ಆ್ಯಪ್ನಗರ

ಮೋದಿಯಿಂದ ಕರ್ನಾಟಕಕ್ಕೆ ವಿಶೇಷ ಯೋಜನೆ ಸಿಕ್ಕಿಲ್ಲ: ವೀರಪ್ಪ ಮೊಯ್ಲಿ

ನರೇಂದ್ರ ಮೋದಿ ಭಾರತೀಯ ಸಂಸ್ಕೃತಿಯ ವಿರೋಧಿ. ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮಹಾಘಟಬಂಧನ ಚುನಾವಣೆ ಪೂರ್ವ ಹೊಂದಾಣಿಕೆಯಾಗಿದೆ. ಮುಂದೆ ಮಹಾಘಟಬಂಧನಕ್ಕೆ ಚುನಾವಣೋತ್ತರ ಹೊಂದಾಣಿಕೆಯನ್ನು ಕಾಂಗ್ರೆಸ್ ಮಾಡಿಕೊಳ್ಳಲಿದೆ

Vijaya Karnataka 21 Apr 2019, 11:13 am
ರಾಯಚೂರು: 371ನೇ ಜೆ ವಿಧಿ ಜಾರಿಗೆ ಬಿಜೆಪಿ ಸರಕಾರವಿದ್ದಾಗ ವಿರೋಧಿಸಿದ್ದರು. ಆದರೆ ದಿ.ಧರ್ಮಸಿಂಗ್ ಹಾಗೂ ಖರ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರಯತ್ನದಿಂದ ಆ ಸೌಲಭ್ಯ ಸಾಧ್ಯವಾಗಿದೆ ಎಂದು ಕಾಂಗ್ರೆಸ್‌ ನಾಯಕ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
Vijaya Karnataka Web ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ


ರಾಯಚೂರಿನಲ್ಲಿ ವೀರಪ್ಪ ಮೊಯ್ಲಿ ಮಾತನಾಡಿದರು.

ಮಹಾದಾಯಿ ಯೋಜನೆಯಲ್ಲಿ ನೀರು ನೀಡಲು ಅವಕಾಶ ಇದ್ದರೂ ಕೇಂದ್ರ ಸರಕಾರ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಯಾವುದೇ ಯೋಜನೆ ವಿಶೇಷವಾಗಿ ಸಿಕ್ಕಿಲ್ಲ ಎಂದು ದೂರಿದರು.

ನರೇಂದ್ರ ಮೋದಿ ಭಾರತೀಯ ಸಂಸ್ಕೃತಿಯ ವಿರೋಧಿ. ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮಹಾಘಟಬಂಧನ ಚುನಾವಣೆ ಪೂರ್ವ ಹೊಂದಾಣಿಕೆಯಾಗಿದೆ.
ಮುಂದೆ ಮಹಾಘಟಬಂಧನಕ್ಕೆ ಚುನಾವಣೋತ್ತರ ಹೊಂದಾಣಿಕೆಯನ್ನು ಕಾಂಗ್ರೆಸ್ ಮಾಡಿಕೊಳ್ಳಲಿದೆ ಎಂದರು.

ಮಹಾಘಟಬಂಧನದಲ್ಲಿ ಹೆಚ್ಚು ಸ್ಥಾನ ಬರುವ ಪಕ್ಷದ ಮುಖಂಡರು ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ ಹೆಚ್ವು ಸ್ಥಾನ ಗೆಲ್ಲಲಿದೆ. ರಾಹುಲ್‌ ಗಾಂಧಿ ಪ್ರಧಾನಿಯಾಗಲಿದ್ದಾರೆ. ಕಾಶ್ಮೀರಕ್ಕೆ ನೀಡಿದ 370 ನೇ ವಿಧಿ ರದ್ದು ಮಾಡಬಾರದು. ಒಂದಿಷ್ಟು ಬದಲಾವಣೆ ತರಬಹುದು ಎಂದು ಮೊಯ್ಲಿ ತಿಳಿಸಿದರು.

ಎತ್ತಿನ ಹೊಳೆ ಯೋಜನೆ ಜಾರಿ ಅನಿವಾರ್ಯ. ಮೋದಿ ಅಲೆ ಎದುರಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ. ರಾಹುಲ್ ಗಾಂಧಿ ಪೌರತ್ವ ಪ್ರಶ್ನಿಸುವುದು ನಾನ್ ಸೆನ್ಸ್‌. ಕರ್ನಾಟಕದಲ್ಲಿ ಬಿಜೆಪಿ ಐದಾರು ಕಡೆ ಗೆದ್ದರೆ ಅದೇ ದೊಡ್ಡ ಸಾಧನೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ