ಆ್ಯಪ್ನಗರ

ಮಾನ, ಮರ್ಯಾದೆ ಇದ್ದರೆ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ರಾಜೀನಾಮೆ ಕೊಡ್ಬೇಕು: ಬೇಗ್ ರೋಷ

ನನ್ನ ಕೈಬಿಟ್ರೂ, ರಾಮಲಿಂಗಾರೆಡ್ಡಿಯವರನ್ನ ಕೈಬಿಟ್ರು, ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರನ್ನ ಕಡೆಗಣಿಸಲಾಗ್ತಿದೆ. ಧರ್ಮ ಒಡೆಯೋದು, ಜಾತಿಗಳ ನಾಯಕರನ್ನ ಬೈಯೋದು ಮಾಡಿದ್ರೆ ಜನ ಒಪ್ತಾರಾ ಎಂದು ಬೇಗ್‌ ಪ್ರಶ್ನಿಸಿದರು.

Vijaya Karnataka Web 21 May 2019, 12:56 pm
ಬೆಂಗಳೂರು: ಲೋಕಸಭಾ ಚುನಾವಣೆಗೆ ಟಿಕೆಟ್‌ ನೀಡುವಾಗಲೇ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್‌ ಕೊಟ್ಟಿರಲಿಲ್ಲ. ಮತಗಟ್ಟೆ ಸಮೀಕ್ಷೆ ನೋಡಿದ ನಂತರ ಕಾಂಗ್ರೆಸ್‌ ಪಕ್ಷದ್ದು ಫ್ಲಾಪ್‌ ಶೋ ಆಗಿದೆ ಎಂದು ಕಾಂಗ್ರೆಸ್‌ ಶಾಸಕ ರೋಷನ್‌ ಬೇಗ್‌ ಕಿಡಿಕಾರಿದ್ದಾರೆ.
Vijaya Karnataka Web ರೋಷನ್‌ ಬೇಗ್‌
ರೋಷನ್‌ ಬೇಗ್


ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ರೋಷನ್‌ ಬೇಗ್‌ ಮಾತನಾಡಿದರು.

ಆದ್ರೆ ಈ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಕಡೆಗಣನೆ ಮಾಡಲಾಯ್ತು, ಎಕ್ಸಿಟ್ ಪೋಲ್ ನೋಡ್ದಾಗ ಬೇಸರ ಆಯ್ತು...

ಇದು ಪ್ಲಾಪ್ ಶೋ ಅಂತಾ ಬೇಗ್‌ ಬೇಸರ ವ್ಯಕ್ತಪಡಿಸಿದರು.

ಯಾವಾಗಲೂ ಒಕ್ಕಲಿಗರನ್ನ ಬೈತಾರೆ, ಒಕ್ಕಲಿಗರು, ಲಿಂಗಾಯತರು ಒಂದ್ಕಡೆ ಒಟ್ಟಾದ್ರು, ಕುಮಾರಸ್ವಾಮಿ, ದೇವೇಗೌಡರನ್ನ ಬಾಯೀಗ್ ಬಂದಾಗೆ ಬೈತಾರೆ. ಧರ್ಮ ಒಡೆದಿದ್ರಿಂದ 25-30 ಸ್ಥಾನ ಕಡಿಮೆಯಾಯ್ತು ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 79 ಸ್ಥಾನ ಬರೋಕೆ ಸಿದ್ದರಾಮಯ್ಯನೇ ಕಾರಣ ಎಂದರು.

ನನ್ನ ಕೈಬಿಟ್ರೂ, ರಾಮಲಿಂಗಾರೆಡ್ಡಿಯವರನ್ನ ಕೈಬಿಟ್ರು, ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರನ್ನ ಕಡೆಗಣಿಸಲಾಗ್ತಿದೆ. ಧರ್ಮ ಒಡೆಯೋದು, ಜಾತಿಗಳ ನಾಯಕರನ್ನ ಬೈಯೋದು ಮಾಡಿದ್ರೆ ಜನ ಒಪ್ತಾರಾ ಎಂದು ರೋಷನ್‌ ಬೇಗ್‌ ಪ್ರಶ್ನಿಸಿದರು.

ಸಿಎಲ್‌ಪಿ ಲೀಡರ್ ದುರಾಹಂಕಾರದಿಂದ ಈ ರೀತಿ ಫಲಿತಾಂಶ ಬರ್ತಿದೆ. ಕುಮಾರಸ್ವಾಮಿ ಮನೆ ಬಾಗಿಲಿಗೆ ಹೋಗಿ ಸಿಎಂ ಮಾಡಿದ್ರು. ಆನಂತರ ನಾನೇ ಸಿಎಂ ಅಂತಾ ಹೇಳ್ಕೊಂಡು ಓಡಾಡ್ತಿದ್ದಾರೆ. ಜನ ಇದನೆಲ್ಲಾ ನೋಡ್ತಾರೆ. ಕೆಪಿಸಿಸಿ ಅಧ್ಯಕ್ಷ , ಸಿಎಲ್‌ಪಿ ಲೀಡರ್ ರಾಜೀನಾಮೆ ಕೊಡಬೇಕು, ಮಾನ ಮರ್ಯಾದೆ ಇದ್ರೆ ರಾಜೀನಾಮೆ ನೀಡಬೇಕಾಗುತ್ತೆ ಎಂದು ರೋಷನ್‌ ಬೇಗ್‌ ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌