ಆ್ಯಪ್ನಗರ

ಮಂಡ್ಯ: ಕಾಂಗ್ರೆಸ್‌ ಚಕ್ರವ್ಯೂಹದಲ್ಲಿ ನಿಖಿಲ್‌ ಸಿಲುಕಿದ್ದಾನೆ ಎಂದ ಕುಮಾರಸ್ವಾಮಿ

ಮಂಡ್ಯದಲ್ಲಿ ಹೆಸರಿಗೆ ಪಕ್ಷೇತರ ಅಭ್ಯರ್ಥಿಯಷ್ಟೇ ಅವರಿಗೆ ಕಾಂಗ್ರೆಸ್, ಬಿಜೆಪಿ, ರೈತ ಸಂಘದ ಜತೆ ಟಿವಿ ಮೀಡಿಯಾ ಬೆಂಬಲವಿದೆ. ಇಷ್ಟೆಲ್ಲಾ ಸೇರಿ ಜೆಡಿಎಸ್ ಮಣಿಸೋದಕ್ಕೆ ತಂತ್ರ ರೂಪಿಸಲಾಗಿದೆ. ಒಂದು ರೀತಿ ಚಕ್ರವ್ಯೂಹ ರಚಿಸಲಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

Vijaya Karnataka Web 5 Apr 2019, 7:19 pm
ಕೊಪ್ಪ: ಮಂಡ್ಯದಲ್ಲಿ ಕನಿಷ್ಠ 5 ಲಕ್ಷ ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web ಕುಮಾರಸ್ವಾಮಿ
ಕುಮಾರಸ್ವಾಮಿ


ಕೊಪ್ಪದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಡ್ಯದಲ್ಲಿ ಹೆಸರಿಗೆ ಪಕ್ಷೇತರ ಅಭ್ಯರ್ಥಿಯಷ್ಟೇ ಅವರಿಗೆ ಕಾಂಗ್ರೆಸ್, ಬಿಜೆಪಿ, ರೈತ ಸಂಘದ ಜತೆ ಟಿವಿ ಮೀಡಿಯಾ ಬೆಂಬಲವಿದೆ. ಇಷ್ಟೆಲ್ಲಾ ಸೇರಿ ಜೆಡಿಎಸ್ ಮಣಿಸೋದಕ್ಕೆ ತಂತ್ರ ರೂಪಿಸಲಾಗಿದೆ. ಒಂದು ರೀತಿ ಚಕ್ರವ್ಯೂಹ ರಚಿಸಲಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಮಂಡ್ಯದಲ್ಲಿ ಇರೋದು ಜೆಡಿಎಸ್ ಅಭ್ಯರ್ಥಿ. ಇವರ ವಿರುದ್ಧ 3 ತಿಂಗಳಿಂದ ಮಾಧ್ಯಮದಲ್ಲಿ ಬರ್ತಿರೋದೆ ಬೇರೆ ಸ್ಥಳಿಯವಾಗಿ ಅಲ್ಲಿ ಇರೋ ಪರಿಸ್ಥಿತಿಯೇ ಬೇರೆ. ಮೇ 23ರ ಬಳಿಕ ನಿಮಗೆ ಉತ್ತರಿಸುತ್ತೇನೆ ಎಂದರು.

ಮಾಧ್ಯಮಗಳು ಅವರ ಜತೆ ಸೇರಿದ್ದಾರೆ. ದೇಶದಲ್ಲಿ ಮಂಡ್ಯ ಬಿಟ್ಟು ಬೇರೆ ಕಡೆ ಎಲೆಕ್ಷನ್ ನಡೆಯುತ್ತಿಲ್ವಾ. ಎಲ್ಲಾ ರೀತಿಯ ಚಕ್ರವ್ಯೂಹ ರಚನೆ ಮಾಡಿದ್ದಾರೆ. ಮಂಡ್ಯ ಜನ ಎಲ್ಲವನ್ನೂ ಮೆಟ್ಟಿ ನಿಲ್ತಾರೆ ಎಂದು ಸಿಎಂ ತಿಳಿಸಿದರು.

ಐಟಿ ರೇಡ್ ಉದ್ದೇಶ ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರ ಮಾರ್ಗದರ್ಶನದಲ್ಲಿ ರೇಡ್ ನಡೆಯುತ್ತಿದೆ. ಅದಕ್ಕೆಲ್ಲಾ ಸೊಪ್ಪು ಹಾಕದೆ ಹೋರಾಟಕ್ಕೆ ಹೊರಟಿದ್ದೇವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌