ಆ್ಯಪ್ನಗರ

ಮುಖಾಮುಖಿಯಾದರೂ ಮುಖ ನೋಡದೆ ಹೋದ ಸಚಿವ ಸಿಎಸ್‌ಪಿ-ನಟ ದರ್ಶನ್

ನಟ ದರ್ಶನ್ ಹಾಗೂ ಕಾರ್ಯಕರ್ತರು ರಸ್ತೆ ಬದಿಯಲ್ಲಿ ನಿಂತಿದ್ದರು. ಆಗ ಮಂಡ್ಯ ಕಡೆಯಿಂದ ಮಳವಳ್ಳಿಗೆ ಹೋಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಬೆಂಗಾವಲು ವಾಹನದೊಂದಿಗೆ ಅದೇ ಮಾರ್ಗದಲ್ಲಿ ಬಂದರು. ಆ ವೇಳೆ ಪಕ್ಷೇತರ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದ ನಟ ದರ್ಶನ್ ಹಾಗೂ ಜೆಡಿಎಸ್ ಮುಖಂಡ, ಸಚಿವ ಪುಟ್ಟರಾಜು ಪರಸ್ಪರ ಎದುರಾದರು.

Vijaya Karnataka Web 12 Apr 2019, 6:44 pm
ಮಂಡ್ಯ: ಮಂಡ್ಯ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ನಟ ದರ್ಶನ್ ಅವರು ಪರಸ್ಪರ ಮುಖಾಮುಖಿಯಾದ ಘಟನೆ ಮಳವಳ್ಳಿ ತಾಲೂಕು ಚಿಕ್ಕಮುಲಗೂಡು ಗ್ರಾಮದ ಬಳಿ ಶುಕ್ರವಾರ ಆಕಸ್ಮಿಕವಾಗಿ ಸಂಭವಿಸಿತು.
Vijaya Karnataka Web Darshan


ಮಳವಳ್ಳಿ ತಾಲೂಕಿನಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಶುಕ್ರವಾರ ಕೈಗೊಂಡಿದ್ದ ನಟ ದರ್ಶನ್ ಅವರು ಕಿರುಗಾವಲು, ಮಿಕ್ಕೆರೆ ಮತ್ತಿತರ ಗ್ರಾಮಗಳಲ್ಲಿ ಪ್ರಚಾರ ಮುಗಿಸಿ ಚಿಕ್ಕಮುಲಗೂಡು ಗ್ರಾಮದ ಹೊರವಲಯಕ್ಕೆ ಆಗಮಿಸಿದರು. ಅದೇ ಸ್ಥಳದಲ್ಲಿ ದರ್ಶನ್ ಹಾಗೂ ಪ್ರಚಾರದಲ್ಲಿದ್ದವರಿಗೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಊಟದ ವ್ಯವಸ್ಥೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಕಾರ್ಯಕರ್ತರು ರಸ್ತೆ ಬದಿಯಲ್ಲಿ ನಿಂತಿದ್ದರು. ಆಗ ಮಂಡ್ಯ ಕಡೆಯಿಂದ ಮಳವಳ್ಳಿಗೆ ಹೋಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಬೆಂಗಾವಲು ವಾಹನದೊಂದಿಗೆ ಅದೇ ಮಾರ್ಗದಲ್ಲಿ ಬಂದರು. ಆ ವೇಳೆ ಪಕ್ಷೇತರ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದ ನಟ ದರ್ಶನ್ ಹಾಗೂ ಜೆಡಿಎಸ್ ಮುಖಂಡ, ಸಚಿವ ಪುಟ್ಟರಾಜು ಪರಸ್ಪರ ಎದುರಾದರು.

ಸಚಿವ ಪುಟ್ಟರಾಜು ಅವರು ಆಗಮಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಘೋಷಣೆ ಮೊಳಗಿಸುತ್ತಿದ್ದರು. ಆಗ ದಿಢೀರನೆ ಎದುರಾದ ನಟ ದರ್ಶನ್ ಮತ್ತು ತಂಡದವರನ್ನು ಕಂಡು ಸಚಿವ ಪುಟ್ಟರಾಜು ಅವರು ವಾಹನ ನಿಲ್ಲಿಸದೆ ಅಲ್ಲಿಂದ ಮುಂದೆ ಸಾಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌