ಆ್ಯಪ್ನಗರ

ಟಾರ್ಗೆಟ್‌ ಮಾಡೋ ಜಾಯಮಾನ ನಮ್ಮ ಕುಟುಂಬದ್ದಲ್ಲ: ನಿಖಿಲ್‌ ಕುಮಾರ್‌ಸ್ವಾಮಿ

ಬೆಟ್ಟಿಂಗ್ ಒಳ್ಳೆಯ ಬೆಳವಣಿಗೆಯಲ್ಲ. ಯಾರೂ ಸಹ ಬೆಟ್ಟಿಂಗ್ ಕಟ್ಟಬಾರದು. ತಮ್ಮನ್ನ ಬೆಂಬಲಿಸದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಕ್ರಮದ ವಿಚಾರದ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ನಿಖಿಲ್‌ ತಿಳಿಸಿದರು.

Vijaya Karnataka Web 24 Apr 2019, 7:14 pm
ಮಂಡ್ಯ: ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಬೆಂಬಲದಿಂದ ಚುನಾವಣೆ ಎದುರಿಸಿದ್ದೇನೆ. ಎಲ್ಲರಿಗೂ ಧನ್ಯವಾದ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.
Vijaya Karnataka Web ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ


ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುಮಲತಾ ಬೆಂಬಲಿಗರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಿಖಿಲ್‌, ನಮ್ಮ ಕುಟುಂಬದ ರಾಜಕೀಯದ ಇತಿಹಾಸದಲ್ಲಿ ದ್ವೇಷದ ರಾಜಕಾರಣ ನಮ್ಮ ಕುಟುಂಬ ಮಾಡಿಲ್ಲ. ಇಷ್ಟು ಬಿಟ್ಟು ಅವರ ಮಾತಿಗೆ ಹಿಂದೆಯೂ ಪ್ರತಿಕ್ರಿಯಿಸಿಲ್ಲ. ಮುಂದೆಯೂ ಪ್ರತಿಕ್ರಿಯಿಸಲ್ಲ ಎಂದರು.

ನಾವು ಯಾವ ರೀತಿ ಟಾರ್ಗೆಟ್ ಮಾಡುತ್ತಿದ್ದೇನೆ. ಟಾರ್ಗೆಟ್ ಮಾಡಿ ಟೈಂ ವೇಸ್ಟ್ ಮಾಡಲು ರೆಡಿಯಿಲ್ಲ. ಮುಖ್ಯಮಂತ್ರಿಗಳಿಗೆ ಅವರದೇ ಕೆಲಸ ಇರುತ್ತೆ ಎಂದರು.

ಬೆಟ್ಟಿಂಗ್ ಒಳ್ಳೆಯ ಬೆಳವಣಿಗೆಯಲ್ಲ. ಯಾರೂ ಸಹ ಬೆಟ್ಟಿಂಗ್ ಕಟ್ಟಬಾರದು. ತಮ್ಮನ್ನ ಬೆಂಬಲಿಸದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಕ್ರಮದ ವಿಚಾರದ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ನಿಖಿಲ್‌ ತಿಳಿಸಿದರು.

ಈ ಚುನಾವಣೆ ನನಗೆ ಅದ್ಬುತವಾದ ಅನುಭವ ನೀಡಿದೆ. ಯಾರೋ ಕೇಳ್ತಿದ್ರು ಈತನಿಗೆ ಏನು ಅನುಭವ ಇದೆ ಎನ್ನುತ್ತಿದ್ರು. ಈ ಒಂದು ತಿಂಗಳಲ್ಲಿ ಎಲ್ಲಾ ಹಳ್ಳಿಗಳನ್ನ ಸುತ್ತಾಡಿ ನಾನು ಜನರ ಸಾಕಷ್ಟು ವಿಚಾರಗಳ ಬಗೆಗೆ ತಿಳಿದುಕೊಂಡಿದ್ದೀನಿ. ಸ್ವಾಭಿಮಾನ ಅಂತ ಹೇಳ್ತಾರೆ. ನಾನು ನಾಮಪತ್ರ ಸಲ್ಲಿಸೊ ದಿನ ಲಕ್ಷಕ್ಕಿಂತಲೂ ಅಧಿಕ ಜನರಿದ್ದರು. ನನಗೆ ಸೇರಿದ್ದ ಜನರಿಗೆ ಹಣ ಕೊಟ್ಟು ಕರೆಸಿದ್ದಾರೆ ಎನ್ನುತ್ತಾರೆ. ಸ್ವಾಭಿಮಾನಕ್ಕೆ ಮತ ಹಾಕಿ ಅಂತಾರೆ. ವ್ಯಕ್ತಿ ಯಾವಾಗ್ಲೂ ಒಂದಕ್ಕೆ ಸ್ಟಿಕಾನ್ ಆಗಿರಬೇಕು ಎಂದು ಸುಮಲತಾ ಹಾಗೂ ಅವರ ಬೆಂಬಲಿಗರಿಗೆ ನಿಖಿಲ್‌ ಕುಮಾರಸ್ವಾಮಿ ಟಾಂಗ್‌ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ