ಆ್ಯಪ್ನಗರ

ಮದ್ದೂರಿನಲ್ಲಿ ಅಬ್ಬರದ ಪ್ರಚಾರ, ರೋಡ್‌ ಶೋ ನಡೆಸಿದ ಸುಮಲತಾ

'ಹೋದ ಕಡೆಯಲ್ಲೆಲ್ಲ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಜಿಲ್ಲೆಯ ಜನರು ನನಗೆ ಹೊಸ ಶಕ್ತಿ ತುಂಬುತ್ತಿದ್ದಾರೆ' ಎಂದು ರೋಡ್ ಶೋ ವೇಳೆ ಸುಮಲತಾ ಹೇಳಿದರು. ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸರ ಲಾಠಿಯ ದೌರ್ಜನ್ಯ ವಿಚಾರ ಖಂಡಿಸಿದ ಅವರು, ಸರಕಾರ ಅಧಿಕಾರ ಬಳಸಿ ಜನ ಬೆಂಬಲ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

Vijaya Karnataka Web 23 Mar 2019, 8:32 pm
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್ ಶನಿವಾರ ಅಬ್ಬರದ ಪ್ರಚಾರ ನಡೆಸಿದರು.
Vijaya Karnataka Web Sumalatha Road Show


ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿರುವ ಸುಮಲತಾ ಅವರಿಗೆ ಹೋದಲ್ಲೆಲ್ಲ ಭರ್ಜರಿ ಸ್ವಾಗತ ದೊರೆತಿದೆ. ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಿದ ಅವರಿಗೆ ಪುತ್ರ ಅಭಿಷೇಕ್, ಸ್ಥಳೀಯ ಮುಖಂಡರು, ಅಭಿಮಾನಿಗಳು ಸಾಥ್ ನೀಡಿದರು.

'ಹೋದ ಕಡೆಯಲ್ಲೆಲ್ಲ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಜಿಲ್ಲೆಯ ಜನರು ನನಗೆ ಹೊಸ ಶಕ್ತಿ ತುಂಬುತ್ತಿದ್ದಾರೆ' ಎಂದು ರೋಡ್ ಶೋ ವೇಳೆ ಸುಮಲತಾ ಹೇಳಿದರು. ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸರ ಲಾಠಿಯ ದೌರ್ಜನ್ಯ ವಿಚಾರ ಖಂಡಿಸಿದ ಅವರು, ಸರಕಾರ ಅಧಿಕಾರ ಬಳಸಿ ಜನ ಬೆಂಬಲ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ನಿನ್ನೆ ನಿಖಿಲ್ ಬೆಂಬಲಿಗರ ಕಾರಿನ‌ ಮೇಲೆ ಕಲ್ಲು ತೂರಾಟ ವಿಚಾರವನ್ನು ಪ್ರಸ್ತಾಪಿಸಿದ ಸುಮಲತಾ, 'ನಮ್ಮ‌ ಕಾರ್ಯಕರ್ತರು ಯಾರೂ ಅಂತಹ ಕೆಲಸ ಮಾಡುವುದಿಲ್ಲ. ಅನುಕಂಪ ಸೃಷ್ಟಿಸಲು ಅವರೇ ಮಾಡಿಕೊಂಡಿರುವ ತಂತ್ರಗಾರಿಕೆ. ನಾನು ಯಾವತ್ತೂ ನಮ್ಮ ಜನರಿಗಾಗಲಿ, ನಮ್ಮ ಬೆಂಬಲಿಗರಿಗಾಗಲಿ ಆ ರೀತಿ ಹೇಳಿಕೆ ಕೊಟ್ಟಿಲ್ಲ. ನಾನು ಆ ರೀತಿ‌ ಯಾವುದೇ ಪ್ರಚೋದನೆ ನೀಡಿಲ್ಲ. ಚುನಾವಣಾ ಗಿಮಿಕ್‌ಗಾಗಿ‌ ಅವರೇ ಈ ರೀತಿ ಮಾಡಿಕೊಳ್ಳುತ್ತಿರಬಹುದು' ಎಂದು ಪ್ರತಿಕ್ರಿಯಿಸಿದರು.

ಶಿಸ್ತುಕ್ರಮದ ಎಚ್ಚರಿಕೆಗೆ ಮಂಡ್ಯ ಕಾಂಗ್ರೆಸಿಗರ ಸೆಡ್ಡು: ಸಾಮೂಹಿಕ ರಾಜೀನಾಮೆಗೆ ನಿರ್ಧಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌