ಆ್ಯಪ್ನಗರ

ಕರ್ನಾಟಕದಿಂದ ಮೋದಿ ಸ್ಪರ್ಧೆ: ಆಧಾರ ರಹಿತ ಸುದ್ದಿ ಎಂದ ಕೇಂದ್ರ ಸಚಿವ ಹರ್ಷವರ್ಧನ್‌

ಭಾರತದ ಚುನಾವಣೆ ಇಡೀ ವಿಶ್ವದ ಗಮನ ಮೇಲೆ ಗಮನ ಸೆಳೆದಿದೆ, ಇದಕ್ಕೆ ನರೇಂದ್ರ ಮೋದಿ ಅವರ ಜನಪ್ರಿಯ ಯೋಜನೆ ಮತ್ತು ಕೆಲಸಗಳೇ ಕಾರಣ ಎಂದರು.

Vijaya Karnataka Web 24 Mar 2019, 9:53 pm
ಬೆಳಗಾವಿ: ಕರ್ನಾಟಕದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡುತ್ತಾರೆ ಎಂಬುದು ಆಧಾರ ರಹಿತ ಸುದ್ದಿ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ ಹರ್ಷವರ್ಧನ್ ಸ್ಪಷ್ಟಡಿಸಿದ್ದಾರೆ.
Vijaya Karnataka Web ಮೋದಿ
ಮೋದಿ


ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರಕಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಚುನಾವಣೆ ಇಡೀ ವಿಶ್ವದ ಗಮನ ಮೇಲೆ ಗಮನ ಸೆಳೆದಿದೆ, ಇದಕ್ಕೆ ನರೇಂದ್ರ ಮೋದಿ ಅವರ ಜನಪ್ರಿಯ ಯೋಜನೆ ಮತ್ತು ಕೆಲಸಗಳೇ ಕಾರಣ ಎಂದರು.

ಬಿ.ಎಸ್. ಯಡಿಯೂರಪ್ಪ ಅವರ ಡೈರಿ ವಿಚಾರ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಸ್ತಾಪ ಮಾಡುತ್ತಿರುವ ರೆಫೇಲ್ ವಿಚಾರ ಅಪ್ರಸ್ತುತ ಚುನಾವಣೆಯ ಗೆಲುವಿನತ್ತಾ ಬಿಜೆಪಿ ಪ್ರಮುಖ ಗಮನ ಹರಿಸಿದೆ ಎಂದು ಸಚಿವ ಡಾ. ಹರ್ಷವರ್ಧನ್ ಹೇಳಿದರು.

ಧಾನಿ ನರೇಂದ್ರ ಮೋದಿ ಯುವ ಭಾರತದ ಸ್ಫೂರ್ತಿಯ ಸೆಲೆಯಂತಿದ್ದಾರೆ. ದಿನದ 24 ಗಂಟೆಯೂ ಕಾರ್ಯತತ್ಪರವಾಗಿರುವ ಅವರು ಜನಪರವಾದ ಕೆಲಸ ಮಾಡಲು ಎಂದೂ ಹಿಂಜರಿಯುವುದಿಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಪರಿಸರ ಖಾತೆ ಸಚಿವ ಡಾ.ಹರ್ಷವರ್ಧನ ಹೇಳಿದರು.

ಇಲ್ಲಿನ ಜೆಎನ್‌ಎಂಸಿ ಆವರಣದ ಕೆಎಲ್‌ಇ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಬುದ್ಧರೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ ನರೇಂದ್ರ ಮೋದಿಯ ಕ್ರಿಯಾಶೀಲತೆ ಮೆಚ್ಚಿಕೊಂಡಿದ್ದ ಜನ ಇವರು ಪ್ರಧಾನಿ ಆಗಬೇಕೆಂದು 2014ರಲ್ಲಿ ನಿಶ್ಚಯಿಸಿಕೊಂಡಿದ್ದರು. ಹೀಗಾಗಿ ವಿಶ್ವದ ನಾನಾ ಕಡೆಗಳಲ್ಲಿ ಕೆಲಸದಲ್ಲಿರುವವರೂ ಭಾರತಕ್ಕೆ ಬಂದು ಚುನಾವಣೆ ಪ್ರಚಾರ ಮಾಡಿದರು. ಇದೇ ಉಮೇದು ಈ ಬಾರಿಯೂ ಇದೆ. ಎಲ್ಲ ಕಡೆಗೂ ಮೋದಿ ಅಲೆ ಇದೆ ಎಂದರು.

ಮೋದಿ ಒಂದು ಉತ್ತಮ ವಿಚಾರದ ಕುರಿತು ಮೊದಲು ಗಂಭೀರ ಚಿಂತನೆ ಮಾಡುತ್ತಾರೆ. ನಂತರ ಕಾರ್ಯಯೋಜನೆ ರೂಪಿಸುತ್ತಾರೆ. ಆಮೇಲೆ ಅನುಷ್ಠಾನಕ್ಕೆ ಇಳಿಯುತ್ತಾರೆ. ಬ್ರಿಟಿಷ್‌ ಕಾಲದಿಂದ ಜನರಿಗೆ ಬೇಡವಾದ 1,500 ಕಾನೂನುಗಳನ್ನು ಕಸದ ಬುಟ್ಟಿಗೆ ಹಾಕಿದರು. ಜನರ ಹಿತ ಕಾಯಲು ಹೊಸ ಕಾನೂನುಗಳ ರಚನೆ ಮಾಡಿದರು. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಕ್ಯಾಬಿನೆಟ್‌ದಲ್ಲೇ ಭ್ರಷ್ಟಾಚಾರದ ವಿರುದ್ಧ ಗದಾ ಪ್ರಹಾರ ಮಾಡಿದರು. ಈ ಮೂಲಕ ಯುಪಿಎ ಕಾಲದಲ್ಲಿ ಹಗರಣಗಳಿಂದ ಬೇಸತ್ತಿದ್ದ ಜನತೆಗೆ ಸಮಾಧಾನ ತಂದರು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌