ಆ್ಯಪ್ನಗರ

ಲೋಕಸಭಾ ಚುನಾವಣೆ ನಂತರ ಯಡಿಯೂರಪ್ಪರನ್ನು ಬಿಸಾಕಿ ಬಿಡ್ತಾರೆ: ಸಿದ್ದರಾಮಯ್ಯ

​ಮೋದಿಗೆ ಎದುರಾಳಿ ಇಲ್ಲವೆನ್ನುವ ವಿಚಾರ ಬಗ್ಗೆ ಹೇಳುವುದಾದರೆ ಕೇಡುಗಾಲ ಬಂದ್ರೆ ಹಿಂಗೇ ಅನ್ನಿಸೋದು. ಚರಿತ್ರೆ ನೋಡಿ ಕೇಡುಗಾಲ ಬಂದಾಗ ಹೀಗೆ ಮಾತನಾಡೋದು. ಮೋದಿಗೆ ಸೋಲುವ ಕೇಡುಗಾಲ ಬಂದಿದೆ

Vijaya Karnataka Web 1 Apr 2019, 6:42 pm
ಬಾಗಲಕೋಟ: ಬಿಜೆಪಿಯಲ್ಲಿ ಯಡಿಯೂರಪ್ಪ ಸದ್ದು ಏನು ನಡೆಯುತ್ತಿಲ್ಲ. ಯಡಿಯೂರಪ್ಪ ಮಾತು ಯಾರು ಕೇಳುತ್ತಿಲ್ಲ. ಯಡಿಯೂರಪ್ಪ ತೋರಿಕೆಗೆ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ಬಾಗಲಕೋಟದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡಿದರು.

ಯಡಿಯೂರಪ್ಪ ಅವರನ್ನು ಲೋಕಸಭಾ ಚುನಾವಣೆ ಮುಗಿವವರೆಗೆ ಮಾತ್ರ ಇಟ್ಟುಕೊಂಡಿರುತ್ತಾರೆ. ನಂತರ ಉಪ್ಪಿನಕಾಯಿ ಬಿಸಾಡಿದ ಹಾಗೆ ಬಿಸಾಕಿ ಬಿಡ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬುಟ್ಟಿಯಲ್ಲಿ ಹಾವಿದೆ ಅನ್ನೋ ರೀತಿಯಲ್ಲಿ ಭಯ ಬೀಳಿಸಲು ಯತ್ನಿಸುತ್ತಾರೆ. ಆದರೆ ಬುಟ್ಟಿಯಲ್ಲಿ ಹಾವೇ ಇರಲ್ಲ. ಬಿಜೆಪಿಯವರದ್ದು ಕೇವಲ ಬೊಗಳೆ ಪಕ್ಷ ಎಂದರು.

ಕಪ್ಪು ಕಾಣಿಕೆ ಕೊಟ್ಟಿರೋದು ಸಾಬೀತಾದ್ರೆ ಬಿಎಸ್ವೈ ರಾಜಿನಾಮೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದರು.

ಸಾಬೀತು ಮಾಡೋವರು ಯಾರು. ಇನ್ ಕಮ್ ಟ್ಯಾಕ್ಸ್ ನವರು ಸಾಬೀತು ಮಾಡ್ಬೇಕು. ಕೇಂದ್ರ ಸರಕಾರದ ಅಧೀನದಲ್ಲಿ ಇನ್ ಕಮ್ ಟ್ಯಾಕ್ಸ್ ಕಚೇರಿ ಬರುತ್ತೆ. ನಾವೇಕೆ ಸಾಬೀತು ಮಾಡ್ಬೇಕು. ಕೇಂದ್ರ ಸರಕಾರವೇ ಸಾಬೀತು ಮಾಡ್ಬೇಕು ಎಂದು ಸಮನ್ವಯ ಸಂಚಾಲಕರು ತಿಳಿಸಿದರು.

ಮೋದಿಗೆ ಎದುರಾಳಿ ಇಲ್ಲವೆನ್ನುವ ವಿಚಾರ ಬಗ್ಗೆ ಹೇಳುವುದಾದರೆ ಕೇಡುಗಾಲ ಬಂದ್ರೆ ಹಿಂಗೇ ಅನ್ನಿಸೋದು. ಚರಿತ್ರೆ ನೋಡಿ ಕೇಡುಗಾಲ ಬಂದಾಗ ಹೀಗೆ ಮಾತನಾಡೋದು. ಮೋದಿಗೆ ಸೋಲುವ ಕೇಡುಗಾಲ ಬಂದಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌