ಆ್ಯಪ್ನಗರ

ನರೇಂದ್ರ ಮೋದಿ ಕಲಿಯುಗದ ರಾವಣ: ಸಿಎಂ ಇಬ್ರಾಹಿಂ

ಕಾಂಗ್ರೆಸ್‌ ಈ ನಾಡಿಗೆ ಧೀಮಂತ ನಾಯಕರನ್ನ ಕೊಟ್ಟಿದೆ. ಬಿಜೆಪಿ ನೀರವ್ ಮೋದಿ, ಲಲಿತ್ ಮೋದಿ, ಮಲ್ಯ, ಈಗ ಮೋದಿಯಂತ ಭ್ರಷ್ಟರನ್ನ ನೀಡಿದೆ‌. ಬಿಜೆಪಿ ಅಭ್ಯರ್ಥಿ ಎ.ಮಂಜು ಹುಚ್ಚ ಮುಂಡೇದು. ಇದು ಮೋದಿ ಹೆಸರನ್ನ ಹೇಳಿಕೊಂಡು ಓಡಾಡುತ್ತಿದೆ ಎಂದರು.

Vijaya Karnataka Web 7 Apr 2019, 9:35 pm
ಹಾಸನ:ನಾನು ಇಂದು ಹಾಸನಕ್ಕೆ ಜಾತಿಯ ವ್ಯಾಮೋಹದಿಂದ ಬಂದಿಲ್ಲ. ಬಿಜೆಪಿಯವರಿಗೆ ಸರ್ವೇಜನ ಸುಖಿನೋ ಬವಂತು ಎಂಬ ಮಾತು ಗೊತ್ತಿಲ್ಲ. ಮೋದಿ ಕಲಿಯುಗದ ರಾವಣ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಟೀಕೆ ಮಾಡಿದರು.
Vijaya Karnataka Web ಮೋದಿ, ಸಿಎಂ ಇಬ್ರಾಹಿಂ
ಮೋದಿ, ಸಿಎಂ ಇಬ್ರಾಹಿಂ


ಹಾಸನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಿ.ಎಂ ಇಬ್ರಾಹಿಂ ಭಾಷಣ ಮಾಡಿದರು.

ಮೋದಿ 56 ಇಂಚಿನ ಎದೆ ಇದೆ ಎಂದು ಹೇಳುತ್ತಾರೆ. ಆದರೆ ಅದರಲ್ಲಿ ಕರುಣೆಯಿಲ್ಲ. ಮೋದಿಯನ್ನ ಟೀಕೆ ಮಾಡಿದ ಕೂಡಲೇ ದೇಶ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮೋದಿ ನೀನ್ ಹೋದಿ ಎಂಬ ಮಾತಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಈ ನಾಡಿಗೆ ಧೀಮಂತ ನಾಯಕರನ್ನ ಕೊಟ್ಟಿದೆ. ಬಿಜೆಪಿ ನೀರವ್ ಮೋದಿ, ಲಲಿತ್ ಮೋದಿ, ಮಲ್ಯ, ಈಗ ಮೋದಿಯಂತ ಭ್ರಷ್ಟರನ್ನ ನೀಡಿದೆ‌. ಬಿಜೆಪಿ ಅಭ್ಯರ್ಥಿ ಎ.ಮಂಜು ಹುಚ್ಚ ಮುಂಡೇದು. ಇದು ಮೋದಿ ಹೆಸರನ್ನ ಹೇಳಿಕೊಂಡು ಓಡಾಡುತ್ತಿದೆ ಎಂದರು.

ಮೋದಿಯನ್ನ ದೇವೇಗೌಡರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಮೋದಿ‌ ಧರಿಸುವ ಸೂಟ್ 10 ಲಕ್ಷ. ದೇವೇಗೌಡರು ಧರಿಸುವ ಬಟ್ಟೆ 350 ರೂ. ಮೋದಿ ಊಟ ಮಾಡೋಕೆ ಲಕ್ಷ ಲಕ್ಷ ಹಣ ವೆಚ್ಚ ಮಾಡ್ತಾರೆ. ದೇವೇಗೌಡರು ಉಪ್ಪುಸಾರು, ಅನ್ನ, ಮುದ್ದೆ ತಿಂತಾರೆ. ಮೋದಿಗೆ ದೇವೇಗೌಡರಿಗೆ ಹೋಲಿಕೆ ಎಲ್ಲಿ ಎಂದು ಪ್ರಶ್ನಿಸಿದರು.

ಪುಲ್ವಾಮ ಘಟನೆ ನೆಡೆದದ್ದು ಮಧ್ಯಾಹ್ನ 3 ಗಂಟೆಗೆ. ಆದ್ರೆ ಮೋದಿ‌ ರಾತ್ರಿ 8 ಗಂಟೆವರೆಗೂ ಫೋಟೋ ಸೆಷನ್ ಮಾಡ್ತಿದ್ರು. ಇವರು ಸೈನಿಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲಾ. ನೋಟು ಅಮಾನ್ಯೀಕರಣದಲ್ಲಿ‌‌ ಮೋದಿ ವಿಫಲರಾಗಿದ್ದಾರೆ. ನಾಥೋರಾಮ್ ಗೂಡ್ಸೆಗೆ ಹಿಂದೂ‌ ಮುಸ್ಲಿಮರನ್ನ ಬೇರೆ ಮಾಡೋಕೆ‌ ಆಗಿಲ್ಲ. ಇನ್ನ ಈ ನರೇಂದ್ರ ಮೋದಿಗೆ ಸಾಧ್ಯವೇ ಎಂದು ಇಬ್ರಾಹಿಂ ತಿಳಿಸಿದರು.

2022 ಕ್ಕೆ ಈ ದೇಶಕ್ಕೆ ಬದಲಾವಣೆ ಸಿಗುತ್ತದೆ ಎಂದು ಅನಂತಕುಮಾರ್ ಹೆಗಡೆ ಹೇಳುತ್ತಾರೆ. ರಾಜ್ಯಸಭೆಯಲ್ಲಿ‌ 2022 ಕ್ಕೆ ಬಿಜೆಪಿ ಸದಸ್ಯರು ಹೆಚ್ಚಾಗುತ್ತಾರೆ. ಆಗ ಸಂವಿಧಾನ ಬದಲು ಮಾಡಲಾಗುತ್ತೆ ಎಂದು ಹೇಳತ್ತಾರೆ. ತೇಜಸ್ವಿ ಸೂರ್ಯಗೆ ಅವರಮ್ಮ ಅಮಾವಾಸ್ಯೆ ಎಂದು ಹೆಸರಿಡಬೇಕಿತ್ತು. ಸಂವಿಧಾನ ಸುಟ್ಟು ಹಾಕಬೇಕು ಎಂದು ಹೇಳೋ‌ ಈ ಬಾಲಕನಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಎಲ್ಲವನ್ನು ಬಿಟ್ಟು ಬಂದಿದ್ದೇನೆ ಎನ್ನುತ್ತಾರೆ. ಅವರು ಬಿಟ್ಟು ಬಂದಿರೋದಾದ್ರು ಏನು.? ಅವರಪ್ಪ ಏನು ಮಹರಾಜನೇ? ಇವರೇನು ಐಎಎಸ್ ಅಧಿಕಾರಿಯೇ? ಅಡ್ವಾಣಿ, ಮುರುಳಿ‌ ಮನೋಹರ ಜೋಷಿಯನ್ನೇ ಬಿಡದ ಈತ ಇನ್ನು ಅಂಬೇಡ್ಕರ್ ಬರೆದ ಸಂವಿಧಾನವನ್ನ ಬಿಡ್ತಾನಾ ಎಂದರು.

ವಿಶ್ವದಲ್ಲಿ ಎಲ್ಲಿ ನೋಡಿದ್ರೂ ಮೋದಿ ಯಾವ ದೇಶದಲ್ಲಿ ನೋಡಿದ್ರು ಮೋದಿ. ಭಾರತಕ್ಕೆ ಒಬ್ಬ NRI ಪ್ರಧಾನಿ‌ ಸಿಕ್ಕಂತಾಗಿದೆ ಎಂದು ವ್ಯಂಗ್ಯವಾಡಿದರು.

ವಾಜಪೇಯಿಯವರು ಇಂದಿರಾಗಾಂಧಿ ಯವರಿಗೆ ಭಾರತದ ದುರ್ಗಿ ಎಂದು ಕರೆದಿದ್ದರು. ಇದನ್ನು ಎಂದು ಇಂದಿರಾಗಾಂಧಿ ದುರುಪಯೋಗ ಪಡಿಸಿಕೊಳ್ಳಲಿಲ್ಲ. ಆದರೆ ಮೋದಿ ಎಲ್ಲವನ್ನು ತಮ್ಮ ಪಬ್ಲಿಸಿಟಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಇಬ್ರಾಹಿಂ ಲೇವಡಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ