ಆ್ಯಪ್ನಗರ

26ನೇ ಬಾರಿಗೆ ಮತಗಟ್ಟೆಗೆ ಮೊದಲಿಗರಾಗಿ ಮತ ಚಲಾಯಿಸಿದ ಹಿರಿಯಜ್ಜ

ಜಿಲ್ಲೆಯಾದ್ಯಂತ , ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಹ ಶಾಂತಿಯುತ ಮತದಾನ ನಡೆಯುತ್ತಿದೆ.

Vijaya Karnataka Web 18 Apr 2019, 11:29 am
ಕೊಡಗು: ಕೊಡಗಿನಲ್ಲಿ ಮುಂಜಾನೆ 7 ರಿಂದ ಬಿರುಸಿನ ಶಾಂತಿಯುತ ಮತದಾನ ಆರಂಭವಾಗಿದ್ದು ಹಿರಿಯ ನಾಗರಿಕರಾದ ಮಿಟ್ಟು ಚಂಗಪ್ಪ (78) ಸತತ 26ನೇ ಬಾರಿಗೆ ಬೂತ್‌ಗೆ ಮೊದಲಿಗರಾಗಿ ಮತದಾನ ಮಾಡಿದರು.
Vijaya Karnataka Web Voting


1961ರಿಂದ ಅವರು ಮತಗಟ್ಟೆಗೆ ಮೊದಲಿಗರಾಗಿ ಹಕ್ಕು ಚಲಾಯಿಸುತ್ತಿದ್ದಾರೆ.

ಜಿಲ್ಲೆಯಾದ್ಯಂತ , ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಹ ಶಾಂತಿಯುತ ಮತದಾನ ನಡೆಯುತ್ತಿದೆ. ಜಿಲ್ಲೆಯ ಮೂರ್ನಾಲ್ಕು ಕಡೆಗಳಲ್ಲಿ ಮತಯಂತ್ರದಲ್ಲಿ ದೋಷ ಕಂಟುಬಂದಿತ್ತು. ಸುಂಟಿಕೊಪ್ಪದ 134, 135 ಹಾಗೂ ಕರಡದ 84, ಹಾಗೂ ಮಡಿಕೇರಿಯ ಜೂನಿಯರ್ ಕಾಲೇಜು, ಕುಶಾಲನಗರ ಮತಗಟ್ಟೆ ಸಂಖ್ಯೆ 173 ಮತಗಟ್ಟೆಯಲ್ಲಿ ಸಮಸ್ಯೆ ಕಂಡು ಬಂದಿದ್ದು ಮತದಾನ ಸ್ವಲ್ಪ ವಿಳಂಬವಾಗಿ ಆರಂಭವಾಯಿತು.

ಇನ್ನೂ ಕೆಲವೆಡೆ ಮತಯಂತ್ರ ದೋಷ ಪರಿಹಾರಕ್ಕೆ ಸಿಬ್ಬಂದಿಗಳ ಯತ್ನಿಸುತ್ತಿದ್ದಾರೆ.

ಮತಗಟ್ಟೆಗೆ ಭೇಟಿ ನೀಡಿದ ಪ್ರತಾಪ್ ಸಿಂಹ

ಮಡಿಕೇರಿಯ ಮತಗಟ್ಟೆಗಳಿಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಮತಗಟ್ಟೆಗೆ ಬರುವ ಜನರನ್ನು ಮಾತನಾಡಿಸಿದ ಅವರು, ಮತಗಟ್ಟೆ ಸಾಲಿನಲ್ಲಿ ನಿಂತವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಘಟಾನುಘಟಿಗಳಿಂದ ಮತದಾನ

ಮಡಿಕೇರಿಯಲ್ಲಿ ಶಾಸಕ ಬೋಪಯ್ಯ, ರಂಜನ್, ಎಂಎಲ್‌ಸಿ ಸುನಿಲ್ ಸುಂಬ್ರಮಣಿ, ವೀಣಾ ಅಚ್ಚಯ್ಯ ಮತದಾನ ಮಾಡಿದರು

ಕಾಡಾನೆ ಹಾವಳಿ ಸ್ಥಳಗಳಲ್ಲಿ ಮತದಾನಕ್ಕೆ ವಿಶೇಷ ವ್ಯವಸ್ಥೆ


ಕೊಡಗಿನಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ, ಸಖಿ ಜೊತೆ ಆನೆ ಮಾನವ ಸಂಘರ್ಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಅಂತಹ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಕೊಡಗು ಡಿಸಿ ಅನೀಜ್ ಜಾಯ್ ಹಾಗೂ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಿದ್ದು, ಅರಣ್ಯ ಇಲಾಖೆಯಿಂದ ಮತದಾರರಿಗೆ ಭದ್ರತೆ ಕಲ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ