ಆ್ಯಪ್ನಗರ

ಮಂಡ್ಯ: ಸುಮಲತಾ ಮುಖದಲ್ಲಿ ಅಂಬಿ ಸಾವಿನ ನೋವಿನ ಛಾಯೆ ಇಲ್ಲ: ಕುಮಾರಸ್ವಾಮಿ

ಸುಮಲತಾ ಅವರ ಬಣ್ಣದ ಆಟ ಬಹಳ ದಿನ ನಡೆಯುವುದಿಲ್ಲ. ಇವತ್ತು ಕೆ.ಆರ್.ಪೇಟೆಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಮೈಸೂರಿನ ಯಾವ ಹೋಟೆಲ್‌ನಲ್ಲಿ ಕುಳಿತು ಹಣ ಕೊಟ್ಟರು? ಅವರಿಗೆ ಯಾರು ಹಣ ಸಂದಾಯ ಮಾಡುತ್ತಿದ್ದಾರೆ ಅಂತೆಲ್ಲಾ ಗೊತ್ತಿದೆ.

Vijaya Karnataka Web 27 Mar 2019, 8:41 pm
ಮಂಡ್ಯ: ಚಿತ್ರನಟಿ ಸುಮಲತಾ ಅವರ ಭಾಷಣವನ್ನು ಗಮನಿಸುತ್ತಿದ್ದೇನೆ. ಅವರ ಮುಖದಲ್ಲಿ ಅಂಬರೀಶ್ ಸಾವಿನ ನೋವಿನ ಛಾಯೆಯೇ ಕಾಣುತ್ತಿಲ್ಲ. ನಾಟಕೀಯವಾದ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
Vijaya Karnataka Web ಎಚ್‌ಡಿ ಕುಮಾರಸ್ವಾಮಿ
ಎಚ್‌ಡಿ ಕುಮಾರಸ್ವಾಮಿ


ನಗರದ ಬಂದೀಗೌಡ ಬಡಾವಣೆಯಲ್ಲಿನ ಮಾಜಿ ಸಂಸದ ಜಿ.ಮಾದೇಗೌಡರನ್ನು ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು

ಪಕ್ಷೇತರವಾಗಿ ಕಣಕ್ಕಿಳಿದಿರುವ ಸುಮಲತಾ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ. ನಿನ್ನೆ ಅವರ ಡೈಲಾಗ್ ನೋಡ್ದೆ, ಅವರ ಮುಖದಲ್ಲಿ ಅಂಬರೀಷ್ ಸಾವಿನ ಜತೆಗೆ ಜಿಲ್ಲೆಯ ರೈತರ ನೋವು ಕೂಡ ಕಾಣಿಸುತ್ತಿಲ್ಲ ಎಂದು ಲೇವಡಿ ಮಾಡಿದರು.

ಅವರದ್ದು (ಸುಮಲತಾ) ತಾಯಿ ಹೃದಯವೇ? ಇನ್ನೊಬ್ಬರಿಂದ ಹಣ ಪಡೆದು ಮಜಾ ಮಾಡೋರು ಇವರು (ಸುಮಲತಾ) ಎಂದು ವಾಗ್ದಾಳಿ ನಡೆಸಿದರು.

ಸುಮಲತಾ ಅವರ ಬಣ್ಣದ ಆಟ ಬಹಳ ದಿನ ನಡೆಯುವುದಿಲ್ಲ. ಇವತ್ತು ಕೆ.ಆರ್.ಪೇಟೆಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಮೈಸೂರಿನ ಯಾವ ಹೋಟೆಲ್‌ನಲ್ಲಿ ಕುಳಿತು ಹಣ ಕೊಟ್ಟರು? ಅವರಿಗೆ ಯಾರು ಹಣ ಸಂದಾಯ ಮಾಡುತ್ತಿದ್ದಾರೆ ಅಂತೆಲ್ಲಾ ಗೊತ್ತಿದೆ. ನಯಾಪೈಸೆ ಹಣ ಖರ್ಚು ಮಾಡದೆ ಇವರ ಹಿಂದೆ ಜನ ಬರುತ್ತಿದ್ದಾರಾ? ಬೇರೆಯವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಎಚ್ಚರಿಸಿದರು

ನಾನೂ ಹಳ್ಳಿಗಳ ಕಡೆಗೆ ಹೋಗುತ್ತೇನೆ. ನಿಮ್ಮ ಜತೆ ದುಡಿಮೆ ಮಾಡುವವರು ಬೇಕಾ? ಅಥವಾ ಮಜಾ ಮಾಡೋರು ಬೇಕಾ? ಎಂದು ಜನರ ಬಳಿ ನಾನೇ ಕೇಳುತ್ತೇನೆ ಎಂದರು.

ಯೋಧರನ್ನೇ ಭದ್ರತೆಗೆ ನೇಮಿಸಿಕೊಳ್ಳಲಿ

ಸುಮಲತಾ ವಿಶೇಷ ಭದ್ರತೆ ಕೇಳಿರುವ ವಿಚಾರವಾಗಿ ಕೇಂದ್ರ ತಂಡ ಅಥವಾ ಬಿಎಸ್‌ಫ್‌ ಇಲ್ಲದಿದ್ದರೆ ಗಡಿ ಕಾಯೋ ಯೋಧರನ್ನೇ ಭದ್ರತೆಗೆ ನೇಮಿಸಿಕೊಳ್ಳಲಿ. ಅಗತ್ಯಬಿದ್ದರೆ ಕೇಂದ್ರಕ್ಕೆ ನಾನೇ ಪತ್ರ ಬರೆಯುತ್ತೇನೆ ಎಂದು ಕುಮಾರಸ್ವಾಮಿ ಕಟಕಿಯಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌