ಆ್ಯಪ್ನಗರ

'ಮೋದಿ... ಮೋದಿ...' ಘೋಷಣೆ: ವಿನಯ್ ಕುಲಕರ್ಣಿಗೆ ಮುಜುಗರ

ವಿನಯ ಕುಲಕರ್ಣಿ ಅವರು ಮತದಾನ ಮಾಡಿ ಕ್ಷೇತ್ರದಲ್ಲಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಲು ಹೊರಟಿದ್ದರು. ಸಹಜವಾಗಿಯೇ ಗರಗ ಗ್ರಾಮಕ್ಕೆ ಭೇಟಿ ನೀಡಿ ಅವರು ಬಸ್ ನಿಲ್ದಾಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ನಿಂತಿದ್ದ ಸಂದರ್ಭದಲ್ಲಿ ಅದೇ ಸಮಯಕ್ಕೆ ಶಾಸಕ ಅಮೃತ ದೇಸಾಯಿ ಕೂಡ ಮತದಾನ ಮಾಡಲು ಗರಗ ಗ್ರಾಮದ ಮೂಲಕ ಹಂಗರಕಿ ಗ್ರಾಮಕ್ಕೆ ಹೊರಟಿದ್ದರು.

Vijaya Karnataka Web 23 Apr 2019, 4:39 pm
ಧಾರವಾಡ: ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಗರಗ ಗ್ರಾಮಕ್ಕೆ ಹೋದ ಸಂದರ್ಭದಲ್ಲಿ ಯುವಕರ ಗುಂಪು ಅವರ ಮುಂದೆಯೇ ಮೋದಿ... ಮೋದಿ ಎಂಬ ಘೋಷಣೆ ಕೂಗಿ ಅವರಿಗೆ ಮುಜುಗರ ಉಂಟು ಮಾಡಿದ ಘಟನೆ ಇಂದು ನಡೆದಿದೆ.

ವಿನಯ ಕುಲಕರ್ಣಿ ಅವರು ಮತದಾನ ಮಾಡಿ ಕ್ಷೇತ್ರದಲ್ಲಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಲು ಹೊರಟಿದ್ದರು. ಸಹಜವಾಗಿಯೇ ಗರಗ ಗ್ರಾಮಕ್ಕೆ ಭೇಟಿ ನೀಡಿ ಅವರು ಬಸ್ ನಿಲ್ದಾಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ನಿಂತಿದ್ದ ಸಂದರ್ಭದಲ್ಲಿ ಅದೇ ಸಮಯಕ್ಕೆ ಶಾಸಕ ಅಮೃತ ದೇಸಾಯಿ ಕೂಡ ಮತದಾನ ಮಾಡಲು ಗರಗ ಗ್ರಾಮದ ಮೂಲಕ ಹಂಗರಕಿ ಗ್ರಾಮಕ್ಕೆ ಹೊರಟಿದ್ದರು.

ಈ ವೇಳೆ ಅಮೃತ ದೇಸಾಯಿ ಅವರನ್ನು ನೋಡಿದ ಬಿಜೆಪಿ ಕಾರ್ಯಕರ್ತರು ಕೂಡ ಅವರ ಕಾರನ್ನೂ ಅಲ್ಲೇ ನಿಲ್ಲಿಸಿ, ವಿನಯ ಕುಲಕರ್ಣಿ ಅವರ ಕಾರಿನ ಮುಂದೆ ಮೋದಿ ಮೋದಿ ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು.

ಈ ವೇಳೆ ಕಾರ್ಯಕರ್ತರನ್ನು ಚದುರಿಸಿದ ಪೊಲೀಸರು ಅಲ್ಲಿಂದ ವಿನಯ ಕುಲಕರ್ಣಿ ಅವರ ವಾಹನಕ್ಕೆ ಮುಂದೆ ಹೋಗಲು ಅನುವು ಮಾಡಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ