ಆ್ಯಪ್ನಗರ

ಜೆಡಿಎಸ್‌ ಸಖ್ಯ ಬಿಡದಿದರೆ ಕಾಂಗ್ರೆಸ್‌ಗೆ ನಷ್ಟ: ಸಂದೇಶ್‌ ನಾಗರಾಜ್‌ ಸಂದೇಶ

ಸಚಿವ ಪುಟ್ಟರಾಜು ಕೊಟ್ಟ ಮಾತಿನಂತೆ ರಾಜೀನಾಮೆ ನೀಡಬೇಕು. ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ತಾರೋ ಇಲ್ಲವೋ ಗೊತ್ತಿಲ್ಲ. ಈ ಮಾತನ್ನು ಅವರಿಗೆ ನಾನು ನೆನಪಿಸುತ್ತಿದ್ದೇನೆ. ಮಂತ್ರಿಗಳು ಸುಳ್ಳು ಹೇಳಬಾರದು. ಇದು ರಾಜ್ಯದ ಜನತೆಗೆ ಸುಳ್ಳು ಹೇಳಿದ ಹಾಗೆ ತಿವಿದರು.

Vijaya Karnataka Web 27 May 2019, 6:26 pm
ಮದ್ದೂರು: ಆರಂಭದಿಂದಲೂ ಸುಮಲತಾ ಗೆಲ್ತಾರೆ ಅಂತ ನಮಗೆ ಗೊತ್ತಿತ್ತು. ಅದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಕಡಿಮೆ ಎಂದರೂ ಒಂದು ಲಕ್ಷ ಮತಗಳಿಂದ ಗೆಲ್ತಾರೆ ಅಂತ ಹೇಳಿದ್ದೆ. ಅವ್ರು ಒಂದು ಲಕ್ಷಕ್ಕಿಂತ ಕಡಿಮೆ ಅಂತರದಿಂದ ಗೆದ್ದಿದ್ರೆ ಸೋತ ಹಾಗೆ ಅಂತ ಅನ್ಕೊಂಡಿದ್ದೆ ಎಂದು ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ತಿಳಿಸಿದ್ದಾರೆ.
Vijaya Karnataka Web ಸಂದೇಶ್‌ ನಾಗರಾಜ್‌
ಸಂದೇಶ್‌ ನಾಗರಾಜ್‌


ಮದ್ದೂರಿನಲ್ಲಿ ವಿದಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಎರಡೂವರೆ ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ನಿಖಿಲ್‌ ಗೆಲ್ಲುತ್ತಾರೆ ಎಂದು ಹೇಳಿದ್ದ ಸಚಿವ ಸಿ.ಎಸ್‌. ಪುಟ್ಟರಾಜುಗೆ ಸಂದೇಶ್‌ ನಾಗರಾಜ್‌ ಟಾಂಗ್‌ ನೀಡಿದ್ದಾರೆ.

ಎರಡೂವರೆ ಲಕ್ಷ ಮತಗಳಿಂದ ಸೋತ್ರೆ ರಾಜಕೀಯ ನಿವೃತ್ತಿ ಅಥವಾ ಸನ್ಯಾಸತ್ವ ತೆಗೆದುಕೊಳ್ಳೋದಾಗಿ ಸಚಿವರೊಬ್ಬರು ಹೇಳಿದ್ರು. ಅವ್ರಿಗೆ ಇದನ್ನ ನೆನಪಿಸುತ್ತಿದ್ದೇನೆ ಎಂದರು.

ಸಚಿವ ಪುಟ್ಟರಾಜು ಕೊಟ್ಟ ಮಾತಿನಂತೆ ರಾಜೀನಾಮೆ ನೀಡಬೇಕು. ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ತಾರೋ ಇಲ್ಲವೋ ಗೊತ್ತಿಲ್ಲ. ಈ ಮಾತನ್ನು ಅವರಿಗೆ ನಾನು ನೆನಪಿಸುತ್ತಿದ್ದೇನೆ. ಮಂತ್ರಿಗಳು ಸುಳ್ಳು ಹೇಳಬಾರದು. ಇದು ರಾಜ್ಯದ ಜನತೆಗೆ ಸುಳ್ಳು ಹೇಳಿದ ಹಾಗೆ ತಿವಿದರು.

ಅವರು ಮರೆತಿರಬೇಕು. ದಯವಿಟ್ಟು ಅವ್ರ ಮಾತನ್ನ ಅವರಿಗೆ ನೆನಪಿಸಿ. ‌ಕಾಂಗ್ರೆಸ್ ಜೆಡಿಎಸ್ ಜೊತೆ ಸೇರಿದಾಗಲೇ ಹೀನಾಯವಾಯಿತು. ಜೆಡಿಎಸ್ ಜೊತೆಗಿನ ಸಂಬಂಧ ಬಿಟ್ರೆ ಕಾಂಗ್ರೆಸ್ ನಾಯಕರು ಅಸ್ತಿತ್ವ ಉಳಿಸಿಕೊಳ್ತಾರೆ ಎಂದರು.

ಕಾಂಗ್ರೆಸ್ ಪಕ್ಷ ಜೆಡಿಎಸ್ ಜತೆಗಿನ ಸಂಬಂಧ ಬಿಡದೆ ಇದ್ದರೆ ಈಗ ಗೆದ್ದಿರುವ ಒಂದು ಸೀಟನ್ನು ಮುಂದೆ ಕಳೆದುಕೊಳ್ಳುತ್ತದೆ ಎಂದು ಸಂದೇಶ್ ನಾಗರಾಜ್ ಸಂದೇಶ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ