ಆ್ಯಪ್ನಗರ

ಮಂಡ್ಯದಲ್ಲಿ ಸುಮಲತಾ ಗೆಲುವಿನ ಹಿನ್ನೆಲೆ: ಸಂಭ್ರಮಾಚರಣೆ, ನೂಕು ನುಗ್ಗಲು, ಲಾಠಿ ಪ್ರಹಾರ

​ ನಿಷೇಧಾಜ್ಞೆ ಲೆಕ್ಕಿಸಿದೆ ಎಣಿಕೆ ಕೇಂದ್ರದತ್ತ ಧಾವಿಸಿದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸುಮಲತಾಗೆ ಜೈಕಾರ ಕೂಗುತ್ತಿದ್ದಾರೆ.

Vijaya Karnataka Web 23 May 2019, 3:28 pm
ಮಂಡ್ಯ: ದೇಶಾದ್ಯಂತ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಗೆಲುವಿನತ್ತ ದಾಪುಗಾಲಿಟ್ಟ ಹಿನ್ನೆಲೆಯಲ್ಲಿ ಅವರ ಬೆಂಬಲಿಗರ, ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ನಿಷೇಧಾಜ್ಞೆ ಲೆಕ್ಕಿಸಿದೆ ಎಣಿಕೆ ಕೇಂದ್ರದತ್ತ ಧಾವಿಸಿದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸುಮಲತಾಗೆ ಜೈಕಾರ ಕೂಗುತ್ತಿದ್ದಾರೆ.

ಬಿಜೆಪಿ ಮತ್ತು ರೈತ ಸಂಘದ ಬಾವುಟ ಹಿಡಿದು ಸಂಭ್ರಮಾಚರಣೆ ನಡೆಯುತ್ತಿದೆ.

ಲಾಠಿ ಪ್ರಹಾರ


ಮಂಡ್ಯದ ಎಣಿಕೆ ಕೇಂದ್ರದ ಬಳಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಕೈ ಕಾರ್ಯಕರ್ತರು ಮತ್ತು ದರ್ಶನ್, ಯಶ್ ಅಭಿಮಾನಿಗಳ ಸಡಗರ

ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸುಮಲತಾ ಅಂಬರೀಶ್, ಜೋಡೆತ್ತುಗಳ(ದರ್ಶನ್, ಯಶ್) ಅಭಿಮಾನಿಗಳು ಸುಮಲತಾ ಗೆಲುವಿನಿಂದ ಹರ್ಷಗೊಂಡು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ವಿಜಯೋತ್ಸವ ಆಚರಣೆ ಮಾಡಿದರು. ಯುವ ಮುಖಂಡರಾದ ಕೆಬಿಸಿ ಮಂಜು, ಕೆ.ಸಿ.ವಾಸು, ರಾಮಚಂದ್ರನಾಯಕ್, ಪೂಜಾರಿ ಶ್ರೀನಿವಾಸ್, ಆಸೀಫ್, ಖಾಸಿಂ, ಸಲ್ಲು, ವೆಂಕಟೇಶ್, ಆನಂದ್ ಮತ್ತಿತರರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ