ಆ್ಯಪ್ನಗರ

ಲೋಕಸಭೆ ಚುನಾವಣೆ ಕಾವಿಗೆ ತಂಪೆರೆದ ಮಳೆರಾಯ

ಮಂಗಳವಾರ ಮಧ್ಯಾಹ್ನದ ನಂತರ ಉತ್ತರ ಕನ್ನಡದ ಶಿರಸಿ, ಶಿವಮೊಗ್ಗದ ಸಾಗರ ಮುಂತಾದೆಡೆ ಉತ್ತಮ ಮಳೆಯಾಗಿದೆ.

Vijaya Karnataka Web 23 Apr 2019, 4:29 pm
ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಮಂಗಳವಾರ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಮತದಾನದ ಕಾವು ಏರಿರುವಾಗಲೇ ಮಳೆರಾಯ ರಾಜ್ಯದ ಹಲವೆಡೆ ಮಳೆ ಸುರಿಸಿ ಭೂಮಿಗೆ ತಂಪೆರೆದಿದ್ದಾನೆ.
Vijaya Karnataka Web Rain


ಮಂಗಳವಾರ ಮಧ್ಯಾಹ್ನದ ನಂತರ ಉತ್ತರ ಕನ್ನಡದ ಶಿರಸಿ, ಶಿವಮೊಗ್ಗದ ಸಾಗರ ಮುಂತಾದೆಡೆ ಉತ್ತಮ ಮಳೆಯಾಗಿದೆ. ಶಿರಸಿಯ ಮತಗಟ್ಟೆ ಸಂಖ್ಯೆ 92 ಬಳಿ ಉತ್ತಮ ಮಳೆಯಾಗಿದ್ದು, ಮತದಾರರಿಗೆ ತೊಂದರೆಯಾಗಿದೆ. ಗುಡುಗು ಸಿಡಿಲು ಕೂಡ ಇದ್ದು, ಮತದಾರರು ಮನೆಯಿಂದ ಹೊರಗೆ ಬರಲು ಸಮಸ್ಯೆಯಾಗಿದೆ.

ಚಿಕ್ಕಮಗಳೂರಿನಲ್ಲಿ ಅಲಿಕಲ್ಲು ಮಳೆ
ಕಾಫಿನಾಡು ಚಿಕ್ಕಮಗಳೂರಿನಲ್ಲೂ ಮಳೆ ಸುರಿದಿದೆ. ಈ ಭಾಗದ ಬಾಳೆಹೊನ್ನೂರು ಸಹಿತ ಹಲವು ಪ್ರದೇಶದಲ್ಲಿ ಅಲಿಕಲ್ಲು ಮಳೆಯಾಗಿದ್ದು, ಗಾಳಿಯ ಅಬ್ಬರಕ್ಕೆ ಮರಗಳು ಧರೆಗುರುಳಿವೆ.

ಕಳೆದ ಗುರುವಾರ ಮೊದಲ ಹಂತದ ಮತದಾನ ಸಂದರ್ಭದಲ್ಲೂ ರಾಜ್ಯದ ಹಲವೆಡೆ ಮಳೆ ಸುರಿದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ