ಆ್ಯಪ್ನಗರ

ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಸಮಾವೇಶ: ಖರ್ಗೆ ವಿರುದ್ಧ ಕಿಡಿ ಕಾರಿದ ನಾಯಕರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಈಶ್ವರಪ್ಪ, ಸಿದ್ದರಾಮಯ್ಯ ಯಾವತ್ತೂ ಏನು ಸಾಧ್ಯವಿಲ್ಲ ಎಂದು ಚಾಲೆಂಜ್ ಹಾಕುತ್ತಾರೋ ಅವರ ಮಾತಿನ ವಿರುದ್ದವೇ ಆಗುತ್ತದೆ. 2014ರಲ್ಲಿ ಬಿಜೆಪಿ ಗೆಲ್ಲಲ್ಲ, ಮೋದಿ ಪ್ರಧಾನಿ ಆಗಲ್ಲ ಎಂದಿದ್ದರು. ಕೊನೆಗೆ ಬಿಜೆಪಿ ಬಹುಮತ ಪಡೆದು ಮೋದಿ ಪ್ರಧಾನಿ ಆದರು. ಉಮೇಶ್ ಜಾಧವ್ ರಾಜೀನಾಮೆ ಸಲ್ಲಿಸಿದಾಗ ರಾಜೀನಾಮೆ ಅಂಗೀಕಾರ ಆಗಲ್ಲ, ಜಾಧವ್ ಅನರ್ಹಗೊಳ್ಳುತ್ತಾರೆ ಎಂದಿದ್ದರು. ಅದು ಕೂಡ ಉಲ್ಟಾ ಆಗಿದೆ. ಕುಮಾರಸ್ವಾಮಿ ಅವರಪ್ಬನಾಣೆ ಮುಖ್ಯಮಂತ್ರಿ ಆಗಲ್ಲ ಎಂದಿದ್ದರು. ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ನಮ್ಮ ವಿರುದ್ಧ ಎಷ್ಟು ಹೇಳಿಕೆ ನೀಡುತ್ತಾರೋ ಅಷ್ಟೇ ನಮಗೆ ಒಳ್ಳೆಯದಾಗುತ್ತದೆ ಎಂದು ಲೇವಡಿ ಮಾಡಿದರು.

Vijaya Karnataka Web 13 Apr 2019, 4:24 pm
ಕಲಬುರಗಿ: ಇಲ್ಲಿನ ವೀರಶೈವ ಕಲ್ಯಾಣ ಮಂಟಪದ ಎದುರಿನ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಹಿಂದುಳಿದ ವಗ೯ಗಳ ಸಮಾವೇಶದಲ್ಲಿ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥಿ೯ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಮುಖಂಡರು ತೀವ್ರ ವಾಗ್ದಾಳಿ ನಡೆಸಿದರು.
Vijaya Karnataka Web Eshwarappa


ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಖರ್ಗೆ ಕೇವಲ ಸ್ವಾಥ೯ದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಕಾರಣದಿಂದಲೇ ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನ್ಸೂರ್, ಮಾಲಕರೆಡ್ಡಿ ಅವರಂತಹ ಪ್ರಮುಖ ನಾಯಕರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇಪ೯ಡೆಯಾಗಿದ್ದಾರೆ. ತಮ್ಮ ಮಗನ ಹಿತಾಸಕ್ತಿ ಕಾಪಾಡುವುದು ಬಿಟ್ಟರೆ ಖಗೆ೯ ಅವರಿಗೆ ಮತ್ತಿನ್ನೇನೂ ಗೊತ್ತಿಲ್ಲ. ಇಷ್ಟಕ್ಕೂ ಈ ದೇಶಕ್ಕೆ ಪ್ರಿಯಾಂಕ್ ಖಗೆ೯ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಈಶ್ವರಪ್ಪ, ಸಿದ್ದರಾಮಯ್ಯ ಯಾವತ್ತೂ ಏನು ಸಾಧ್ಯವಿಲ್ಲ ಎಂದು ಚಾಲೆಂಜ್ ಹಾಕುತ್ತಾರೋ ಅವರ ಮಾತಿನ ವಿರುದ್ದವೇ ಆಗುತ್ತದೆ. 2014ರಲ್ಲಿ ಬಿಜೆಪಿ ಗೆಲ್ಲಲ್ಲ, ಮೋದಿ ಪ್ರಧಾನಿ ಆಗಲ್ಲ ಎಂದಿದ್ದರು. ಕೊನೆಗೆ ಬಿಜೆಪಿ ಬಹುಮತ ಪಡೆದು ಮೋದಿ ಪ್ರಧಾನಿ ಆದರು. ಉಮೇಶ್ ಜಾಧವ್ ರಾಜೀನಾಮೆ ಸಲ್ಲಿಸಿದಾಗ ರಾಜೀನಾಮೆ ಅಂಗೀಕಾರ ಆಗಲ್ಲ, ಜಾಧವ್ ಅನರ್ಹಗೊಳ್ಳುತ್ತಾರೆ ಎಂದಿದ್ದರು. ಅದು ಕೂಡ ಉಲ್ಟಾ ಆಗಿದೆ. ಕುಮಾರಸ್ವಾಮಿ ಅವರಪ್ಬನಾಣೆ ಮುಖ್ಯಮಂತ್ರಿ ಆಗಲ್ಲ ಎಂದಿದ್ದರು. ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ನಮ್ಮ ವಿರುದ್ಧ ಎಷ್ಟು ಹೇಳಿಕೆ ನೀಡುತ್ತಾರೋ ಅಷ್ಟೇ ನಮಗೆ ಒಳ್ಳೆಯದಾಗುತ್ತದೆ ಎಂದು ಲೇವಡಿ ಮಾಡಿದರು.

ಇದಕ್ಕೂ ಮುನ್ನ ಮಾಜಿ ಸಚಿವ ಬಾಬುರಾವ್ ಚಿಂಚನ್ಸೂರ್ ಮಾತನಾಡಿ, ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದೀಜಿ ಮತ್ತೊಮ್ಮೆ ಪ್ರಧಾನಿ ಆದ ಒಂದೆ ತಿಂಗಳಲ್ಲಿ ಕೋಲಿ ಸಮಾಜವನ್ನು ಪರಿಶಿಷ್ಟ ವಗ೯ಕ್ಕೆ ಸೇರ್ಪಡೆ ಮಾಡಿದ ಆದೇಶ ತರಲಾಗುವುದು ಎಂದು ಭರವಸೆ ನೀಡಿದರು.
ತಮ್ಮ ಎಂದಿನ ಹಾಸ್ಯಭರಿತ ಶೈಲಿಯಲ್ಲಿ ಮಾತನಾಡಿದ ಅವರು, ಖಗೆ೯ ಎಂಬ ಹಳೆ ಎತ್ತಿನ ಎದುರು ಬಿಜೆಪಿ ಉಮೇಶ್ ಜಾಧವ್ ಎಂಬ ಕಿಲಾರಿ ಎತ್ತನ್ನು ಕಣಕ್ಕಿಳಿಸಿದೆ. ಜಾಧವ್ ಕಣಕ್ಕಿಳಿಯುತ್ತಿದ್ದಂತೆಯೇ ಖರ್ಗೆ ಅವರಿಗೆ ನಡುಕ ಶುರುವಾಗಿದೆ. ಖರ್ಗೆ ಅವರಿಗೆ ಈಗಾಗಲೇ ಚಳಿ ಜ್ವರ ಶುರುವಾಗಿದೆ ಎಂದು ಲೇವಡಿ ಮಾಡಿದರು.

ಮಾಜಿ ಪ್ರಧಾನಿ ದೇವೇಗೌಡರ ಕುರಿತು ಟೀಕಿಸಿದ ಚಿಂಚನ್ಸೂರ್, ಪುಲ್ವಾಮಾ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚಿನ ಭಾರತೀಯ ಯೋಧರು ಹುತಾತ್ಮರಾದಾಗ ದೇವೇಗೌಡರಿಗೆ ಕಣ್ಣೀರು ಬರಲಿಲ್ಲ. ಆದರೆ ತಮಗೆ 28 ಮೊಮ್ಮಕ್ಕಳು ಆಗಲಿಲ್ಲವಲ್ಲ ಎಂದು ಈಗ ಅಳುತ್ತಿದ್ದಾರೆ. ಹಾಗೇನಾದರೂ ಆಗಿದ್ದರೆ ರಾಜ್ಯದ ಎಲ್ಲ 28 ಲೋಕಸಭಾ ಕ಼್ಷೇತ್ರಗಳಿಂದ ಒಬ್ಬೊಬ್ಬ ಮೊಮ್ಮಗನನ್ನು ಕಣಕ್ಕಿಳಿಸುತ್ತಿದ್ದರು. ಈಗ ಜೆಡಿಎಸ್ ಅಪ್ಪ-ಮಕ್ಕಳ ಪಾಟಿ೯ಯಾಗಿ ಉಳಿದಿಲ್ಲ. ತಾತ ಮೊಮ್ಮಕ್ಕಳ ಪಕ್ಷವಾಗಿದೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಖಗೆ೯ ಸೋತು ಮನೆಗೆ ಸೇರಿದರೆ ಮಾತ್ರ ಈ ಭಾಗ ಅಭಿವೃದ್ಧಿಯಾಗುತ್ತದೆ. ಈ ಬಾರಿ ಖಗೆ೯ ಅವರ ಕಾಂಗ್ರೆಸ್ ಭದ್ರ ಕೋಟೆಯನ್ನು ಛಿದ್ರಗೊಳಿಸುವ ಶಕ್ತಿ ಬಿಜೆಪಿ ಅಭ್ಯಥಿ೯ ಉಮೇಶ್ ಜಾಧವ್ ಅವರಿಗಿದೆ ಎಂದು ಭವಿಷ್ಯ ನುಡಿದರು.
ಗುಲ್ಬಗ೯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿ೯ ಡಾ.ಉಮೇಶ್ ಜಾಧವ್ ಮಾತನಾಡಿದರು.

ಜಿಲ್ಲೆಯ ಹಿರಿಯ ರೈತ ಮುಖಂಡ ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಅವರು ತಮ್ಮ ಹಲವು ಬೆಂಬಲಿಗರೊಂದಿಗೆ ಕೆ ಎಸ್ ಈಶ್ವರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇಪ೯ಡಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ