ಆ್ಯಪ್ನಗರ

ನಿಖಿಲ್ ಕುಮಾರಸ್ವಾಮಿ ಅತೀ ಹೆಚ್ಚು ಮತಗಳಿಂದ ಗೆಲ್ತಾರೆ: ಡಿಕೆಶಿ

ಮಂಡ್ಯದಲ್ಲಿ ದರ್ಶನ್‌ ಮತ್ತು ಯಶ್‌ ಪ್ರಚಾರ ಮಾಡುವುದರಿಂದ ಪಕ್ಷ ಕ್ಕೆ ಹಿನ್ನಡೆ ಆಗಬಹುದಾ ಕೇಳಿದ ಪ್ರಶ್ನೆಗೆ, ರಾಜಕಾರಣ ಯಾರು ಬೇಕಾದರೂ ಮಾಡಬಹುದು. ಯಾರು ಬೇಕಾದರೂ ಪ್ರಚಾರ ಮಾಡಬಹುದು.

Vijaya Karnataka 2 Apr 2019, 12:12 pm
ಮಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅತೀ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vijaya Karnataka Web dks


ಬೆಳ್ತಂಗಡಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಸಮಾವೇಶಕ್ಕೆ ಆಗಮಿಸಿದ ಸಂದರ್ಭ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಮಂಡ್ಯದಲ್ಲಿ ದರ್ಶನ್‌ ಮತ್ತು ಯಶ್‌ ಪ್ರಚಾರ ಮಾಡುವುದರಿಂದ ಪಕ್ಷ ಕ್ಕೆ ಹಿನ್ನಡೆ ಆಗಬಹುದಾ ಕೇಳಿದ ಪ್ರಶ್ನೆಗೆ, ರಾಜಕಾರಣ ಯಾರು ಬೇಕಾದರೂ ಮಾಡಬಹುದು. ಯಾರು ಬೇಕಾದರೂ ಪ್ರಚಾರ ಮಾಡಬಹುದು. ನಮ್ಮದು ಏನೂ ಅಭ್ಯಂತರ ಇಲ್ಲ. ನಾವು ಮಾಡುವಂತಹ ಕೆಲಸ, ನಮ್ಮ ಸಾಧನೆ, ನಮ್ಮ ಆಚಾರ, ವಿಚಾರವನ್ನು ಪ್ರಚಾರ ಮಾಡಿ ನಾವು ಓಟು ಕೇಳುತ್ತೇವೆ ಎಂದರು.

ಆಯನೂರು ಮಂಜುನಾಥ್‌ ಒಂದು ಹೇಳಿಕೆ ನೀಡಿದ್ದಾರೆ. ಮೀರ್‌ಸಾದಿಕ್‌ ನಾನಲ್ಲ. ಅದು ಯಾರು ಅಂತ ಸಿದ್ದರಾಮಯ್ಯ ಅಥವಾ ಪರಮೇಶ್ವರ್‌ ಅವರನ್ನು ಕೇಳಿದರೆ ಗೊತ್ತಾಗುತ್ತೆ ಅಂತ ಟಾಂಗ್‌ ಕೊಟ್ಟಿರುವ ಕುರಿತು, ಇನ್‌ಡೈರೆಕ್ಟ್ ಆಗಿ ಅಲ್ಲ ನಾನು ನೇರ ಕುಸ್ತಿ ಮಾಡೋನು. ಇನ್‌ಡೈರೆಕ್ಟ್ ಆಗಿ ಕುಸ್ತಿ ಅಲ್ಲ. ತಾಕತ್ತು ಇದ್ರೆ ನನ್ನ ಜತೆ ಮಾತಾಡಲಿ. ನಾನು ಉತ್ತರ ಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ