ಆ್ಯಪ್ನಗರ

ನಮ್ಮ ತಾತ, ಅಪ್ಪನಿಗೆ ತೋರಿದ ಪ್ರೀತಿಯನ್ನು ನನಗೂ ಕೊಡಿ: ನಿಖಿಲ್‌ ಕುಮಾರಸ್ವಾಮಿ

ಮಂಡ್ಯದ ಜನರಿಗಾಗಿ ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ. ನಿಮ್ಮ ಮನೆ ಮಗನಾಗಿ ಇರುತ್ತೇನೆ. ಜೆಡಿಎಸ್- ಕಾಂಗ್ರೆಸ್‌ನವರು ಅಣ್ಣತಮ್ಮಂದಿರಂತೆ ಇರುತ್ತೇವೆ. ಯಾರ ಮನಸ್ಸಿಗೂ ನೋವಾಗದಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತೇನೆ

Vijaya Karnataka Web 25 Mar 2019, 8:57 pm
ಮಂಡ್ಯ: ಕುಮಾರಣ್ಣನ ಪ್ರತಿನಿಧಿಯಾಗಿ ನಾನಿಲ್ಲಿಗೆ ಬಂದಿದ್ದೇನೆ. ನಿಮ್ಮೊಂದಿಗೆ ಅತ್ಯಂತ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಇರುತ್ತೇನೆ. ಹೀಗಾಗಿ ತಾತ, ಅಪ್ಪನಿಗೆ ತೋರಿದ ಪ್ರೀತಿಯನ್ನು ನನಗೂ ಕೊಡಿ ಎಂದು ಜೆಡಿಎಸ್-ಕಾಂಗ್ರೆಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
Vijaya Karnataka Web ನಿಖಿಲ್‌ ನಾಮಪತ್ರ ಸಲ್ಲಿಕೆ
ನಿಖಿಲ್‌ ನಾಮಪತ್ರ ಸಲ್ಲಿಕೆ


ಮಂಡ್ಯದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಏಳು ಜನ್ಮ ಎತ್ತಿದರೂ ಜಿಲ್ಲೆಯ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ. ಮಂಡ್ಯದ ಜನರಿಗಾಗಿ ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ. ನಿಮ್ಮ ಮನೆ ಮಗನಾಗಿ ಇರುತ್ತೇನೆ. ಜೆಡಿಎಸ್- ಕಾಂಗ್ರೆಸ್‌ನವರು ಅಣ್ಣತಮ್ಮಂದಿರಂತೆ ಇರುತ್ತೇವೆ. ಯಾರ ಮನಸ್ಸಿಗೂ ನೋವಾಗದಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಇಂದು ಮಂಡ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕುಮಾರಸ್ವಾಮಿ ಅವರು ಸಿಎಂ ಆಗಿ ಮಂಡ್ಯದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ನಾನಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ 10 ಕೋಟಿ ರೂ.ಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ನಮ್ಮ ಗುರಿ. ಹೀಗಾಗಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ನಿಖಿಲ್ ಅವರನ್ನು ಗೆಲ್ಲಿಸಿಕೊಡಿ.
- ಸಿ.ಎಸ್.ಪುಟ್ಟರಾಜು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ

ನಾನು ಸಂಸದನಾಗಿ ಮೆರೆಯಲು ಮಂಡ್ಯಕ್ಕೆ ಬಂದಿಲ್ಲ. ಅಧಿಕಾರಕ್ಕೆ ಆಸೆಪಟ್ಟೂ ಇಲ್ಲಿಗೆ ಬಂದಿಲ್ಲ. ನಾನಿಲ್ಲಿ ನಿಂತಿರುವುದು ಯಾವುದೋ ಜನ್ಮದ ಪುಣ್ಯ. 1996ರಲ್ಲಿ ಅಪ್ಪ ಕುಮಾರಸ್ವಾಮಿ ರಾಮನಗರದಿಂದ ಲೋಕಸಭೆ ಸ್ಪರ್ಧಿಸಿದ್ದರು. ಆಗ ಅಪ್ಪನಿಗೂ ದೇವೇಗೌಡರ ಮಗನೆಂಬ ಐಡೆಂಟಿಟಿಯಷ್ಟೇ ಇತ್ತು. ಈಗ ನಾನೂ ಅದೇ ಸ್ಥಿತಿಯಲ್ಲಿದ್ದೆನೆ. ಕುಮಾರಸ್ವಾಮಿ ಮಗನೆಂದೇ ನನ್ನನ್ನು ಜನರು ಗುರುತಿಸುತ್ತಾರೆ. ಹೀಗಾಗಿ ಅಪ್ಪನ ಪರವಾಗಿ ಜನರ ಋಣ ತೀರಿಸಲು ಬಂದಿದ್ದೇನೆ. ನನ್ನ ಮೇಲೆ ನಂಬಿಕೆ, ವಿಶ್ವಾಸವಿಡಿ ಎಂದು ಮನವಿ ಮಾಡಿದರು.

ಭಾಷಣ ಆರಂಭಕ್ಕೂ ಮೊದಲು ಜನರಿಗೆ ಶಿರ ಭಾಗಿ ನಮಸ್ಕರಿಸಿದರು. ಬಳಿಕ ತಂದೆ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಕಾಲಿಗೂ ಬಿದ್ದು ಆಶೀರ್ವಾದ ಪಡೆದರು. ಇದಕ್ಕೂ ಮುನ್ನ ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲಾಕಾರಿ ಕಚೇರಿಯಲ್ಲಿ ದೊಡ್ಡಪ್ಪ ರೇವಣ್ಣ ಕಾಲಿಗೆ ಬಿದ್ದು ನಮಸ್ಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ