ಆ್ಯಪ್ನಗರ

ಕಾಶ್ಮೀರ ಕೊಂದು ಹಾಕಿದ ಮೋದಿ: ಗುಲಾಂ ನಬಿ ಆಜಾದ್‌

ಮತಗಳಿಗಾಗಿ ಎಲ್ಲೆಡೆ ಒಡೆದಾಳಲಾಗುತ್ತಿದೆ. ಸಂವಿಧಾನದಡಿ ನಡೆಯುವ ಕಾಂಗ್ರೆಸ್‌ನ ಸೀಟುಗಳೇಕೆ 2014ರಲ್ಲಿ ಕಮ್ಮಿಯಾದವು ಎನ್ನುವ ಪ್ರಶ್ನೆಗೆ ಸತ್ಯ ಹೇಳಿದ್ದಕ್ಕೆ ಕಡಿಮೆಯಾದವು. ಸುಳ್ಳು ಹೇಳಿದವರ ಸೀಟು ಹೆಚ್ಚಾದವು.

Vijaya Karnataka Web 20 Apr 2019, 5:19 pm
ಬೀದರ್: ಕಳೆದ ನಾಲ್ಕು ವರ್ಷಗಳಲ್ಲಿ ಕಾಶ್ಮೀರದಲ್ಲಿ ಅತಿ ಹೆಚ್ಚಿನ ಜನರು, ಸೈನಿಕರ ಸಾವಾಗಿದೆ. ದಾಳಿಗಳಾಗಿವೆ. ಪ್ರವಾಸೋದ್ಯಮ ಸಂಪೂರ್ಣ ಇಲ್ಲವಾಗಿದೆ. ಕಳೆದ 70 ವರ್ಷಗಳಲ್ಲಿ ಆಗದ್ದೆಲ್ಲ ಈ ನಾಲ್ಕೇ ವರ್ಷಗಳಲ್ಲಿ ಆಗಿದ್ದು, ಇಡೀ ಕಾಶ್ಮೀರವನ್ನು ಮೋದಿ ಕೊಂದು ಹಾಕಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಹೇಳಿದರು.
Vijaya Karnataka Web ಗುಲಾಮ್‌ ನಬಿ ಆಜಾದ್‌
ಗುಮಾಲ್‌ ನಬಿ ಆಜಾದ್‌


ಬೀದರ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿಯವರು ಬೆಂಕಿ ಹಚ್ಚಿದ್ದಾರೆ ಎಂದು ಅವರು ಆಪಾದಿಸಿದರು.

ಮತಗಳಿಗಾಗಿ ಎಲ್ಲೆಡೆ ಒಡೆದಾಳಲಾಗುತ್ತಿದೆ. ಸಂವಿಧಾನದಡಿ ನಡೆಯುವ ಕಾಂಗ್ರೆಸ್‌ನ ಸೀಟುಗಳೇಕೆ 2014ರಲ್ಲಿ ಕಮ್ಮಿಯಾದವು ಎನ್ನುವ ಪ್ರಶ್ನೆಗೆ ಸತ್ಯ ಹೇಳಿದ್ದಕ್ಕೆ ಕಡಿಮೆಯಾದವು. ಸುಳ್ಳು ಹೇಳಿದವರ ಸೀಟು ಹೆಚ್ಚಾದವು ಎಂದು ಆರೋಪಿಸಿದರು.

ಮಹಾಘಟಬಂಧನ್‌ಗೆ ಎಷ್ಟು ಸೀಟು ಲಭಿಸಲಿವೆ, ಯಾರು ಪ್ರಧಾನಿ ಅಭ್ಯರ್ಥಿ ಎನ್ನುವ ಪ್ರಶ್ನೆಗೆ, ಘಟಬಂಧನ್ ವರ್ಸಸ್ ಬಿಜೆಪಿ ನಡುವಿನ ಈ ಹೋರಾಟದಲ್ಲಿ ಸಂವಿಧಾನದಡಿ ಕೆಲಸ ಮಾಡುವವರಿಗೆ ಹೆಚ್ಚಿನ ಸೀಟು ಸಿಗಲಿದ್ದು, ಪ್ರಧಾನಿ ಯಾರು ಎಂಬುವುದನ್ನು ಘಟಬಂಧನ್ ನಿರ್ಧರಿಸಲಿದೆ ಎಂದು ಗುಲಾಮ್‌ ನಬಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ