ಆ್ಯಪ್ನಗರ

ಸಿದ್ದರಾಮಯ್ಯ ಬಂದರೂ ಮೈಸೂರಲ್ಲಿ ದೋಸ್ತಿಗಳು ಒಂದಾಗಲೇ ಇಲ್ಲ: ಶ್ರೀನಿವಾಸ ಪ್ರಸಾದ್‌

ನಾನು ಹಾಗೂ ವಿಶ್ವನಾಥ್ 45 ವರ್ಷಗಳಿಂದ ಸ್ನೇಹಿತರು. ಚುನಾವಣೆ ಸಂದರ್ಭದಲ್ಲಿ ಭೇಟಿ ಮಾಡಿರಲಿಲ್ಲ. ರಾಜಕೀಯವಾಗಿ ಬೇರೆಯಾಗಿದ್ದರೂ ವಿಶ್ವಾಸಕ್ಕೆ ಧಕ್ಕೆ ಆಗಿಲ್ಲ. ಮಾತುಕತೆ ವೇಳೆ ಸಹಜವಾಗಿ ರಾಜಕೀಯ ವಿಚಾರ ವಿನಿಮಯ ಮಾಡಿಕೊಂಡೆವು

Vijaya Karnataka Web 8 May 2019, 9:27 pm
ಮೈಸೂರು: ರಾಜ್ಯ ಜೆಡಿಎಸ್ ಅಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಭೇಟಿ ಮಾಡಿ ಮಾತುಕತೆ ನಡೆಸಿರುವುದಕ್ಕೆ ರಾಜಕೀಯವಾಗಿ ವಿಶೇಷವಾದ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.
Vijaya Karnataka Web ಶ್ರೀನಿವಾಸ ಪ್ರಸಾದ್‌
ಶ್ರೀನಿವಾಸ ಪ್ರಸಾದ್‌


ನಾನು ಹಾಗೂ ವಿಶ್ವನಾಥ್ 45 ವರ್ಷಗಳಿಂದ ಸ್ನೇಹಿತರು. ಚುನಾವಣೆ ಸಂದರ್ಭದಲ್ಲಿ ಭೇಟಿ ಮಾಡಿರಲಿಲ್ಲ. ರಾಜಕೀಯವಾಗಿ ಬೇರೆಯಾಗಿದ್ದರೂ ವಿಶ್ವಾಸಕ್ಕೆ ಧಕ್ಕೆ ಆಗಿಲ್ಲ.
ಮಾತುಕತೆ ವೇಳೆ ಸಹಜವಾಗಿ ರಾಜಕೀಯ ವಿಚಾರ ವಿನಿಮಯ ಮಾಡಿಕೊಂಡೆವು ಎಂದು ಶ್ರೀನಿವಾಸಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಮಾತುಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಇದು ಅವರ ಪಕ್ಷದ ಆಂತರಿಕ ವಿಚಾರ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಏನು ಮಾತಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಜೆಡಿಎಸ್ ಮತಗಳು ಬಿಜೆಪಿಗೆ ಹೋಗಿವೆ ಅಂತ ಸಚಿವ ಜಿ.ಟಿ.ದೇವೇಗೌಡರೇ ಹೇಳಿದ್ದಾರೆ. ಸಚಿವ ಸಾ.ರಾ.ಮಹೇಶ್ ಚುನಾವಣೆಗೂ ಮುನ್ನವೇ ತೊಂದರೆಯಾಗುತ್ತದೆ ಎಂದಿದ್ದರು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಂದು ಓಡಾಡಿದರೂ ದೋಸ್ತಿ ಪಕ್ಷಗಳ ಕಾರ್ಯಕರ್ತರು ಒಂದಾಗಲಿಲ್ಲ. ದೋಸ್ತಿ ವಿಚಾರವಾಗಿ ಕಾಂಗ್ರೆಸ್‌ನಲ್ಲೇ ಅಸಮಾಧಾನ ಇದೆ. ಈ ಬೆಳವಣಿಗೆಗಳಿಗೆ ದೋಸ್ತಿ ಪಕ್ಷಗಳೇ ಕಾರಣ. ಬಿಜೆಪಿ ಪಾತ್ರ ಏನೂ ಇಲ್ಲ ಎಂದು ಶ್ರೀನಿವಾಸ ಪ್ರಸಾದ್‌ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌