ಆ್ಯಪ್ನಗರ

ಫೇಸ್‌ಬುಕ್ ನೋಡಿ ಜನ ಓಟು ಹಾಕಲ್ಲ: ಸುಮಲತಾಗೆ ಸಚಿವ ಪುಟ್ಟರಾಜು ಟಾಂಗ್

ಸಕ್ಕರೆ ನಾಡಿನಲ್ಲಿ ಚುನಾವಣಾ ಪ್ರಚಾರ ಕಾವೇರುತ್ತಿದ್ದು, ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್‌ ಪರ ಪ್ರಚಾರ ಹೇಳಿಕೆ ನೀಡಿದ ಸಚಿವ ಪುಟ್ಟರಾಜು, ಜನರು ವಾಟ್ಸಪ್, ಫೇಸ್‌ಬುಕ್ ನೋಡಿ ಮರುಳಾಗುವುದಿಲ್ಲ ಎಂದಿದ್ದಾರೆ.

Vijaya Karnataka Web 22 Mar 2019, 2:32 pm
ಮಂಡ್ಯ: ಜನ ವಾಟ್ಸಾಪ್, ಫೇಸ್ ಬುಕ್ ನೋಡಿ ಓಟಾಕಲ್ಲ, ಜನರು ಏನಿದ್ರೂ ಕೆಲಸ ನೋಡಿಯೇ ಮತ ಹಾಕೋದು ಎಂದು ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾಗೆ ಸಚಿವ ಪುಟ್ಟರಾಜು ಟಾಂಗ್ ನೀಡಿದ್ದಾರೆ.
Vijaya Karnataka Web csp


ಸಕ್ಕರೆ ನಾಡಿನಲ್ಲಿ ಚುನಾವಣಾ ಪ್ರಚಾರ ಕಾವೇರುತ್ತಿದ್ದು, ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್‌ ಪರ ಪ್ರಚಾರ ಹೇಳಿಕೆ ನೀಡಿದ ಸಚಿವ ಪುಟ್ಟರಾಜು, ಜನರು ವಾಟ್ಸಪ್, ಫೇಸ್‌ಬುಕ್ ನೋಡಿ ಮರುಳಾಗುವುದಿಲ್ಲ. ಹಾಗಿದ್ರೆ ಮೋದಿ ಏಕೆ ಬೀದಿ ಬೀದಿ ಸುತ್ತಬೇಕಿತ್ತು? ಮಂಡ್ಯದಲ್ಲಿ ನಾವು- ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ಆದರೆ ನಾವೇ ಈಗ ಹೊಂದಾಗಿದ್ದೇವೆ. ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ. ಅವ್ರು ಮಂಡ್ಯದಲ್ಲಿ ಅಭ್ಯರ್ಥಿ ಹಾಕೋದಿಲ್ಲ ಎಂದಿದ್ದಾರೆ.

ಸ್ವಾಭಿಮಾನನ ಮಂಡ್ಯ ಜನ ಬೇರೆಯವ್ರ ಕೈಯಲ್ಲಿ ಹೇಳಿಸಿಕೊಳ್ಳಲ್ಲ. ಸುಮಲತಾ ಸ್ಪರ್ಧೆ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬುದು ಶುದ್ದ ಸುಳ್ಳು, ಅಭಿವೃದ್ಧಿ ಯೇ ನಮ್ಮ ಅಜೆಂಡ ಎಂದು ಸಚಿವ ಪುಟ್ಟರಾಜು ಹೇಳಿದ್ದಾರೆ.

ಸೋಮವಾರ 25ಕ್ಕೆ ನಿಖಿಲ್ ಕುಮಾರಸ್ವಾಮಿ ನಾಮ ಪತ್ರ ಸಲ್ಲಿಸ್ತಾರೆ. ಈ ನಿಟ್ಟಿನಲ್ಲಿ ನಿನ್ನೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಸಭೆ ನಡೆಸಿ ಮಾತುಕತೆ ಮಾಡಿದ್ದೇವೆ. ಅವತ್ತು ರಾಜ್ಯ ಮಟ್ಟದ ನಾಯಕರು ಆಗಮಿಸ್ತಿದ್ದಾರೆ. ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಾಗುತ್ತದೆ. ಸಿಎಂ ಕುಮಾರಸ್ವಾಮಿ ಸೇರಿ ಕಾಂಗ್ರೆಸ್-ಜೆಡಿಎಸ್ ನಾಯಕರು ಭಾಗವಹಿಸ್ತಾರೆ. ಬಹಿರಂಗ ಸಮಾವೇಶ ಮಾಡ್ತೀವಿ. ಕೆಲ ಕಾಂಗ್ರೆಸ್ ಅತೃಪ್ತ ನಾಯಕರನ್ನು ಬಹಿರಂಗ ಸಭೆಯಲ್ಲಿ ಕರೆತರ್ತೇವೆ ಎಂದು ಸಚಿವ ಪುಟ್ಟರಾಜು ಹೇಳಿದ್ದಾರೆ.

ಮಂಡ್ಯ ಮೈತ್ರಿಯಲ್ಲಿ ಯಾವುದೇ ಒಡಕಿಲ್ಲ ಎಂಬುದನ್ನು ಸಾರಲು ಹೊರಟ ಕಾಂಗ್ರೆಸ್-ಜೆಡಿಎಸ್ ಮುಖಂಡರು ಜಂಟಿ ಸುದ್ದಿಗೋಷ್ಠಿ ನಡೆಸಿ, ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಒಟ್ಟಾಗಿ ಪ್ರಚಾರ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌