ಆ್ಯಪ್ನಗರ

ರಾಹುಲ್ ಗಾಂಧಿ ಸರಕಾರವೇ ಅಸ್ತಿತ್ವಕ್ಕೆ ಬರಲಿದೆ: ಸತೀಶ ಜಾರಕಿಹೊಳಿ

ದೇಶದಲ್ಲಿ ಎಲ್ಲ ಸಂಸದರಿಗಿಂತ ಪ್ರಕಾಶ ಹುಕ್ಕೇರಿ 5 ವರ್ಷಗಳಲ್ಲಿ ಸುಮಾರು 700 ಕೋಟಿ ರೂ. ಅನುದಾನ ತಂದು, 8 ಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮೋದಿ ಅಲೆಯೆಂಬ ಭ್ರಮೆಯ ನಡುವೆಯೂ ಪ್ರಕಾಶ ಹುಕ್ಕೇರಿ ಸಂಸದರಾದರು. ಈಗ ಅವರ ಎದುರಾಳಿ ಯಾರಿದ್ದಾರೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರ ಜಯ ಖಚಿತ ಎಂದರು.

Vijaya Karnataka 28 Mar 2019, 10:32 am
ಉಗಾರ: ಯುವ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಯುಪಿಎ ಸರಕಾರವೇ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Vijaya Karnataka Web satish


ಪಟ್ಟಣದ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಎಲ್ಲ ಸಂಸದರಿಗಿಂತ ಪ್ರಕಾಶ ಹುಕ್ಕೇರಿ 5 ವರ್ಷಗಳಲ್ಲಿ ಸುಮಾರು 700 ಕೋಟಿ ರೂ. ಅನುದಾನ ತಂದು, 8 ಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮೋದಿ ಅಲೆಯೆಂಬ ಭ್ರಮೆಯ ನಡುವೆಯೂ ಪ್ರಕಾಶ ಹುಕ್ಕೇರಿ ಸಂಸದರಾದರು. ಈಗ ಅವರ ಎದುರಾಳಿ ಯಾರಿದ್ದಾರೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರ ಜಯ ಖಚಿತ ಎಂದರು.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಸಂಸದ ಪ್ರಕಾಶ ಹುಕ್ಕೇರಿ ಇನ್ನೊಬ್ಬರಂತೆ ಸುಳ್ಳು ಹೇಳದೆ, ಕೇವಲ 'ಕಾಮ್‌ ಕಿ ಬಾತ್‌' ಅಷ್ಟೇ ಮಾತನಾಡುತ್ತಾರೆ. ಕಾಗವಾಡ ಕ್ಷೇತ್ರದ ಮತದಾರರು ನನಗೆ 80 ಸಾವಿರ ಮತ ನೀಡಿದರು. ಈಗ ಅದಕ್ಕಿಂತ ಹೆಚ್ಚಿನ ಮತವನ್ನು ಹುಕ್ಕೇರಿಯವರಿಗೆ ನೀಡುವ ಜವಾಬ್ದಾರಿ ನಮಗಿದೆ ಎಂದರು.

ಸಂಸದ ಪ್ರಕಾಶ ಹುಕ್ಕೇರಿ, 40 ವರ್ಷಗಳಿಂದಲೂ ಕೇವಲ ಸಮಾಜ ಸೇವೆ ಮಾಡುವ ಗುರಿಯೊಂದಿಗೆ ಹೆಜ್ಜೆ ಇಡುತ್ತಿದ್ದು, ಎಲ್ಲ ಮತದಾರರು ಸ್ವಚ್ಛ ಮನಸ್ಸಿನಿಂದ ನನಗೆ ಮತ ಚಲಾಯಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಮಾಜಿ ಶಾಸಕ ಮೋಹನರಾವ ಶಹಾ, ಜಿಪಂ ಅಧ್ಯಕ್ಷೆ ಆಶಾತಾಯಿ ಐಹೊಳೆ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ ್ಮಣರಾವ ಚಿಂಗಳೆ, ರಾಜೇಂದ್ರ ಪೋತದಾರ, ರವೀಂದ್ರ ಗಾಣಿಗೇರ, ಸುರೇಶ ಥೋರುಶೆ ಮಾತನಾಡಿದರು. ಸಭೆಯಲ್ಲಿ ಪಕ್ಷ ದ ಜಿಲ್ಲಾ ಸದಸ್ಯರಾಗಿ ಉಜ್ವಲಾ ಶೆಟ್ಟಿ, ವಿವೇಕ ಶೆಟ್ಟಿ, ಅಭಯ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು. ಪ್ರಫುಲ್ಲ ಥೋರುಶೆ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌