ಆ್ಯಪ್ನಗರ

ಮೇ 23ರಂದು ಯಾರು ಓಡಿ ಹೋಗುತ್ತಾರೋ ನೋಡೋಣ: ಸುಮಲತಾಗೆ ಕುಮಾರಸ್ವಾಮಿ ಟಾಂಗ್‌

ಸದ್ಯ ತೋರಿಸು ತಾಯಿ. ನಮಗೆ ಗೊತ್ತಿದೆ ನಿಮ್ಮ ಮೂರು ನಾಲ್ಕು ಮುಖಗಳು. ನಮ್ಮ ಜನ ನೋಡಬೇಕಿದೆ ನಿಮ್ಮ ಇನ್ನೊಂದು ಮುಖ ತೋರಿಸು ತಾಯಿ. ಮೇ 23ರಂದು ಯಾರು ಓಡಿ ಹೋಗುತ್ತಾರೆ ನೋಡೋಣ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

Vijaya Karnataka Web 10 Apr 2019, 7:31 pm
ಮಂಡ್ಯ: ನಿಖಿಲ್ ಪರವಾಗಿ ಆಶೀರ್ವಾದ ಪಡೆಯಲು ನಾನು ಬಂದಿದ್ದೇನೆ. ನಾವು ನಿಮ್ಮ ಪರವಾಗಿ ಕೆಲಸ ಮಾಡುವವರು. ಬಹಳ ಜನ ಹೇಳುತ್ತಾರೆ ಅಭಿಮಾನ ಅನುಕಂಪಕ್ಕೆ ಬಂದಿದ್ದೇವೆ ಅಂತಾರೆ. ರಾಜಕೀಯ ಮಾಡುವುದು ಜನರ ಸೇವೆಗಾಗಿ. ರಾಜಕೀಯ ಬೇಡ ಅಂದ ಮೇಲೆ ಚುನಾವಣೆ ಏಕೆ? ಇವರಿಂದ ನನಗೆ ಸರ್ಟಿಫಿಕೇಟ್ ಬೇಕಿಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಟಾಂಗ್‌ ನೀಡಿದರು.
Vijaya Karnataka Web ಕುಮಾರಸ್ವಾಮಿ
ಕುಮಾರಸ್ವಾಮಿ


ಶ್ರೀರಂಗಪಟ್ಟಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣ ಮಾಡಿದರು.

ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು ಎಂದು ಸುಮಲತಾ ಹೇಳಿದ್ದರು. ಆದರೂ ನಾನು ಮಾಡಿ ತೋರಿಸಿದ್ದೇನೆ. ಇಂಥವರಿಗೆ ನಾನು ಪಾಠ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.

ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ. 1127 ಕೋಟಿ ರೂ. ಸಾಲ ಏನು ಇದೆ ಇದರಲ್ಲಿ 400 ಕೋಟಿ ಹಣ ನೀಡಿದ್ದೇನೆ. ಇಂತಹ ಸುಳ್ಳು ಹೇಳುವ ವ್ಯಕ್ತಿಯನ್ನು ನಂಬುತ್ತೀರಾ? ಎಂದರು.

ಸುಮಲತಾ ಇನ್ನೊಂದು ಮುಖ ತೋರಿಸುವ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಸಿಎಂ, ಸದ್ಯ ತೋರಿಸು ತಾಯಿ. ನಮಗೆ ಗೊತ್ತಿದೆ ನಿಮ್ಮ ಮೂರು ನಾಲ್ಕು ಮುಖಗಳು. ನಮ್ಮ ಜನ ನೋಡಬೇಕಿದೆ ನಿಮ್ಮ ಇನ್ನೊಂದು ಮುಖ ತೋರಿಸು ತಾಯಿ. ಮೇ 23ರಂದು ಯಾರು ಓಡಿ ಹೋಗುತ್ತಾರೆ ನೋಡೋಣ
ಎಂದು ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ