ಆ್ಯಪ್ನಗರ

ಮೋದಿಯನ್ನು ಸೋಲಿಸಿ ಗುಜರಾತ್‌ಗೆ ಪ್ಯಾಕಪ್‌ ಮಾಡಬೇಕಾಗಿದೆ: ಚಂದ್ರಬಾಬು ನಾಯ್ಡು

ನಾನು ಬಿಜೆಪಿ ಹಾಗೂ ಎನ್ ಡಿಎ ಬಿಟ್ಟು ಬಂದೆ. ಆಗ ನನ್ನ ಬೆನ್ನಿಗೆ ನಿಂತವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿ. ಆಗಲೂ ಮೋದಿ ಮನಸ್ಸು ಕರಗಲಿಲ್ಲ. ಎರಡು ರೀತಿ ನೀವು ಆಲೋಚನೆ ಮಾಡಬೇಕು.

Vijaya Karnataka Web 21 Apr 2019, 3:22 pm
ಕೊಪ್ಪಳ: ಕನ್ನಡ ಮತ್ತು ತೆಲುಗು ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ಇದೆ. ಮುಂದಿನ ದಿನಗಳಲ್ಲಿ ಕನ್ನಡ ಪೂರ್ತಿ ಕಲಿತು ನಿಮ್ಮೆದುರು ಬರುತ್ತೇನೆ. ಇಲ್ಲಿರುವ ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ ನೋಡಿದ್ರೆ ನಾನು ಆಂಧ್ರದಲ್ಲೇ ಇದ್ದೇನೆ ಎನಿಸುತ್ತದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
Vijaya Karnataka Web ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು


ಗಂಗಾವತಿ ತಾಲೂಕಿನ ಶ್ರೀ ರಾಮನಗರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬಯ ನಾಯ್ಡು ಭಾಷಣ ಮಾಡಿದರು.

ಇವತ್ತು ನಾನಿಲ್ಲಿ‌ ಬರಲು ಕಾರಣ ದೇಶವನ್ನ ಉಳಿಸಬೇಕು ಎನ್ನುವುದು. ದೇಶದ ಪ್ರಧಾನಿ ಮೋದಿ ಮಾತು ಬರೀ ಮೋಸ, ಸುಳ್ಳು. ನನಗೆ ಯಾರ ಮೇಲೂ ದ್ವೇಷವಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಗೌರವವಿದೆ. ಜನ್ಮ ಭೂಮಿ ಮತ್ತು ಕರ್ಮ ಭೂಮಿ ಎರಡಕ್ಕೂ ಚಿರ ಋಣಿ ಆಗಿರಬೇಕು. ಈ ದೇಶವನ್ನು ಕಾಪಾಡಬೇಕಿದೆ ಎಂದರು.

ಎಲ್ಲ ರಾಜ್ಯಗಳಿಗೆ ನ್ಯಾಯ ಸಿಗಬೇಕಿದೆ. ಆದ್ರೆ, ಮೋದಿ ಎಲ್ಲ ರಾಜ್ಯಗಳಿಗೆ ಅನ್ಯಾಯ ಮಾಡಿದ್ದಾರೆ. ಆಂಧ್ರ ವಿಭಜನೆ ಮಾಡಿದ್ದರಿಂದ ನಾವು ಕಾಂಗ್ರೆಸ್ ವಿರೋಧಿಸಿದ್ದೇವೆ. ಇಡೀ ದೇಶ ಮೋದಿ ಮಾತು ಕೇಳಿ ಮೋಸ ಹೋಗಿದೆ. ನನಗೆ ಯಾರ ಮೇಲೂ ಕೋಪ ಇಲ್ಲ. ಈ ವಿಷಯ ತಿಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ವಿಷಯ ತಿಳಿಸುವುದು ನನ್ನ ಕರ್ತವ್ಯ. ನನ್ನ ಕರ್ತವ್ಯ ನಿರ್ವಹಿಸಲು ಇಲ್ಲಿಗೆ ಬಂದಿದ್ದೇನೆ. ನಾನು ಬಿಜೆಪಿ ಹಾಗೂ ಎನ್ ಡಿಎ ಬಿಟ್ಟು ಬಂದೆ. ಆಗ ನನ್ನ ಬೆನ್ನಿಗೆ ನಿಂತವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿ. ಆಗಲೂ ಮೋದಿ ಮನಸ್ಸು ಕರಗಲಿಲ್ಲ. ಎರಡು ರೀತಿ ನೀವು ಆಲೋಚನೆ ಮಾಡಬೇಕು. ಒಂದು ಕಡೆ‌ ಆಂಧ್ರ, ಮತ್ತೊಂದು ಕಡೆ ಕರ್ನಾಟಕ ಮತ್ತು ದೇಶಕ್ಕೆ ಅನ್ಯಾಯವಾಗಿದೆ ಎಂದು ನಾಯ್ಡು ಹೇಳಿದರು.

ದೇಶಕ್ಕೆ ಮಾರಕವಾಗಿದ್ದಾರೆ ಮೋದಿ. ಮೋದಿಯನ್ನು ಸೋಲಿಸಿ ಗುಜರಾತ್ ಗೆ ಓಡಿಸಬೇಕಾಗಿದೆ ಎಂದು ಚಂದ್ರಬಾಬು ನಾಯ್ಡು ಕರೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌