ಆ್ಯಪ್ನಗರ

ಫಲಿತಾಂಶಕ್ಕೆ ಮುನ್ನವೇ ಸಂಸದ ಆದ ನಿಖಿಲ್‌

ಫಲಿತಾಂಶ ಬರುವುದಕ್ಕೂ ಮುನ್ನವೇ ನಿಖಿಲ್‌ ಕುಮಾರಸ್ವಾಮಿ ಸಂಸದರಾಗಿದ್ದಾರೆ. ಹೀಗೊಂದು ನಾಮಫಲಕವನ್ನು ನಿಖಿಲ್‌ ಅಭಿಮಾನಿಯೊಬ್ಬರು ಮಾಡಿದ್ದಾರೆ.

Vijaya Karnataka Web 19 Apr 2019, 7:52 pm
ಮಂಡ್ಯ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಇಡೀ ಇಂಡಿಯಾವೇ ಮಂಡ್ಯ ಮೇಲೆ ಕಣ್ಣು ನೆಟ್ಟಿತ್ತು.
Vijaya Karnataka Web ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ


ಅದರಂತೆ ಮಂಡ್ಯದಲ್ಲಿ ದಾಖಲೆಯ ಶೇಕಡ 80ರಷ್ಟು ಮತದಾನ ಕೂಡ ಆಗಿದೆ.

ಮತದಾನ ಮರುದಿನವೇ ಹಲವಾರು ಬೆಳವಣಿಗೆಗಳು ಮಂಡ್ಯದಲ್ಲಿ ನಡೆದಿದೆ.

ಫಲಿತಾಂಶ ಬರುವುದಕ್ಕೂ ಮುನ್ನವೇ ನಿಖಿಲ್‌ ಕುಮಾರಸ್ವಾಮಿ ಸಂಸದರಾಗಿದ್ದಾರೆ.

ಹೀಗೊಂದು ನಾಮಫಲಕವನ್ನು ನಿಖಿಲ್‌ ಅಭಿಮಾನಿಯೊಬ್ಬರು ಮಾಡಿದ್ದಾರೆ.

ಅಭಿಮಾನಿಯ ಉಡುಗೊರೆ


ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹರಿಯಬಿಟ್ಟಿದ್ದಾರೆ.

ನಿಖಿಲ್‌ ಕೆ. ಸಂಸದರು, ಮಂಡ್ಯ ಲೋಕಸಭಾ ಕ್ಷೇತ್ರ ಎಂಬ ಬೋರ್ಡ್‌ ಅನ್ನು ಫೇಸ್‌ಬುಕ್‌ ಗೋಡೆಯ ಮೇಲೆ ಅಂಟಿಸಲಾಗಿದೆ.

ಕರ್ನಾಟಕ ಜೆಡಿಎಸ್‌ ಪಕ್ಷದ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಬೋರ್ಡ್‌ ರಾರಾಜಿಸುತ್ತಿದೆ.

ನಿಖಿಲ್‌ ಅಭಿಮಾನಿಯೊಬ್ಬರು ಈ ಉಡುಗೊರೆಯನ್ನು ನೀಡಿದ್ದಾರೆ.

ಮಂಡ್ಯದಲ್ಲಿ ಚುನಾವಣೆ ಮುಗಿದರೂ ಅಲ್ಲಿ ಇನ್ನೂ ಕುತೂಹಲ ಇರುವುದು ಕಂಡುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌