ಆ್ಯಪ್ನಗರ

ರಫೇಲ್ ಡೀಲ್: ಪ್ರಧಾನಿ ಮೋದಿ ಜೈಲಿಗೆ ಹೋಗೋದು ಗ್ಯಾರಂಟಿ ಎಂದ ದಿನೇಶ್ ಗುಂಡೂರಾವ್

'ರಫೇಲ್ ದಾಖಲೆ ಕಳುವಾಗಿದೆ ಎಂದು ಸರಕಾರ ಸುಪ್ರೀಂಕೋರ್ಟಿಗೆ ಹೇಳಿತ್ತು; ಅದನ್ನು ನ್ಯಾಯಾಲಯ ಒಪ್ಪಿಲ್ಲ. ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡಲು ರಫೇಲ್ ಮಾತುಕತೆಯಲ್ಲಿ ಪ್ರಧಾನಮಂತ್ರಿ ಹಸ್ತಕ್ಷೇಪ ಮಾಡಿರುವುದು ಸ್ಪಷ್ಟವಾಗಿದೆ. ಇವರು ಜೈಲಿಗೆ ಹೋಗುವುದು ಸ್ಪಷ್ಟ' ಎಂದು ಹೇಳಿದರು.

Vijaya Karnataka Web 10 Apr 2019, 1:14 pm
ದಾವಣಗೆರೆ: ರಫೇಲ್ ಡೀಲ್ ಹಗರಣದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಹೇಳಿದರು.
Vijaya Karnataka Web Dinesh Gundurao


'ರಫೇಲ್ ದಾಖಲೆ ಕಳುವಾಗಿದೆ ಎಂದು ಸರಕಾರ ಸುಪ್ರೀಂಕೋರ್ಟಿಗೆ ಹೇಳಿತ್ತು; ಅದನ್ನು ನ್ಯಾಯಾಲಯ ಒಪ್ಪಿಲ್ಲ. ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡಲು ರಫೇಲ್ ಮಾತುಕತೆಯಲ್ಲಿ ಪ್ರಧಾನಮಂತ್ರಿ ಹಸ್ತಕ್ಷೇಪ ಮಾಡಿರುವುದು ಸ್ಪಷ್ಟವಾಗಿದೆ. ಇವರು ಜೈಲಿಗೆ ಹೋಗುವುದು ಸ್ಪಷ್ಟ' ಎಂದು ಹೇಳಿದರು.

ಈ ಹಗರಣ ತನಿಖೆಗೆ ನಾವು ಒತ್ತಾಯಿಸಿದ್ದೇವೆ, ಆದರೆ ಎಲ್ಲ ತನಿಖಾ ಸಂಸ್ಥೆಗಳು ಬಿಜೆಪಿಮಯವಾಗಿವೆ. ಬಿಜೆಪಿ ಸಿಬಿಐ, ಬಿಜೆಪಿ ಐಟಿ, ಬಿಜೆಪಿ ಇಡಿ ಆಗಿದೆ ಎಂದು ಗಂಭೀರ ಅರೋಪ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಫೇಲ್, ನೋಟು ಅಮಾನ್ಯೀಕರಣ ಸೇರಿ ಎಲ್ಲ ಹಗರಣಗಳ ತನಿಖೆ ನಡೆಸುವುದು ಖಚಿತ ಎಂದು ಗುಂಡೂರಾವ್ ಹೇಳಿದರು.

ಮೋದಿ ವಿರುದ್ಧ ಆಯೋಗಕ್ಕೆ ದೂರು:
ಯುವ ಮತದಾರರ ಸೆಳೆಯಲು ಸೇನೆಯ ಸಾಧನೆಯನ್ನು ಬಳಸಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡ ಮೋದಿ ಅವರು, ಹೊಸ ಮತದಾರರು ತಮ್ಮ ಮತವನ್ನು ಸೇನೆಯ ಹೋರಾಟಕ್ಕೆ ಅರ್ಪಿಸಬೇಕು ಎಂದಿರುವುದು ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದಿನೇಶ್ ಗುಂಡೂರಾವ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆದರೆ, ಚುನಾವಣಾ ಆಯೋಗವೂ ಎಲ್ಲಾ ತನಿಖಾ ಸಂಸ್ಥೆಗಳಂತೆ ಮೋದಿ ನಿಯಂತ್ರಣದಲ್ಲಿ ಬರುವುದರಿಂದ ನ್ಯಾಯ ಸಿಗುವುದು ಅನುಮಾನ ಎಂದು ಹೇಳಿದರು.

ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗಷ್ಟೇ ಅಲ್ಲ ಹಿಂದುಳಿದ ವರ್ಗದ ಒಬ್ಬರಿಗೂ ಟಿಕೆಟ್ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ