ಆ್ಯಪ್ನಗರ

ಬಿಜೆಪಿ ಕ್ಯಾಂಪಿನಲ್ಲಿ ಕಾಣಿಸಿಕೊಂಡ ರಮೇಶ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಕೇಸರಿ ಪಾಳಯದಲ್ಲಿ ಸಕ್ರಿಯ ಎಂಬುದಕ್ಕೆ ಈ ಪೋಟೋ ಸಾಕ್ಷಿಯಾಗಿದೆ. ದೋಸ್ತಿ ಸರಕಾರಕ್ಕೆ ರಮೇಶ ಜಾರಕಿಹೊಳಿ ಶಾಕ್ ತಟ್ಟಿದೆ.

Vijaya Karnataka Web 25 May 2019, 2:55 pm
Vijaya Karnataka Web ರಮೇಶ್‌ ಜಾರಕಿಹೊಳಿ
ರಮೇಶ್‌ ಜಾರಕಿಹೊಳಿ
ಬೆಳಗಾವಿ: ದೋಸ್ತಿ ಸರಕಾರಕ್ಕೆ ಚುನಾವಣೆ ಫಲಿತಾಂಶದ ಶಾಕ್‌ ಜತೆಗೆ ಮತ್ತೊಂದು ಶಾಕ್‌ ಆಗಿದೆ.

ಕಾಂಗ್ರೆಸ್‌ನಿಂದ ಈಗಾಗಲೇ ಒಂದು ಕಾಲು ಹೊರಗೆ ಇಟ್ಟಿರುವ ರಮೇಶ್‌ ಜಾರಕಿಹೊಳಿ ನಡೆ ಏನಾಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿದೆ.

ಗೋಕಾಕ ಶಾಸಕ, ಸಾಹುಕಾರ್‌ ರಮೇಶ್‌ ಜಾರಕಿಹೊಳಿ ಈಗ ಬಿಜೆಪಿ ಕ್ಯಾಂಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ಕಲಬುರಗಿಯಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಗೆ ಸೋಲುಣಿಸಿದ ಡಾ. ಉಮೇಶ್‌ ಜಾಧವ್‌ಗೆ ಶುಭಾಶಯ ಕೋರಿದ ಬಿಜೆಪಿ ನಾಯಕರ ಜತೆ ರಮೇಶ್‌ ಜಾರಕಿಹೊಳಿ ಇದ್ದಾರೆ.

ಬಿಜೆಪಿ ಸಂಸದ ಉಮೇಶ ಜಾಧವ್‌ಗೆ ರಮೇಶ್ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದ್ದಾರೆ. ಉಮೇಶ್‌ಗೆ

ಪುಷ್ಪಗುಚ್ಛ ನೀಡಿ ರಮೇಶ ಜಾರಕಿಹೊಳಿ ಶುಭಾಶಯ ಕೋರಿದ್ದಾರೆ.

ಉಮೇಶ್‌ ಜಾಧವ್ ಜತೆ ಸಿಪಿ ಯೋಗೇಶ್ವರ್‌, ಮಾಲೀಕಯ್ಯ ಗುತ್ತೇದಾರ್‌ ಅವರು ರಮೇಶ್‌ ಜಾರಕಿಹೊಳಿ ಕೂಡ ಇದ್ದಾರೆ.

ರಮೇಶ್ ಜಾರಕಿಹೊಳಿ ಕೇಸರಿ ಪಾಳಯದಲ್ಲಿ ಸಕ್ರಿಯ ಎಂಬುದಕ್ಕೆ ಈ ಪೋಟೋ ಸಾಕ್ಷಿಯಾಗಿದೆ. ದೋಸ್ತಿ ಸರಕಾರಕ್ಕೆ ರಮೇಶ ಜಾರಕಿಹೊಳಿ ಶಾಕ್ ತಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ