ಆ್ಯಪ್ನಗರ

ನಿಖಿಲ್‌ ಸ್ವಾಗತಕ್ಕೆ ಸಿದ್ಧವಾಗ್ತಿದೆ 300 ಕೆಜಿ ತೂಕದ ಒಣದ್ರಾಕ್ಷಿ ಹಾರ!

ಚುನಾವಣಾ ಸಮಯ ಹಿನ್ನೆಲೆ ನಾಯಕರನ್ನು ಓಲೈಸಲು ಪಕ್ಷಗಳ ಕಾರ್ಯಕರ್ತರು ನಾನಾ ತಂತ್ರಗಳನ್ನು ಮಾಡುತ್ತಿರುತ್ತಾರೆ. ಇದೇ ರೀತಿ, ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಗೆ ಹಾರ ಹಾಕಲು ಜೆಡಿಎಸ್ ಕಾರ್ಯಕರ್ತರು ದುಬಾರಿ ಹಾರಗಳನ್ನು ರೆಡಿ ಮಾಡಿಸುತ್ತಿದ್ದಾರೆ.

TIMESOFINDIA.COM 28 Mar 2019, 12:00 pm
ಮೈಸೂರು: ಲೋಕಸಭೆ ಎಲೆಕ್ಷನ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯೂ ಜೋರಾಗಿದೆ. ಚುನಾವಣಾ ಸಮಯ ಹಿನ್ನೆಲೆ ಈ ಬಾರಿ ಬಾದಾಮಿ ಹಾಗೂ ಒಣದ್ರಾಕ್ಷಿಯಿಂದ ಮಾಡಿರುವ ಹಾರಗಳಿಗೆ ಡಿಮ್ಯಾಂಡ್‌ ಬಂದಿದೆ.
Vijaya Karnataka Web nikhil kumaraswamy


ಇನ್ನು, ಈ ರೀತಿಯ ಹಾರ ದೊಡ್ಡದಾದಷ್ಟೂ ಒಳ್ಳೆಯದು ಎಂಬುದೂ ಪಕ್ಷಗಳ ಅಭಿಪ್ರಾಯ ಎನ್ನಿಸುತ್ತೆ. ಇದೇ ರೀತಿ, ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಯನ್ನು ಸ್ವಾಗತಿಸಲು 300ಕೆಜಿಯ ಒಣದ್ರಾಕ್ಷಿ ಹಾರ ಹಾಕಿ ಸ್ವಾಗತಿಸಲು ಜೆಡಿಎಸ್‌ ಬೆಂಬಲಿಗರೊಬ್ಬರು ಸಿದ್ಧತೆ ನಡೆಸಿದ್ದಾರೆ.

ಕೆಆರ್‌ಎಸ್‌ ನಿವಾಸಿ ಕಾರ್ತಿಕ್‌ ಗೌಡ ಒಣ ದ್ರಾಕ್ಷಿಯ ಹಾರವನ್ನು ನಿಖಿಲ್‌ ಕುಮಾರಸ್ವಾಮಿಯನ್ನು ಸ್ವಾಗತಿಸಲು ಆರ್ಡರ್ ಮಾಡಿದ್ದಾರೆ. ಇನ್ನು, ಒಣದ್ರಾಕ್ಷಿಯ ಹಾರಗಳಿಗೆ 6 ಸಾವಿರದಿಂದ 3.5 ಲಕ್ಷ ರೂ. ವರೆಗೆ ಬೆಲೆ ಇದೆ ಎಂದು ಹೂವಿನ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.

ಒಣದ್ರಾಕ್ಷಿ ಹಾರ


ಈ ಹಾರಕ್ಕೆ ಎಷ್ಟು ಹಣ ನೀಡುತ್ತಿದ್ದಾರೆ ಎಂಬುದನ್ನು ಕಾರ್ತಿಕ್‌ ಗೌಡ ತಿಳಿಸಿಲ್ಲ. ಆದರೆ, ಗುಣಮಟ್ಟದ ಒಣ ದ್ರಾಕ್ಷಿಗೆ ಕೆಜಿಗೆ 600 ರೂ. ಬೆಲೆ ಇರುವುದರಿಂದ ಕನಿಷ್ಟ 1.8 ಲಕ್ಷ ರೂ. ಈ ಹಾರಕ್ಕೆ ಬೆಲೆ ಸಿಗುತ್ತದೆ. ಆದರೆ, ಅವರು ಮಾಡಿರುವ ಆರ್ಡರ್ ಇನ್ನೂ ಹೆಚ್ಚಿನ ಬೆಲೆಯುಳ್ಳದ್ದು ಎಂದು ತಿಳಿದುಬಂದಿದೆ.

ಇನ್ನು, 39 ವರ್ಷದ ಹೂವಿನ ಡೆಕೋರೇಟರ್ ಈ ಬಗ್ಗೆ ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್‌ ಇಂಡಿಯಾಗೆ ಮಾಹಿತಿ ನೀಡಿದ್ದು, ಗೌಡ ಅವರಿಂದ ನನಗೆ ಅರ್ಡರ್ ಬಂದಿದ್ದು, ಈ ಹಾರ ಮಾಡಲು ತಾನು 20 ಜನರಿಗೆ ಈ ಕೆಲಸ ವಹಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಇದು ದೊಡ್ಡ ಕೆಲಸ. ಆದರೆ, 20 ಜನ ಇರುವುದರಿಂದ ಒಂದು ದಿನ ಸಾಕು'' ಎಂದು ಹೇಳಿದ್ದಾರೆ.

ಅಲ್ಲದೆ, ''ಒಣದ್ರಾಕ್ಷಿ ಹಾರವನ್ನು ಪಡೆಯಲಿರುವ ಮೊದಲ ರಾಜಕೀಯ ವ್ಯಕ್ತಿ ನಿಖಿಲ್ ಕುಮಾರಸ್ವಾಮಿ ಆಗಲಿದ್ದಾರೆ. ಹಲವು ಹೂವುಗಳು, ಹಣ್ಣುಗಳು ಹಾಗೂ ಡ್ರೈ ಫ್ರೂಟ್‌ಗಳಿಂದ ಅನೇಕ ಹಾರಗಳನ್ನು ಮಾಡಿರುವ ಅನುಭವ ನನಗಿದೆ. ನನ್ನ ಸೇಬು ಹಾಗೂ ಒಣದ್ರಾಕ್ಷಿ ಹಾರಗಳು ಜನಪ್ರಿಯವಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ 8 ಸೇಬಿನ ಹಾರಗಳನ್ನು ಮಾಡಿದ್ದೇನೆ'' ಎಂದು ಧನರಾಜ್‌ ಮಾಹಿತಿ ನೀಡಿದ್ದಾರೆ.

ಇನ್ನು, ಕಾರ್ತಿಕ್‌ ಗೌಡ ಮಾತ್ರವಲ್ಲ, ಮಂಡ್ಯದ ಇತರೆ ಜೆಡಿಎಸ್‌ ಅಭಿಮಾನಿಗಳೂ ಸಹ ನಿಖಿಲ್‌ಗಾಗಿ ದೊಡ್ಡ ಹಾರಗಳಿಗಾಗಿ ಆರ್ಡರ್‌ ಮಾಡುತ್ತಿದ್ದಾರಂತೆ. ಇದೇ ರೀತಿ, ಅಂಬರೀಷ್‌ ಅಭಿಮಾನಿಗಳು ಸಹ ನಿಖಿಲ್ ಪ್ರತಿಸ್ಪರ್ಧಿ ಸುಮಲತಾ ಅಂಬರೀಶ್‌ಗೆ ಹಾರದ ಕೊಡುಗೆ ನೀಡಲು ಇದೇ ರೀತಿಯ ಹಾರಗಳಿಗೆ ಬೇಡಿಕೆ ಇಟ್ಟಿದ್ದಾರಂತೆ. ಇನ್ನು ಕೆಲವೇ ದಿನಗಳಲ್ಲಿ ಈ ಹಾರಗಳನ್ನು ಮೈಸೂರಿನಿಂದ ಮಂಡ್ಯಕ್ಕೆ ಕಳಿಸಲಾಗುವುದು ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ