ಆ್ಯಪ್ನಗರ

43 ಪಕ್ಷ ಒಂದಾದರೂ ಮೋದಿ ಸೋಲು ಅಸಾಧ್ಯ: ಬಿ.ವೈ.ರಾಘವೇಂದ್ರ

ನಗರದ ಹೊಸಮನೆ ಬಡಾವಣೆಯಲ್ಲಿ ಭಾನುವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿರುವುದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದು ಹೇಳಿದರು.

Vijaya Karnataka Web 14 Apr 2019, 7:12 pm
ಶಿವಮೊಗ್ಗ: ಬಿಜೆಪಿಯನ್ನು ಸೋಲಿಸುವುದಕ್ಕಾಗಿ 23 ಪಕ್ಷ ಗಳು ಮಹಾಮೈತ್ರಿ ಮಾಡಿಕೊಂಡಿವೆ. ಇಂತಹ 43 ಪಕ್ಷಗಳು ಒಂದಾದರೂ ನರೇಂದ್ರ ಮೋದಿ ಸೋಲಿಸಲು ಸಾಧ್ಯವಿಲ್ಲ ಎಂದು ಶಿವಮೊಗ್ಗ ಲೋಕಸಭೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
Vijaya Karnataka Web Narendra Modi 1200


ನಗರದ ಹೊಸಮನೆ ಬಡಾವಣೆಯಲ್ಲಿ ಭಾನುವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿರುವುದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದು ಹೇಳಿದರು.

68 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಅಂಬೇಡ್ಕರ್‌ರಿಗೆ ಗೌರವ ನೀಡಿಲ್ಲ. ಅಂಬೇಡ್ಕರ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ವಿರುದ್ಧವೇ ಅಭ್ಯರ್ಥಿ ಹಾಕಿ ಸೋಲಿಸಿತ್ತು. ಕಾಂಗ್ರೆಸ್‌ ಬಡವರನ್ನು ಕೇವಲ ವೋಟ್‌ ಬ್ಯಾಂಕ್‌ಗೆ ಸೀಮಿತಗೊಳಿಸಿದೆ. ಈಗಲೂ ಗರೀಭಿ ಹಠಾವೋ ಎಂಬ ಘೋಷಣೆ ಕೂಗುತ್ತಿದೆಯೇ ವಿನಹ ವಾಸ್ತವದಲ್ಲಿ ಇವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

ದೇಶದಲ್ಲಿ ಇಂದಿರಾಗಾಂಧಿ, ರಾಜೀವ್‌ ಗಾಂಧಿ ಸ್ಮಾರಕ ಇದೆ. ಆದರೆ, ಅಂಬೇಡ್ಕರ್‌ ಸ್ಮಾರಕವಿಲ್ಲ. ಬಿಜೆಪಿ ಇಂತಹ ಪುಣ್ಯಾತ್ಮರಿಗೆ ಗೌರವಿಸುವ ಕೆಲಸ ಮಾಡಿದೆ. ನರೇಂದ್ರ ಮೋದಿ ಅವರು ಅಂಬೇಡ್ಕರ್‌ ವಾಸವಿದ್ದ, ಓದಿದ್ದ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದಾರೆ ಎಂದರು.

ಚುನಾವಣೆಯಲ್ಲಿ ಕೈ ಚಿಹ್ನೆಯೇ ಇಲ್ಲ:


ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಚಿಹ್ನೆಯೇ ಇಲ್ಲ. ಅಂತಹ ದುಸ್ಥಿತಿಗೆ ಪಕ್ಷ ತಲುಪಿದೆ. ಕಾಂಗ್ರೆಸ್‌ ಮುಕ್ತ ದೇಶ ಮಾಡಲು ದೇವೇಗೌಡರೇ ಮುಂದಾಗಿದ್ದು, ಅವರೇ ಈ ಕೆಲಸವನ್ನು ಸಾಕಾರಗೊಳಿಸಲಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಘವೇಂದ್ರ ಎಂಪಿ, ಯಡಿಯೂರಪ್ಪ ಸಿಎಂ:


ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ನನಗೆ 1 ಲಕ್ಷ ಮತ ನೀಡಿ, 40 ಸಾವಿರ ಲೀಡ್‌ ಕೊಟ್ಟಿದ್ದೀರಿ. ರಾಘವೇಂದ್ರ ಅವರಿಗೂ ಆರ್ಶೀದಿಸಬೇಕು. ಬರುವ ದಿನಗಳಲ್ಲಿ ರಾಘವೇಂದ್ರ ಎಂಪಿ, ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ನಗರಾಧ್ಯಕ್ಷ ನಾಗರಾಜ್‌, ರೈತ ಮೋರ್ಚಾ ಉಪಾಧ್ಯಕ್ಷ ದತ್ತಾತ್ರಿ, ಜ್ಞಾನೇಶ್ವರ್‌, ಸೋಮಣ್ಣ ಇತರರಿದ್ದರು.

ಹೊಸಮನೆ ಬಡಾವಣೆಯ ಎಲ್ಲ ಸಮಸ್ಯೆಗಳನ್ನು ಶಾಸಕ ಈಶ್ವರಪ್ಪ ಅವರು ಬಗೆಹರಿಸಿಕೊಡಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಮತ ನೀಡಿ ಗೆಲ್ಲಿಸಿದ್ದೀರಿ. ನನಗೆ ಅದಕ್ಕಿಂತ ಒಂದು ಮತ ಹೆಚ್ಚು ಕೊಡಿ ಸಾಕು. ಅತ್ಯಂತ ಕಡಿಮೆ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದೇನೆ. ಮುಂದೆಯೂ ನಿಮ್ಮ ಆಶೀರ್ವಾದ ಬೇಕು- ಬಿ.ವೈ.ರಾಘವೇಂದ್ರ, ಬಿಜೆಪಿ ಅಭ್ಯರ್ಥಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ