ಆ್ಯಪ್ನಗರ

ಸುಳ್ಳು ಹೇಳುತ್ತಲೆ ಪದೇ ಪದೇ ದೆವ್ವ ಹಿಡಿದಂತೆ ಹಳ್ಳಿಗಳಲ್ಲಿ ಓಡಾಡುತ್ತಿರುವ ರಾಹುಲ್: ನಿರ್ಮಲಾ

ರಾಹುಲ್ ಗಾಂಧಿ ಈ ಬಗ್ಗೆ ಸಾಕ್ಷ್ಯ ನೀಡಲಿ ಎಂದು ಸವಾಲು ಹಾಕಿದ ಅವರು, ಅದೇ ಸುಳ್ಳು ವಿಚಾರವನ್ನು ಪದೇ ಪದೇ ಹಳ್ಳಿಗಳಲ್ಲಿ ದೆವ್ವ ಹಿಡಿದಂತೆ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು. ಬೆಂಗಳೂರಿನ ಥಿಂಕರ್ಸ್ ಫೋರಂ ಆಯೊಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ದೆವ್ವಕ್ಕೆ ಹೋಲಿಸಿದರು.

Vijaya Karnataka Web 14 Apr 2019, 3:01 pm
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗೆ ಮೂವತ್ತು ಸಾವಿರ ಕೋಟಿ ಹಣ ನೀಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪದೇ ಪದೇ ಸುಳ್ಳು ಹೇಳುತ್ತ ದೆವ್ವ ಹಿಡಿದಂತೆ ಹಳ್ಳಿಗಳಲ್ಲಿ ಓಡಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದರು.
Vijaya Karnataka Web Nirmala Sitharaman new


ರಾಹುಲ್ ಗಾಂಧಿ ಈ ಬಗ್ಗೆ ಸಾಕ್ಷ್ಯ ನೀಡಲಿ ಎಂದು ಸವಾಲು ಹಾಕಿದ ಅವರು, ಅದೇ ಸುಳ್ಳು ವಿಚಾರವನ್ನು ಪದೇ ಪದೇ ಹಳ್ಳಿಗಳಲ್ಲಿ ದೆವ್ವ ಹಿಡಿದಂತೆ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನ ಥಿಂಕರ್ಸ್ ಫೋರಂ ಆಯೊಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ದೆವ್ವಕ್ಕೆ ಹೋಲಿಸಿದರು.

ನಿರ್ಮಲಾ ಸೀತಾರಾಮನ್ ಸಂವಾದ


ಹಳ್ಳಿಗಳಲ್ಲಿ ಬೇವಿನ ಸೊಪ್ಪು ಹಿಡಿದು ದೆವ್ವ ಓಡಿಸುವವರ ಕತೆಯನ್ನು ವಿವರಿಸಿ ರಾಹುಲ್ ನಡೆಯನ್ನು ಲೇವಡಿ ಮಾಡಿದ ಸಚಿವೆ, ಅದನ್ನೂ ಹಾಗೆ ಉಪೇಕ್ಷೆ ಮಾಡಬೇಕಷ್ಟೇ ಎಂದರು.

ರಫೇಲ್ ಯುದ್ದ ವಿಮಾನ ಖರೀದಿ ಪ್ರಕ್ರಿಯೆಯನ್ನು ರಕ್ಷಣಾ ಇಲಾಖೆ ಮಧ್ಯವರ್ತಿಗಳಿಲ್ಲದೆ ನಡೆಸಿದೆ ಎಂದರೆ ಕಾಂಗ್ರೆಸ್‌ಗೆ ನಂಬಲಾಗುತ್ತಿಲ್ಲ; ಅದಕ್ಕೇ ಸುಮ್ಮನೆ ಹಗರಣ ನಡೆದಿದೆ ಎಂದು ಆರೋಪಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ