ಆ್ಯಪ್ನಗರ

ಲೋಕಸಭಾ ಚುನಾವಣೆ 2019: ಮೇ 20ರ ಮುಖ್ಯಾಂಶಗಳು

ಲೋಕ ಸಮರದ ಅಂತಿಮ ಹಂತದ ಮತದಾನವೂ ಮುಗಿದಿದೆ. ಜತೆಗೆ ಮತಗಟ್ಟೆ ಸಮೀಕ್ಷೆಯೂ ಪ್ರಕಟವಾಗಿದೆ. ಇದರಲ್ಲಿ ಅಬ್‌ ಕಿ ಬಾರ್‌ ಮೋದಿ ಸರಕಾರ್‌ ಎಂಬುದು ಶ್ರುತಪಟ್ಟಿದೆ.

Vijaya Karnataka Web 20 May 2019, 8:03 am
ಹೊಸದಿಲ್ಲಿ: ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆಯ ಅಂತಿಮ ಚರಣ ಇದೀಗ ಮುಕ್ತಾಯಗೊಂಡಿದ್ದು, ಇನ್ನು ಫಲಿತಾಂಶದ ಬಗ್ಗೆ ಕ್ಷಣಗಣನೆ ಆರಂಭವಾಗಿದೆ. ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಬೃಹತ್ ಪ್ರಜಾತಂತ್ರದ ಹಬ್ಬದ ಬಗ್ಗೆ ವಿಶ್ವವೇ ಕುತೂಹಲದಿಂದ ಕಾದು ನೋಡುತ್ತಿದೆ.
Vijaya Karnataka Web modi


ಫಿರ್‌ ಏಕ್‌ ಬಾರ್‌ ಮೋದಿ ಸರಕಾರ್‌

ಹೊಸದಿಲ್ಲಿ: ಲೋಕ ಸಮರದ ಅಂತಿಮ ಹಂತದ ಮತದಾನವೂ ಮುಗಿದಿದೆ. ಜತೆಗೆ ಮತಗಟ್ಟೆ ಸಮೀಕ್ಷೆಯೂ ಪ್ರಕಟವಾಗಿದೆ. ಇದರಲ್ಲಿ ಅಬ್‌ ಕಿ ಬಾರ್‌ ಮೋದಿ ಸರಕಾರ್‌ ಎಂಬುದು ಶ್ರುತಪಟ್ಟಿದೆ. 543 ರಲ್ಲಿ ವೆಲ್ಲೂರು ಕ್ಷೇತ್ರ ಹೊರತುಪಡಿಸಿ, 542 ಲೋಕಸಭಾ ಸ್ಥಾನಗಳಿಗೆ ನಡೆದ ಮತದಾನದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ಎಕ್ಸಿಟ್‌ ಪೋಲ್‌ಗಳು ಬರೀ ಗಾಸಿಪ್‌: ಮಮತಾ ಬ್ಯಾನರ್ಜಿ

ಹೊಸದಿಲ್ಲಿ: ಒಂದೂವರೆ ತಿಂಗಳ ಲೋಕ ಮಹಾ ಸಮರ ಈಗ ಅಂತ್ಯಕಂಡಿದೆ. ಇಡೀ ದೇಶ ಈಗ ಮತಗಟ್ಟೆ ಸಮೀಕ್ಷೆಯ ಲೆಕ್ಕಾಚಾರದಲ್ಲಿ ತೊಡಗಿದೆ.

ನಾಳೆ ಸೋನಿಯಾ, ರಾಹುಲ್‌ರನ್ನು ಭೇಟಿ ಮಾಡಲಿರುವ ಮಾಯಾವತಿ

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಹೊರಗಿಟ್ಟು ತನ್ನ ಸಾಂಪ್ರದಾಯಿಕ ಎದುರಾಳಿಯಾಗಿದ್ದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದ್ದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಇದೀಗ ಮತ್ತೆ ಕಾಂಗ್ರೆಸ್‌ನತ್ತ ಸ್ನೇಹ ಹಸ್ತ ಚಾಚಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ಗೆಲ್ಲೋ ಪಕ್ಷೇತರ ಅಭ್ಯರ್ಥಿ ಯಾರು? ಸುಮಲತಾ ಅಥವಾ ಪ್ರಕಾಶ್‌ ರಾಜ್‌?

ಬೆಂಗಳೂರು: ಲೋಕಸಭೆ ಚುನಾವಣೆ ಎಕ್ಸಿಟ್‌ ಪೋಲ್‌ ಸಮೀಕ್ಷೆಗಳು ಬಹಿರಂಗವಾಗಿದ್ದು, ಹೆಚ್ಚಿನ ಸಮೀಕ್ಷೆಗಳಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರಕಾರ ರಚನೆಯಾಗಲಿದೆ ಎಂದಿವೆ. ಈ ನಡುವೆ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದು, ಒಂದು ಪಕ್ಷೇತರ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ ಎಂದಿವೆ.

ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಮಾಡಿದ ಅವಮಾನವನ್ನು ವೀರಶೈವರು ಮರೆತಿಲ್ಲ: ಬಿಎಸ್‌ವೈ

ಹುಬ್ಬಳ್ಳಿ: ರಾಜ್ಯದಲ್ಲಿ ಮಂಡ್ಯ ಸೇರಿದಂತೆ‌ 22‌ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಉಪ ಚುನಾವಣೆಯಲ್ಲಿ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳನ್ನೂ ಗೆದ್ದೇ ಗೆಲ್ಲುತ್ತೇವೆ. ತಾಕತ್ತಿದ್ದರೆ ಕಾಂಗ್ರೆಸ್‌ನವರು ಎಷ್ಟು ಸ್ಥಾನಗಳಲ್ಲಿ ಗೆಲ್ಲುತ್ತಾರೆ ಹೇಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ