿ, ಪರಿಶೀಲನಾ ಎಣಿಕೆ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಕೊನೆಯಲ್ಲಿ ನಿರ್ವಹಿಸಲಾಗುತ್ತದೆ.

ಸತತ ಗೆಲುವಿನ ಸರದಾರ ಸಂಸದ ಮುನಿಯಪ್ಪ ಅವರಿಗೆ ನೇರ ಹಣಾಹಣಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರು, ಕೈ ಪಾಳಯದ ಕೆಎಚ್‌ ವಿರೋಧಿ ಬಣ, ಜೆಡಿಎಸ್‌ನ ಕೆಲವರ ಸಹಕಾರವು ವರವಾಗಿತ್ತು. ಅಬ್ಬರದ ಪ್ರಚಾರ ಕೈಗೊಂಡಿದ್ದರು. ಮತದಾನವಾದ ಬಳಿಕ ಗೆಲುವು ಸಾಧಿಸುವ ಅತಿ ವಿಶ್ವಾಸದಲ್ಲಿದ್ದಾರೆ. ಮತದಾನ ದಿನದಿಂದ ಕ್ಷೇತ್ರವಾರು, ಬೂತಮಟ್ಟದಲ್ಲಾದ ಮತದಾನ ಪ್ರಮಾಣದ ಆಧಾರದ ಮೇಲೆ ಸೋಲು,ಗೆಲುವಿನ ಲೆಕ್ಕಾಚಾರ ಹಾಕುತ್ತಿರುವ ಅಭ್ಯರ್ಥಿಗಳು, ಫಲಿತಾಂಶ ಪ್ರಕಟವಾಗುವ ಮುನ್ನಾದಿನ ಬುಧವಾರ ಸಹ, ತಮ್ಮ ಲೆಕ್ಕಾಚಾರದಂತೆ ಆಗಲಿದೆ ಎಂಬ ಭಾವಿಸಿದ್ದರು. ಕೆಲ ಅಭ್ಯರ್ಥಿಗಳು ದೇವಾಲಯಗಳಿಗೂ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ