ಆ್ಯಪ್ನಗರ

ಭಾರತ ವಿಶ್ವ ಗುರುವಾಗಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಕುಮಾರಸ್ವಾಮಿ

ವಿದೇಶಿ ಪ್ರವಾಸದ ಮೂಲಕ ಆತ್ಮೀಯ ಸಂಬಂಧ ಗಟ್ಟಿಗೊಳಿಸಿ ಸಾಕಷ್ಟು ಬಂಡವಾಳ ದೇಶಕ್ಕೆ ಹರಿಯುವಂತೆ ಮಾಡಲಾಗಿದೆ. ದೇಶದ ರಕ್ಷ ಣೆಯನ್ನು ಬಲಗೊಳಿಸಿ, ಚೀನಾ ದೇಶದ ಭೂ ಬಾಕತನಕ್ಕೆ ಅಂಕುಶ ಹಾಕಿದ್ದಲ್ಲದೇ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವಲ್ಲಿ ಯಶಸ್ವಿಯಾಗಿದೆ.

Vijaya Karnataka Web 8 Apr 2019, 9:34 am
ಮೂಡಿಗೆರೆ: ಭಾರತ ಮುಂದಿನ ದಿನಗಳಲ್ಲಿ ವಿಶ್ವ ಗುರುವಾಗಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
Vijaya Karnataka Web Narendra Modi 1200


ದಾರದಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಾಲೂರಿನಲ್ಲಿ ಸಂಸದೆ ಶೋಭಾ ಕಾರಂದ್ಲಾಜೆ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು. ವಿದೇಶಿ ಪ್ರವಾಸದ ಮೂಲಕ ಆತ್ಮೀಯ ಸಂಬಂಧ ಗಟ್ಟಿಗೊಳಿಸಿ ಸಾಕಷ್ಟು ಬಂಡವಾಳ ದೇಶಕ್ಕೆ ಹರಿಯುವಂತೆ ಮಾಡಲಾಗಿದೆ. ದೇಶದ ರಕ್ಷ ಣೆಯನ್ನು ಬಲಗೊಳಿಸಿ, ಚೀನಾ ದೇಶದ ಭೂ ಬಾಕತನಕ್ಕೆ ಅಂಕುಶ ಹಾಕಿದ್ದಲ್ಲದೇ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವಲ್ಲಿ ಯಶಸ್ವಿಯಾಗಿದೆ.ಮುಂದಿನ ಐದು ವರ್ಷಗಳ ಕಾಲ ಮತ್ತೊಮ್ಮೆ ಆಯ್ಕೆಯಾಗಿ ದೇಶವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಶೋಭಾ ಕರಂದ್ಲಾಜೆ ಅವರಿಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ನಂತರ ಚಕ್ರಮಣಿ, ಮುತ್ತಿಗೆಪುರ, ಅಬಚೂರು, ಹಂಡುಗುಳಿ ಮತ್ತು ಹಳೇಮೂಡಿಗೆರೆಗಳಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಂಡಲ ಉಪಾಧ್ಯಕ್ಷ ಪಂಚಾಕ್ಷ ರ, ಜಿ.ಪಂ. ಸದಸ್ಯೆ ಸುಧಾ ಯೋಗೇಶ್‌, ತಾ.ಪಂ ಸದಸ್ಯೆ ಭಾರತಿ ರವೀಂದ್ರ, ಸಂದರ್ಶ, ರಜಾಕ್‌ ಹಂಡುಗುಳಿ ಮತ್ತಿತರರಿದ್ದರು.

ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಾಲೂರಿನಲ್ಲಿ ಸಂಸದೆ ಶೋಭಾ ಕಾರಂದ್ಲಾಜೆ ಪರವಾಗಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮತಯಾಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌