ಆ್ಯಪ್ನಗರ

ಮತ ಚಲಾಯಿಸಿದ ಪೇಜಾವರ ಶ್ರೀ

ಬೆಳಗ್ಗೆ 9.45 ರ ಸುಮಾರಿಗೆ ಶಿಷ್ಯರೊಂದಿಗೆ ಮತಗಟ್ಟೆಗೆ ಆಗಮಿಸಿದ ಶ್ರೀಗಳು ವ್ಹೀಲ್‌ಚೇರ್ ನಿರಾಕರಿಸಿ ಮತಗಟ್ಟೆಗೆ ತೆರಳಿದರು.

Vijaya Karnataka Web 18 Apr 2019, 10:55 am
ಉಡುಪಿ: ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಉಡುಪಿ ನಾರ್ತ್ ಸ್ಕೂಲ್‌ನ ಮತಗಟ್ಟೆಯಲ್ಲಿ ಗುರುವಾರ ಮತ ಚಲಾಯಿಸಿದರು.
Vijaya Karnataka Web Pejavarasri


ಬೆಳಗ್ಗೆ 9.45 ರ ಸುಮಾರಿಗೆ ಶಿಷ್ಯರೊಂದಿಗೆ ಮತಗಟ್ಟೆಗೆ ಆಗಮಿಸಿದ ಶ್ರೀಗಳು ವ್ಹೀಲ್‌ಚೇರ್ ನಿರಾಕರಿಸಿ ಮತಗಟ್ಟೆಗೆ ತೆರಳಿದರು.

ಬಳಿಕ‌ ಮಾಧ್ಯಮದೊಂದಿಗೆ ಮಾತನಾಡಿ, ನಾನು ಹೆಮ್ಮೆಯಿಂದ ಮತ ಚಲಾಯಿಸಿದ್ದೇನೆ. ದೇಶದಲ್ಲಿ ಉತ್ತಮ ಸರಕಾರ ಬರುವ ಅಗತ್ಯವಿದೆ. ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಮನವಿ ಮಾಡಿದರು.

ಮತದಾನ ಮಾಡದೆ ಹೊದರೆ ಕರ್ತವ್ಯ ಭ್ರಷ್ಟ ಆಗುತ್ತೇವೆ. ಸರಕಾರವನ್ನು ಟೀಕಿಸುವ ಹಕ್ಕು ಕಳೆದುಕೊಳ್ಳುತ್ತೇವೆ. ಯಾವ ಸರಕಾರದ ಬಗ್ಗೆಯೂ ಹೊಗಳಿಕೆ ತೆಗಳಿಕೆ ಮಾಡುವುದಿಲ್ಲ. ವಿಚಾರ ಮಾಡಿ ಮತದಾನ ಮಾಡಬೇಕೆಂದು ಪೇಜಾವರ ಶ್ರೀಗಳು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ