ಆ್ಯಪ್ನಗರ

ಸತೀಶ್‌ ಒಬ್ಬ ಗೋಮುಖ ವ್ಯಾಘ್ರ; ಅವನಿಗೆ ಬದ್ಧತೆಯೇ ಇಲ್ಲ: ರಮೇಶ್‌ ಜಾರಕಿಹೊಳಿ

ಬೆಂಗಳೂರಿಗೆ ಹೋದ ಬಳಿಕ ರಾಜೀನಾಮೆ ನೀಡುವುದಾಗಿ ಸತೀಶ್‌ ಹೇಳಿದ್ದ. ಆದರೆ ಬೆಂಗಳೂರಿಗೆ ಹೋದ ಬಳಿಕ ಉಲ್ಟಾ ಹೊಡೆದಿದ್ದಾನೆ. ಅವನಿಗೆ ಯಾವುದೇ ಬದ್ಧತೆ ಇಲ್ಲ ಎಂದು ಅವರು ಏಕವಚನದಲ್ಲಿ ಸಹೋದರನ ಸತೀಶ್‌ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

TIMESOFINDIA.COM 25 Apr 2019, 11:32 am
[This story originally published in Times of India on April 25,2019]
Vijaya Karnataka Web ramesh


ಬೆಂಗಳೂರು: ಅರಣ್ಯ ಸಚಿವ ಸತೀಶ್‌ ಜಾರಕಿ ಹೊಳಿ ಒಬ್ಬ ಗೋಮುಖ ವ್ಯಾಘ್ರ. ಅವನ ಕುತಂತ್ರದಿಂದಲೇ ನಾನಿಂದು ಸಚಿವನಾಗದೇ ಇದ್ದೇನೆ. ಈಗ ನನಗೆ ಅವರ ತಂತ್ರಗಾರಿಕೆಗಳು ಅರ್ಥವಾಗುತ್ತಿದೆ ಎಂದು ಗೋಕಾಕ್‌ ಶಾಸಕ ಹಾಗೂ ರಮೇಶ್‌ ಜಾರಕಿಹೊಳಿ ಸಹೋದರ ರಮೇಶ್‌ ಜಾರಕಿಹೊಳಿ ವಿರುದ್ಧ ಕೆಂಡಕಾರಿದ್ದಾರೆ.

ಮೈತ್ರಿ ಸರಕಾರದಲ್ಲಿ ಆರಂಭದಿಂದಲೂ ಜಾರಕಿಹೊಳಿ ಸಹೋದರರ ನಡುವೆ ಎಲ್ಲವೂ ಸರಿ ಇದ್ದಿದ್ದಿಲ್ಲ. ಲೋಕಸಭೆ ಚುನಾವಣೆಯ ಬಳಿಕ ಇದೀಗ ಅಸಮಾಧಾನದ ಬೆಂಕಿ ಇನ್ನಷ್ಟು ಜೋರಾಗಿ ಹೊತ್ತಿಕೊಂಡಿದ್ದು, ಸಹೋದರನ ವಿರುದ್ಧ ರಮೇಶ್‌ ಜಾರಕಿಹೊಳಿ ಕೆಂಡಾಮಂಡಲವಾಗಿದ್ದಾರೆ. ಅಷ್ಟೇ ಅಲ್ಲ, ತಾನು ಮಾತ್ರವಲ್ಲದೆ ತನ್ನ ಜತೆಗಾರರನ್ನೂ ಸೇರಿಸಿಕೊಂಡು ಶಾಸಕನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದಾರೆ.

ಬೆಂಗಳೂರಿಗೆ ಹೋದ ಬಳಿಕ ರಾಜೀನಾಮೆ ನೀಡುವುದಾಗಿ ಸತೀಶ್‌ ಹೇಳಿದ್ದ. ಆದರೆ ಬೆಂಗಳೂರಿಗೆ ಹೋದ ಬಳಿಕ ಉಲ್ಟಾ ಹೊಡೆದಿದ್ದಾನೆ. ಅವನಿಗೆ ಯಾವುದೇ ಬದ್ಧತೆ ಇಲ್ಲ ಎಂದು ಅವರು ಏಕವಚನದಲ್ಲಿ ಸಹೋದರನ ಸತೀಶ್‌ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಮೇಶ್‌ ಜಾರಕಿಹೊಳಿ ಪಕ್ಷಕ್ಕೆ ಬರುವ ವಿಚಾರ ಗೊತ್ತಿಲ್ಲ, ನಾನು ತಲೆ ಹಾಕಿಲ್ಲ: ಬಿಎಸ್‌ವೈ

ಮುಂದಿನ ಅಸೆಂಬ್ಲಿ ಚುನಾವಣೆ ಸತೀಶ್‌ ವಿರುದ್ಧ ಸೆಣೆಸಿ, ಅವನ ರಾಜಕೀಯ ಜೀವನವನ್ನೇ ಕೊನೆಗೊಳಿಸುವುದಾಗಿ ಸವಾಲು ಹಾಕಿದರು.
ಏತನ್ಮಧ್ಯೆ ರಮೇಶ್‌ ಜಾರಕಿಹೊಳಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿಎಂ ಕುಮಾರಸ್ವಾಮಿ ಅವರ ಮಧ್ಯಸ್ಥಿಕೆ ಬಳಿಕ ಅವರು ಸುಮ್ಮನಿರಬೇಕಿತ್ತು. ಆದರೆ ಇದೀಗ ಮತ್ತೆ ಅಪಸ್ವರ ಎತ್ತಿದ್ದಾರೆ. ಅಸಮಾಧಾನದ ಕುರಿತು ಅವರಲ್ಲಿ ಸ್ಪಷ್ಟ ನಿಲುವಿಲ್ಲ. ರಮೇಶ್‌ ಸೋದರ ಸಂಬಂಧಿ ಅಂಬಿರಾವ್‌ ಈ ವಿಚಾರದಲ್ಲಿ ಅವರನ್ನು ಪ್ರೇರೇಪಿಸುತ್ತಿದ್ದಾರೆ ಎಂಬ ವಿಚಾರವೂ ಇದೆ ಎಂದು ಹೇಳಿದರು.

ಒಬ್ಬನೇ ರಾಜೀನಾಮೆ ಕೊಡಲ್ಲ, ಬಲ್ಕ್ ಆಗಿ ಕೊಡುತ್ತೇವೆ, ಕೆಲವೇ ದಿನದಲ್ಲಿ ಸಿಹಿ ಸುದ್ದಿ: ...

ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿರುದ್ಧವೂ ಗುಡಿಗಿದ ರಮೇಶ್‌ ಜಾರಕಿಹೊಳಿ, ಸದ್ಯದಲ್ಲೇ ಅವರ ಸಂಪೂರ್ಣ ಜಾತಕ ವಿವರವನ್ನೂ ಬಹಿರಂಗಪಡಿಸುತ್ತೇನೆ. ಹೇಗೆ ಅವರು ಈಗಿನ ಜೀವನ ನಡೆಸಲು ಶಕ್ತರಾದರು ಎಂಬುದನ್ನು ತಿಳಿಸುತ್ತೇನೆ. ಆಕೆಯ ಕುಟುಂಬ ಎಂತಹುದು ಎಂಬುದನ್ನೂ ನೀವು ನೋಡಬಹುದು ಎಂದು ಕಿಡಿಕಾರಿದರು.

ರಮೇಶ್ ಜಾರಕಿಹೊಳಿಗೆ ಉಸಿರುಗಟ್ಟಿದ್ದು ಗೊತ್ತಿಲ್ಲ, ದೇವರು ಒಳ್ಳೇದು ಮಾಡಲಿ: ಡಿಕೆಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌