ಆ್ಯಪ್ನಗರ

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಗೆಲುವಿನ ಅಬ್ಬರ

ಬಿಜೆಪಿ ಹಿರಿಯ ನಾಯಕಿ ಶೋಭಾ ಕರಂದ್ಲಾಜೆ 2014ರ ಲೋಕಸಭಾ ಚುನಾವಣೆಯಲ್ಲಿ 1,80,000 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಅಂತರದಿಂದ ಗೆದ್ದಿದ್ದರು. ಇದೀಗ ಮತ್ತೆ ಭಾರಿ ಬಹುಮತದಿಂದ ಅಧಿಕಾರಕ್ಕೇರಿದ್ದಾರೆ.

Vijaya Karnataka Web 23 May 2019, 6:31 pm
ಉಡುಪಿ: ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭರ್ಜರಿ ಗೆಲುವು ದಾಖಲಿಸಿದ್ದಾರೆ.
Vijaya Karnataka Web shobhha-karandlaje


ತಮ್ಮ ನಿಕಟ ಪ್ರತಿಸ್ಪರ್ಧಿ ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಪ್ರಮೋದ್ ಮಧ್ವರಾಜ್ ವಿರುದ್ಧ ಶೋಭಾ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕಿ ಶೋಭಾ ಕರಂದ್ಲಾಜೆ 2014ರ ಲೋಕಸಭಾ ಚುನಾವಣೆಯಲ್ಲಿ 1,80,000 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಅಂತರದಿಂದ ಗೆದ್ದಿದ್ದರು. ಇದೀಗ ಭಾರಿ ಬಹುಮತದಿಂದ ಮಗದೊಮ್ಮೆ ಸಂಸತ್ ಪ್ರವೇಶಿಸಲಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
ಶೋಭಾ ಕರಂದ್ಲಾಜೆ (ಬಿಜೆಪಿ): 717482
ಪ್ರಮೋದ್ ಮಧ್ವರಾಜ್ (ಜೆಡಿಎಸ್): 363316

7ನೇ ಸುತ್ತಿನ ಮತ ಎಣಿಕೆ ವೇಳೆ 2014ರಲ್ಲಿ‌ 1,81,643 ಮತಗಳ ಅಂತರದಿಂದ‌ ಗೆದ್ದ ದಾಖಲೆ ಮುರಿದ ಬಿಜೆಪಿಯ‌ ಶೋಭಾ‌ ಕರಂದ್ಲಾಜೆ.

Mandya, Hassan Tumkuru Result 2019: ಮಂಡ್ಯ, ಹಾಸನ, ತುಮಕೂರಿನ ತಾಜಾ ಸ್ಥಿತಿಗತಿ: ಇಲ್ಲಿ ನೋಡಿ.
Karnataka Results 2019: ಕರ್ನಾಟಕದ 28 ಕ್ಷೇತ್ರಗಳಲ್ಲಿ ಏನಾಗಿದೆ?: ಮುಖ್ಯಾಂಶಗಳು ಇಲ್ಲಿವೆ
Lok Sabha Elections Result: ದೇಶಾದ್ಯಂತ ಹೇಗಿದೆ ಹವಾ?: ಮುಖ್ಯಾಂಶಗಳು ಇಲ್ಲಿವೆ
ಲೋಕಸಭೆ ಚುನಾವಣೆ ಫಲಿತಾಂಶ: ಎಲ್ಲೆಡೆ ಏನೇನಾಯ್ತು? ಇಲ್ಲಿ ನೋಡಿ
ಕರ್ನಾಟಕ ರಿಸಲ್ಟ್: ಮತದಾರರ ಒಲವು ದೋಸ್ತಿಗೋ, ಕಮಲಕ್ಕೋ?

ಈ ಹಿಂದಿನ ವಿಜೇತರು:
2014: ಶೋಭಾ ಕರಂದ್ಲಾಜೆ (ಬಿಜೆಪಿ)
2012: ಕೆ. ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)
2009: ಡಿವಿ ಸದಾನಂದ ಗೌಡ (ಬಿಜೆಪಿ)

ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತು ಜೆಡಿಎಸ್ ನಾಯಕ ಪ್ರಮೋದ್ ಮಧ್ವರಾಜ್ ನಡುವೆ ನೇರಾನೇರ ಹಣಾಹಣಿಗೆ ಸಾಕ್ಷಿಯಾಗಿರುವ ಉಡುಪಿ ಚಿಕ್ಕಮಗಳೂರು ರಾಜ್ಯದ ಪ್ರತಿಷ್ಠಿತ ಲೋಕ ಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಎರಡನೇ ಹಂತದ ಚುನಾವಣೆಯಲ್ಲಿ (ಏಪ್ರಿಲ್ 18) ರಾಜ್ಯದಲ್ಲಿ ಮತದಾನ ನಡೆದ 14 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕ್ಷೇತ್ರ ಕೂಡ ಒಂದು. ಈ ಸಂಸದೀಯ ಕ್ಷೇತ್ರ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡಿದೆ.

2008ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಕ್ಷೇತ್ರದಲ್ಲಿರುವ ಒಟ್ಟು 18,16,960 ಜನಸಂಖ್ಯೆಯಲ್ಲಿ 72% ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಮತ್ತು 28% ನಗರ ಪ್ರದೇಶಗಳಲ್ಲಿದೆ. 2014ರ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಆಗಿನ ಸಂಸದರಾಗಿದ್ದ, ಕಾಂಗ್ರೆಸ್‌ನ ಕೆ ಜಯಪ್ರಕಾಶ್ ಹೆಗಡೆ ಅವರನ್ನು ಭರ್ಜರಿ ಮತಗಳ ಅಂತರದಿಂದ (1,80,000 ಕ್ಕಿಂತ ಹೆಚ್ಚು) ಸೋಲಿಸಿದ್ದರು.

ಈ ಭಾರಿ ಗೆಲುವು ಮರುಕಳಿಸುವ ವಿಶ್ವಾಸ ಹೊಂದಿರುವ ಬಿಜೆಪಿ ಮತ್ತೆ ಶೋಭಾ ಅವರನ್ನೇ ಕಣಕ್ಕಿಳಿಸಿ ಅದೃಷ್ಟ ಪರೀಕ್ಷಿಸಲು ಹೊರಟಿದೆ. ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಪ್ರಮೋದ್ ಮಧ್ವರಾಜ್ ಅವರು ಪ್ರಮುಖ ಎದುರಾಳಿಯಾಗಿದ್ದಾರೆ

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ನ್ನು ಬಾಚಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಇಂದಿನ ಫಲಿತಾಂಶದಲ್ಲಿ ಸುಲಭ ಗೆಲುವಾಗುವ ನಿರೀಕ್ಷೆ ಕೇಸರಿ ಪಕ್ಷದ್ದು. ಆದರೆ ಅಂದುಕೊಂಡತೆ ಗೆಲುವು ಸುಲಭ ಸಾಧ್ಯವಲ್ಲ. ಶೋಭಾ ಅವರು ಪಕ್ಷದ ಕಾರ್ಯಕರ್ತರಿಗೆ ಕೈಗೂ ಸುಲಭವಾಗಿ ಸಿಗುತ್ತಿಲ್ಲ.ಅದರ ಜತೆಗೆ ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿರುವ ಆರೋಪ ಅವರ ಮೇಲಿದೆ.

ನಾಪತ್ತೆಯಾಗಿರುವ 7 ಮಂದಿ ಮೀನುಗಾರರ ಬಗ್ಗೆ ಶೋಭಾ ಧ್ವನಿ ಎತ್ತದಿರುವ ನೋವು ಕ್ಷೇತ್ರದ ಜನಕ್ಕಿದೆ. ಡಿಸೆಂಬರ್ 15, 2018ರಲ್ಲಿ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಹಡಗು ನಾಪತ್ತೆಯಾಗಿದ್ದು ಇದು ನೌಕಾ ಸೇನೆ ಹಡಗಿಗೆ ಡಿಕ್ಕಿ ಹೊಡೆದು ಮುಳುಗಿ ಹೋಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಮೌನ ತಳೆದಿದ್ದು, ಶೋಭಾ ಕೂಡ ಅದನ್ನೇ ಕಾಯ್ದುಕೊಂಡಿರುವುದು ಕ್ಷೇತ್ರದ ಜನರಿಗೆ ಆಕ್ರೋಶ ತರಿಸಿದೆ.

ನೀರಿನ ಕೊರತೆ, ಕುಂಟುತ್ತ ಸಾಗಿರುವ ರಾಷ್ಟ್ರೀಯ ಹೆದ್ದಾರಿ -66 ಕಾಮಗಾರಿ ಮತ್ತು ಕಾಫಿ ಬೆಳೆಗಾರರ ಸಮಸ್ಯೆಗಳು- ಉಡುಪಿ ಚಿಕ್ಕಮಗಳೂರು ಮತದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ.

ಒಟ್ಟು ಮತದಾರರ ಪೈಕಿ 75.74 ಶೇ. (14,94,444) ಏಪ್ರಿಲ್ 18 ರಂದು ಮತ ಚಲಾಯಿಸಿದ್ದಾರೆ. ಇಂದು (ಮೇ 23) ಫಲಿತಾಂಶ ಹೊರಬೀಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌