ಆ್ಯಪ್ನಗರ

ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್‌ ಕೈ ತಪ್ಪಿದ್ದು ಹೇಗೆ, ಸ್ಪಷ್ಟತೆ ಬೇಕು, ತೇಜಸ್ವಿ ಇನ್ನೂ ಅನನುಭವಿ: ಸೋಮಣ್ಣ

ತೇಜಸ್ವಿ ಬೇರಾರೂ ಪರ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅಣ್ಣನ ಮಗ. ತೇಜಸ್ವಿಗೆ ಟಿಕೆಟ್‌ ಘೋಷಿಸಿರುವ ಬಗ್ಗೆ ಸ್ಥಳೀಯ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

Vijaya Karnataka Web 27 Mar 2019, 4:59 pm
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಿಗೆ ಭ ದ್ರ ಕೊಟೆಯಾಗಿತ್ತು. ಅನಂತಕುಮಾರ್‌ ಅವರ ಸತತವಾಗಿ ಈ ಕ್ಷೇತ್ರದಿಂದ ಲೋಕಸಭೆಗೆ ನಿರಾಯಾಸವಾಗಿ ಪ್ರವೇಶ ಪಡೆದಿದ್ದಾರೆ. ಅವರ ನಿಧನದ ನಂತರ ಇದು ಬಿಜೆಪಿ ಪಾಲಿಗೆ ಕಗ್ಗಂಟ್ಟಾಗುವ ಲಕ್ಷಣಗಳು ಕಂಡುಬರುತ್ತಿವೆ.
Vijaya Karnataka Web ಸೋಮಣ್ಣ
ಸೋಮಣ್ಣ


ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ್‌ ಪತ್ನಿ ತೇಜಸ್ವಿನಿಗೆ ಟಿಕೆಟ್‌ ದೊರೆಯುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಇದು ತೇಜಸ್ವಿ ಸೂರ್ಯ ಪಾಲಾಗಿದೆ.

ಅನನುಭವಿಯಾಗಿರುವ ತೇಜಸ್ವಿ ಸೂರ್ಯ ಈಗ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಬಿಕೆ ಹರಿಪ್ರಸಾದ್‌ ವಿರುದ್ಧ ಹೋರಾಟ ನಡೆಸಬೇಕಾಗಿದೆ.

ತೇಜಸ್ವಿ ಬೇರಾರೂ ಪರ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅಣ್ಣನ ಮಗ. ತೇಜಸ್ವಿಗೆ ಟಿಕೆಟ್‌ ಘೋಷಿಸಿರುವ ಬಗ್ಗೆ ಸ್ಥಳೀಯ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್‌ ದೊರೆಯುತ್ತದೆ ಎಂದೇ ನಮ್ಮ ಲೆಕ್ಕಾಚಾರ ಇತ್ತು. ಆದರೆ ಕೊನೆ ಕ್ಷಣದಲ್ಲಿ ಹೈ ಕಮಾಂಡ್‌ನ ನಿರ್ಧಾರ ಬದಲಾಗಿದ್ದೇಕೆ. ಇದರ ಬಗ್ಗೆ ಸ್ಪಷ್ಟತೆ ಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ಕುರಿತು ದನಿ ಎತ್ತಿರುವುದು ಗೋವಿಂದರಾಜನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣ.

ಬಹಿರಂಗವಾಗಿಯೇ ಹೈಕಮಾಂಡ್‌ ವಿರುದ್ಧ ಸೋಮಣ್ಣ ಗುಡುಗಿದ್ದಾರೆ.

ತೇಜಸ್ವಿನ ಅನಂತಕುಮಾರ್‌ಗೆ ಟಿಕೆಟ್‌ ತಪ್ಪಿಸಿದ್ದು ತಪ್ಪು. ಹೀಗಾಗಬಾರದಿತ್ತು. ಅವರಿಗೆ ಈ ರೀತಿ ಆಗಿದ್ದು ಸರಿಯಲ್ಲ ಎಂದು ಸೋಮಣ್ಣ ಹೇಳಿದ್ದಾರೆ.

ಟಿಕೆಟ್‌ ಘೋಷಣೆ ಮಾಡುವ ರಹಸ್ಯವಾಗಿದ್ದರೂ ಸ್ಥಳೀಯ ನಾಯಕರಾದ ನಮಗೂ ಅದರ ಮಾಹಿತಿ ಇರಬೇಕು. ಈ ಸ್ಪಷ್ಟತೆ ಇಲ್ಲದಿದ್ದರೆ ಪ್ರಚಾರ ಮಾಡುವುದು ಕಷ್ಟವಾಗುತ್ತದೆ ಎಂದು ಕಿಡಿಕಾರಿದ್ದಾರೆ.

ತೇಜಸ್ವಿನಿ ಮೇಡಮ್‌ಗೆ ಟಿಕೆಟ್ ಕೈ ತಪ್ಪಿದ್ದು? ಇದಕ್ಕೆ ಕಾರಣ ಏನು ಮತ್ತು ಯಾರು? ಇತ್ಯಾದಿ ವಿಷಯಗಳು ಬಗ್ಗೆ ಮಾಹಿತಿ ಬೇಕು. ಮುಂದಿನ ಎರಡು ಮೂರು ದಿನದಲ್ಲಿ ಸಭೆ ನಡೆಸುವಂತೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಪಾತ್ರ ಇದರಲ್ಲಿ ಬಹಳ ಇದೆ. ಈ ಬಗ್ಗೆ ಅವರೊಂದಿಗೂ ಚರ್ಚಿಸಿದ್ದೇನೆ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.

ಸೋಮಣ್ಣ ಅಲ್ಲದೇ ಇನ್ನೂ ಕೆಲವು ನಾಯಕರು ಕೂಡ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌