ಆ್ಯಪ್ನಗರ

ಕನ್ನಡಕ್ಕೆ ಅಂಬರೀಷ್‌ ಮಾಡಿರುವ ಕೆಲಸ ಗೊತ್ತಲ್ಲಾ: ಸುಮಲತಾ ಅಂಬರೀಷ್‌ ಪರವಾಗಿ ಮತ ಯಾಚಿಸಿದ ಮೋದಿ

ಸುಮಲತಾ ಮತ್ತು ಅಂಬರೀಷ್‌ ಅವರು ಕನ್ನಡ ಭಾಷೆ, ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಇಂಥವರ ಪ್ರಯತ್ನವನ್ನು ಬೆಂಬಲಿಸಬೇಕಾಗಿದೆ ಎಂದು ಮೋದಿ ತಿಳಿಸಿದರು.

Vijaya Karnataka Web 9 Apr 2019, 8:01 pm
ಮೈಸೂರು: ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಈಗ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರವಾಗಿಯೂ ಮತ ಕೋರಿದ್ದಾರೆ.
Vijaya Karnataka Web ಮೈಸೂರು ಸಮಾವೇಶ
ಮೈಸೂರು ಸಮಾವೇಶ


ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ, ರೆಬೆಲ್‌ ಸ್ಟಾರ್‌ ಅಂಬರೀಷ್‌, ಸುಮಲತಾ ಹೆಸರು ಪ್ರಸ್ತಾಪಿಸಿ ಅಚ್ಚರಿ ಮೂಡಿಸಿದರು.

ನಿಮ್ಮ ಒಂದು ಮತ ನಮ್ಮ ಜತೆಯಲ್ಲಿರುವವರಿಗೂ ಬಲ ತುಂಬಬೇಕು ಎನ್ನುವ ಮೂಲಕ ಸುಮಲತಾ ಪರ ಬ್ಯಾಟಿಂಗ್ ಮಾಡಿದರು.

ಅಂಬರೀಷ್‌ ಅವರು ಕನ್ನಡಕ್ಕಾಗಿ ಮಾಡಿರುವ ಕೆಲಸ ನಿಮಗೆ ಗೊತ್ತಿದೆಯಲ್ಲಾ? ಅಂಬರೀಷ್‌, ಸುಮಲತಾ ಅವರು ಜತೆಗೂಡಿ ಕನ್ನಡ ಪರವಾಗಿ ಕೆಲಸ ಮಾಡಿದ್ದಾರೆ. ಇಂಥವರ ಪರವಾಗಿ ನಾವು ನಿಲ್ಲಬೇಕು. ನಿಮ್ಮ ಒಂದು ಮತ ನಮ್ಮ ಪರ ನಿಂತಿರುವವರಿಗೆ ಬಲ ತುಂಬಬೇಕು ಎಂದು ಮೋದಿ ಅವರು ಸುಮಲತಾಗೆ ಮತ ನೀಡುವಂತೆ ಕರೆ ನೀಡಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮದ ನಡುವೆ ಭಾಷಣ ಮಾಡಿದ ಸಂದರ್ಭದಲ್ಲಿ ಮೋದಿ ಮೋದಿ ಮೋದಿ ಘೋಷಣೆ ಮೊಳಗಿದವು.

ಅಂಬರೀಷ್‌, ಸುಮಲತಾ ಹೆಸರು ಹೇಳುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತು.

ಸುಮಲತಾ ಮತ್ತು ಅಂಬರೀಷ್‌ ಅವರು ಕನ್ನಡ ಭಾಷೆ, ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಇಂಥವರ ಪ್ರಯತ್ನವನ್ನು ಬೆಂಬಲಿಸಬೇಕಾಗಿದೆ ಎಂದು ಮೋದಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ