ಆ್ಯಪ್ನಗರ

ಪ್ರಧಾನಿ ಮಂಗಳೂರು ಭೇಟಿ: ವೈರಲ್ ಆಯ್ತು ಮೋದಿ ಫೇಸ್‌ಬುಕ್ ಪೋಸ್ಟ್

ವಿಮಾನ ನಿಲ್ದಾಣದಿಂದ ರ‍್ಯಾಲಿ ನಡೆಯುವ ಕೇಂದ್ರ ಮೈದಾನದ ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನ ಮಾನವ ಗೋಡೆ ನಿರ್ಮಿಸಿದ್ದರು ಎಂದು ಮೋದಿ ಅವರು ತಮ್ಮ ಭಾಷಣದ ವೇಳೆ ಹೇಳಿದ್ದರು. ಕರ್ನಾಟಕ ಕರಾವಳಿಯ ಜನರ ಅಭಿಮಾನಕ್ಕೆ ತಾವು ಋಣಿ ಎಂದೂ ಪ್ರಧಾನಿ ಹೇಳಿದ್ದರು.

Vijaya Karnataka Web 13 Apr 2019, 11:51 pm
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರು ಭೇಟಿ ಸಂದರ್ಭ ತಮಗೆ ದೊರೆತ ಸ್ವಾಗತದ ಬಗ್ಗೆ ಬಹಳ ಸಂತಸ ವ್ಯಕ್ತಪಡಿಸಿದ ತಮ್ಮ ಫೇಸ್‌ಬುಕ್ ಪುಟದಲ್ಲಿ ಫೋಟೋಗಳನ್ನು ಪ್ರಕಟಿಸಿದ್ದಾರೆ. ಇದು ವೈರಲ್ ಆಗಿದ್ದು, ರಾತ್ರಿ 11:30ರ ವೇಳೆಗೆ 1200ಕ್ಕೂ ಹೆಚ್ಚು ಕಮೆಂಟ್ಸ್‌ ಬಂದಿವೆ. ಅಲ್ಲದೆ 1,682 ಶೇರ್‌ಗಳಾಗಿವೆ.
Vijaya Karnataka Web PM Modis Mangaluru visit


ಪ್ರಧಾನಿ ಮೋದಿ ಅವರು ಬಿಜೆಪಿಯ ವಿಜಯ ಸಂಕಲ್ಪ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಶನಿವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದರು.

ವಿಮಾನ ನಿಲ್ದಾಣದಿಂದ ರ‍್ಯಾಲಿ ನಡೆಯುವ ಕೇಂದ್ರ ಮೈದಾನದ ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನ ಮಾನವ ಗೋಡೆ ನಿರ್ಮಿಸಿದ್ದರು ಎಂದು ಮೋದಿ ಅವರು ತಮ್ಮ ಭಾಷಣದ ವೇಳೆ ಹೇಳಿದ್ದರು. ಕರ್ನಾಟಕ ಕರಾವಳಿಯ ಜನರ ಅಭಿಮಾನಕ್ಕೆ ತಾವು ಋಣಿ ಎಂದೂ ಪ್ರಧಾನಿ ಹೇಳಿದ್ದರು.


ಮಂಗಳೂರಿನ ಬೀದಿಗಳಲ್ಲಿ ಕೇಸರಿ ಸಮುದ್ರವೇ ಹರಿಯುತ್ತಿದೆ. ಮೈದಾನದಲ್ಲೂ ಕೇಸರಿ ಅಲೆಗಳು ರಾರಾಜಿಸುತ್ತಿವೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ತಮ್ಮನ್ನು ನೋಡಲೆಂದು ಮೈದಾನದ ಹೊರಗೆ ಮರ ಹತ್ತಿ ಕುಳಿತ ಹಲವು ಅಭಿಮಾನಿಗಳನ್ನು ಉದ್ದೇಶಿಸಿ, ಇಂತಹ ರಿಸ್ಕ್‌ ತೆಗೆದುಕೊಳ್ಳಬೇಡಿ. ಕೆಳಗಿಳಿದು ಬನ್ನಿ ಎಂದು ಮನವಿ ಮಾಡಿದರು.

ಅಧಿಕಾರಕ್ಕೆ ಬಂದ ತಕ್ಷಣ ಮೀನುಗಾರಿಕೆ ಸಚಿವಾಲಯ: ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ
ದೇಶ ಕೊಳ್ಳೆ ಹೊಡೆಯೋದೇ 'ಮಹಾಮಿಲಾವಟಿ'ಗಳ ವಂಶೋದಯದ ಉದ್ದೇಶ: ಪ್ರಧಾನಿ ಮೋದಿ ವಾಗ್ದಾಳಿ
ಮಂಗಳೂರಲ್ಲಿ ಕೇಸರಿ ಅಲೆ: 'ಮರದಿಂದ ಇಳಿಯಿರಿ' ಎಂದು ವಿನಂತಿಸಿದ ಮೋದಿ
ಅಭಿವೃದ್ಧಿ, ಭದ್ರತೆಯ ದಿಟ್ಟ ನಿರ್ಧಾರಗಳಿಗೆ ಬಲಿಷ್ಠ ಸರಕಾರವೇ ಬೇಕು: ಪ್ರಧಾನಿ ಮೋದಿ
ಕರ್ನಾಟಕದಲ್ಲಿ 10 ಪರ್ಸೆಂಟ್ ಹೋಗಿ 20 ಪರ್ಸೆಂಟ್ ಸರಕಾರ ಬಂದಿದೆ: ಪ್ರಧಾನಿ ಮೋದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌