ಆ್ಯಪ್ನಗರ

ಮಂಡ್ಯ: ಕ್ರಮ ಸಂಖ್ಯೆ ನೀಡಿಕೆಯೂ ಕ್ರಮಬದ್ಧವಿಲ್ಲ: ಬಿಎಸ್‌ಪಿ ದೂರು

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ನೀಡಿಕೆಯೂ ಸರಿಯಾಗಿ ಆಗಿಲ್ಲ. ಪ್ರಾದೇಶಿಕ ಪಕ್ಷದ ಅಭ್ಯ್ಯರ್ಥಿಗೆ 1ನೇ ಕ್ರಮ ಸಂಖ್ಯೆ ನೀಡಿದ್ದು, ರಾಷ್ಟ್ರೀಯ ಪಕ್ಷವಾದ ಬಹುಜನ ಸಮಾಜಪಾರ್ಟಿಯ ಅಭ್ಯರ್ಥಿಗೆ 2ನೇ ಕ್ರಮಸಂಖ್ಯೆ ನೀಡಲಾಗಿದೆ. ಕ್ರಮಸಂಖ್ಯೆ ನೀಡಿಕೆಯಲ್ಲಿ ದೋಷವಾಗಿದೆ ಎಂದು ಬಿಎಸ್ ಅಭ್ಯರ್ಥಿ ಸೇರಿದಂತೆ ಪಕ್ಷದ ಮುಖಂಡರು ಆರೋಪಿಸಿದ್ದಾರೆ. ಸುಮಲತಾ ಅಂಬರೀಷ್ ಅವರಿಗೆ 20ನೇ ಕ್ರಮಾಂಕ ನೀಡಲಾಗಿದೆ.

Vijaya Karnataka Web 30 Mar 2019, 8:00 pm
ಚುನಾವಣಾ ಆಯೋಗದ ನಿರ್ದೇಶನದಂತೆ ಕನ್ನಡ ವರ್ಣಮಾಲೆ ಪ್ರಕಾರ ಕ್ರಮಸಂಖ್ಯೆ ನೀಡಲಾಗಿದೆ: ಡಿಸಿ ಸಮರ್ಥನೆ
Vijaya Karnataka Web Karnataka CEO Sanjiv Kumar


ಮಂಡ್ಯ: ನಿಖಿಲ್ ನಾಮಪತ್ರ ಸಿಂಧುತ್ವದ ಬಗೆಗಿನ ಗೊಂದಲವೇ ಇನ್ನೂ ಬಗೆದಿಲ್ಲ. ಇದೀಗ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಅಭ್ಯ್ಯರ್ಥಿಗಳಿಗೆ ನೀಡಿರುವ ಕ್ರಮ ಸಂಖ್ಯೆಯೂ ಕ್ರಮವಾಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಎಸ್‌ಪಿ ಭಾರತ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ನೀಡಿಕೆಯೂ ಸರಿಯಾಗಿ ಆಗಿಲ್ಲ. ಪ್ರಾದೇಶಿಕ ಪಕ್ಷದ ಅಭ್ಯ್ಯರ್ಥಿಗೆ 1ನೇ ಕ್ರಮ ಸಂಖ್ಯೆ ನೀಡಿದ್ದು, ರಾಷ್ಟ್ರೀಯ ಪಕ್ಷವಾದ ಬಹುಜನ ಸಮಾಜಪಾರ್ಟಿಯ ಅಭ್ಯರ್ಥಿಗೆ 2ನೇ ಕ್ರಮಸಂಖ್ಯೆ ನೀಡಲಾಗಿದೆ. ಕ್ರಮಸಂಖ್ಯೆ ನೀಡಿಕೆಯಲ್ಲಿ ದೋಷವಾಗಿದೆ ಎಂದು ಬಿಎಸ್ಪಿ ಅಭ್ಯರ್ಥಿ ಸೇರಿದಂತೆ ಪಕ್ಷದ ಮುಖಂಡರು ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಬಿಎಸ್‌ಪಿ ಅಭ್ಯರ್ಥಿಗೆ 1ನೇ ಕ್ರಮ ಸಂಖ್ಯೆ ಸಿಕ್ಕಿದೆ. ಆದರೆ, ಮಂಡ್ಯದಲ್ಲಿ 2ನೇ ಕ್ರಮಸಂಖ್ಯೆ ನೀಡಲಾಗಿದೆ ಎಂದು ನಂಜುಂಡಸ್ವಾಮಿ, ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ ಅವರು ಆರೋಪಿಸಿದ್ದಾರೆ. ಜತೆಗೆ, ನಗರಕ್ಕೆ ಶನಿವಾರ ಭೇಟಿ ನೀಡಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಅವರಿಗೂ ಈ ಸಂಬಂಧ ದೂರು ನೀಡಿದರು. ಕನ್ನಡ ವರ್ಣಮಾಲೆ ಪ್ರಕಾರ ಕ್ರಮ ಸಂಖ್ಯೆ ನೀಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ಅವರು ದೂರುದಾರರಿಗೆ ಪ್ರತಿಕ್ರಿಯಿಸಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದಾಗ ನನ್ನ ಕ್ರಮ ಸಂಖ್ಯೆ 1 ಆಗಿತ್ತು. ಅದರೆ, ಈ ಚುನಾವಣೆಯಲ್ಲಿ ನಮ್ಮದು ರಾಷ್ಟ್ರೀಯ ಪಕ್ಷವಾದರೂ ನಮ್ಮ ಅಭ್ಯರ್ಥಿಗೆ 2ನೇ ಕ್ರಮ ಸಂಖ್ಯೆ ನೀಡಲಾಗಿದೆ. ಕ್ರಮ ಸಂಖ್ಯೆ ನೀಡಿಕೆಯಲ್ಲಿ ನಮಗೆ ಅನ್ಯಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಪಾರದರ್ಶಕವಾಗಿ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿಲ್ಲವೆಂಬ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಡಿಸಿ, ಎಸ್ಪಿ ಅವರನ್ನು ಕೂಡಲೇ ಜಿಲ್ಲೆಯ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ.
ಎಂ.ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಎಸ್‌ಪಿ, ಮಂಡ್ಯ

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಇನ್ನೂ ಮೂವರು ಸುಮಲತಾ ಹೆಸರುಗಳ ನಡುವೆ 20ನೇ ಕ್ರಮಾಂಕ ನೀಡಲಾಗಿದೆ. ಈ ಬಗ್ಗೆ ಸುಮಲತಾ ಬೆಂಬಲಿಗರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಯೋಗದ ನಿರ್ದೇಶನದಂತೆ ಅಭ್ಯರ್ಥಿಗಳನ್ನು ರಾಷ್ಟ್ರೀಯ/ಪ್ರಾದೇಶಿಕ ಪಕ್ಷ, ನೊಂದಾಯಿತ/ನೊಂದಾಯಿತವಲ್ಲದ ಪಕ್ಷಗಳು ಹಾಗೂ ಪಕ್ಷೇತರ ಹೀಗೆ ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಕನ್ನಡ ವರ್ಣಮಾಲೆ ಪ್ರಕಾರವೇ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ನೀಡಲಾಗುತ್ತದೆ. ಆರಂಭದಲ್ಲಿ ರಾಷ್ಟ್ರೀಯ/ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ನೀಡಲಾಗುತ್ತದೆ. ಕನ್ನಡ ವರ್ಣಮಾಲೆ ಪ್ರಕಾರ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿಯ ಹೆಸರಿನ ಮೊದಲ ಅಕ್ಷರ ಆಧರಿಸಿ ಕ್ರಮಸಂಖ್ಯೆ ನೀಡಲಾಗಿದೆ. ಕಳೆದ ಉಪ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿ ಕ್ರಮಸಂಖ್ಯೆ 1, ಬಿಜೆಪಿ ಅಭ್ಯರ್ಥಿ ಕ್ರಮಸಂಖ್ಯೆ 2 ಆಗಿತ್ತು. ಅದರಂತೆ ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಸರು ‘ನಿ’ ಯಿಂದ ಪ್ರಾರಂಭವಾಗುವುದರಿಂದ 1ನೇ ಕ್ರಮ ಸಂಖ್ಯೆಯನ್ನು, ಬಿಎಸ್‌ಪಿ ಅಭ್ಯರ್ಥಿ ಹೆಸರು ‘ನಂ’ ಎಂದು ಆರಂಭವಾಗುವುದರಿಂದ 2ನೇ ಕ್ರಮಸಂಖ್ಯೆ ನೀಡಲಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ.
ಎನ್. ಮಂಜುಶ್ರೀ, ಜಿಲ್ಲಾಧಿಕಾರಿ, ಮಂಡ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ