ಆ್ಯಪ್ನಗರ

ಮಂಡ್ಯದಲ್ಲಿ ರಾಜಕೀಯ ಬೇಳೆ ಬೇಯಿಸಲು ಸಾಧ್ಯವಿಲ್ಲ: ಸುಮಲತಾಗೆ ಪುಟ್ಟರಾಜು ಟಾಂಗ್

ಅವಿವೇಕಿಗಳು ಕತ್ತಲಲ್ಲಿ ಕಲ್ಲು ಹೊಡೆದರೆ, ನಾವು ಹೆದರಲ್ಲ. ಇನ್ನೂ ಅದೆಷ್ಟು ಕಲ್ಲು ಹೊಡಿತಾರೋ ಹೊಡೆಸಲಿ ನೋಡೋಣ ಎಂದು ಸವಾಲು ಎಸೆದರು.

Vijaya Karnataka Web 23 Mar 2019, 3:38 pm
ಮಂಡ್ಯ: ಯಾರದ್ದೊ ಹೆಸರಲ್ಲಿ ಮಂಡ್ಯದಲ್ಲಿ ರಾಜಕೀಯ ಬೇಳೆ ಬೇಯಿಸಲು ಸಾಧ್ಯವಿಲ್ಲ ಎಂದು ಪ್ರಚಾರಕ್ಕಾಗಿ ನಟ ದರ್ಶನ್ ಮತ್ತು ಯಶ ಕರೆತರುತ್ತಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಗೆ ಸಚಿವ ಪುಟ್ಟರಾಜು ಟಾಂಗ್ ನೀಡಿದ್ದಾರೆ.
Vijaya Karnataka Web puttaraju


ನಗರದಲ್ಲಿ ಮಾತನಾಡಿದ ಅವರು, ಅವಿವೇಕಿಗಳು ಕತ್ತಲಲ್ಲಿ ಕಲ್ಲು ಹೊಡೆದರೆ, ನಾವು ಹೆದರಲ್ಲ. ಇನ್ನೂ ಅದೆಷ್ಟು ಕಲ್ಲು ಹೊಡಿತಾರೋ ಹೊಡೆಸಲಿ ನೋಡೋಣ ಎಂದು ಸವಾಲು ಎಸೆದರು.

ಡಿ ಬಾಸ್ ದರ್ಶನ್ ಮನೆ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು

ದರ್ಶನ್ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆ ಎಂದು ಸುಮಲತಾ ಆರೋಪಕ್ಕೆ ಪ್ರತಿಕ್ರಿಯಿದ ಅವರು, ಸುಮಲತಾ ಯಾವ ದೂರದೃಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಮಂಡ್ಯದ ಜನ ಸ್ವಾಭಿಮಾನಕ್ಕೆ ಹೆಸರಾದವರು. ದರ್ಶನ್ ಮೇಲೆ ನಡೆದಿರುವ ದಾಳಿಯನ್ನು ಖಂಡಿಸುತ್ತೇನೆ. ಯಾರೇ ದಾಳಿ ಮಾಡಿದರೂ ತಪ್ಪೆ ಎಂದು ಸಚಿವ ಪುಟ್ಟರಾಜು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ