ಆ್ಯಪ್ನಗರ

ಕೋಟೆ ನಾಡು ದುರ್ಗದಲ್ಲಿ ನಾಯಕರಾದ ನಾರಾಯಣಸ್ವಾಮಿ

ಬಿಜೆಪಿಯ ಎ ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್‌ನ ಬಿಎನ್‌ ಚಂದ್ರಪ್ಪ ನಡುವೆ ಚಿತ್ರದುರ್ಗದಲ್ಲಿ ಭಾರಿ ಹಣಾಹಣಿ ಏರ್ಪಟ್ಟಿತ್ತು. ಆದರೆ ಕೊನೆ ಕ್ಷಣದಲ್ಲಿ ನಾರಾಯಣಸ್ವಾಮಿ ಕಾಂಗ್ರೆಸ್‌ನ ಚಂದ್ರಪ್ಪ ವಿರುದ್ಧ 80 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

Vijaya Karnataka Web 23 May 2019, 7:10 pm
ಚಿತ್ರದುರ್ಗ: ಕೋಟೆ ನಾಡು, ಗಂಡು ಮೆಟ್ಟಿನ ನಾಡು ಎಂದೇ ಬಿಂಬಿತವಾಗಿದ್ದ ಚಿತ್ರದುರ್ಗದಲ್ಲಿ ಬಿಜೆಪಿ ಭಾರಿ ಗೆಲುವು ದಾಖಲಿಸಿದೆ.
Vijaya Karnataka Web ಬಿಜೆಪಿ
ಬಿಜೆಪಿ


ಬಿಜೆಪಿಯ ಎ ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್‌ನ ಬಿಎನ್‌ ಚಂದ್ರಪ್ಪ ನಡುವೆ ಚಿತ್ರದುರ್ಗದಲ್ಲಿ ಭಾರಿ ಹಣಾಹಣಿ ಏರ್ಪಟ್ಟಿತ್ತು. ಆದರೆ ಕೊನೆ ಕ್ಷಣದಲ್ಲಿ ನಾರಾಯಣಸ್ವಾಮಿ ಕಾಂಗ್ರೆಸ್‌ನ ಚಂದ್ರಪ್ಪ ವಿರುದ್ಧ 80 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಬಿಜೆಪಿ ಅಭ್ಯರ್ಥಿಗೆ 6,26,015 ಲಕ್ಷ ಮತ
ಕಾಂಗ್ರೆಸ್‌ ಅಭ್ಯರ್ಥಿಗೆ 5,45,948
ಒಟ್ಟು ಮತ 12,43,269

ಮೈತ್ರಿಯ ಬಲದ ಕಾರಣಕ್ಕೆ ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ನ ಸಂಸದ ಬಿ.ಎನ್‌.ಚಂದ್ರಪ್ಪ ಅನಿರೀಕ್ಷಿತ ಸೋಲು ಕಂಡಿದ್ದಾರೆ. ಬಿ.ಎನ್‌.ಚಂದ್ರಪ್ಪ 5,45,948 ಮತ ಪಡೆದರೆ, ಬಿಜೆಪಿಯ ಎ.ನಾರಾಯಣಸ್ವಾಮಿ 6,26,015 ಲಕ್ಷ ಮತ ಪಡೆದು 80,067 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಎ.ನಾರಾಯಣಸ್ವಾಮಿ 1815 ಅಂಚೆ ಮತ ಪಡೆದರೆ, ಚಂದ್ರಪ್ಪ 789 ಅಂಚೆ ಮತ ಪಡೆದರು. 32 ಅಂಚೆ ಮತಗಳು ಕುಲಗೆಟ್ಟಿದ್ದವು. ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ಪಕ್ಷಗಳು ಹಾಗೂ ಪಕ್ಷೇತರರು ಒಟ್ಟು 73,588 ಮತ ಪಡೆದಿದ್ದಾರೆ. ಒಟ್ಟು 12,43,269 ಮತ ಚಲಾವಣೆಯಾಗಿದ್ದವು.

ಮುನ್ನಡೆದ ಬಿಜೆಪಿ

ಅಂಚೆ ಮತಗಳ ಎಣಿಕೆಯಿಂದ ಆರಂಭಿಸಿ ಮತ ಎಣಿಕೆ ಪ್ರಕ್ರಿಯೆ ಮುಗಿಯುವವರೆಗೆ ಬಿಜೆಪಿಯ ಎ. ನಾರಾಯಣಸ್ವಾಮಿ ನಿರಂತರವಾಗಿ ಮುನ್ನಡೆ ಸಾಧಿಸುತ್ತಲೇ ಹೊರಟರು. ಕೆಲವೊಂದು ಸುತ್ತುಗಳಲ್ಲಿ ಲೀಡ್‌ ಓಟುಗಳ ಪ್ರಮಾಣ ಕೊಂಚ ವ್ಯತ್ಯಯವಾದದ್ದು ಹೊರತುಪಡಿಸಿದರೆ ನಿರಂತರವಾಗಿ ಮುನ್ನಡೆ ಸಾಧಿಸುತ್ತಲೇ ಬಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ